ಉತ್ತರ ಪ್ರದೇಶದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೂ ತ್ರೇತಾ ಯುಗಕ್ಕೂ ಸಂಬಂಧವಿದೆಯಂತೆ. ಇದಕ್ಕೆ ಕಾರಣ ಇಲ್ಲಿ ಉರಿಯುತ್ತಿರುವ ಅಖಂಡ ಜ್ಯೋತಿ. ನಾವಿಂದು ಈ ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.
ಎಲ್ಲಿದೆ ಈ ದೇವಾಲಯ
ಗೋರಖ್ಪುರ್ ಎಂಬುದು ಉತ್ತರ ಪ್ರದೇಶದ ಈಶಾನ್ಯ ಭಾಗದಲ್ಲಿರುವ ರಪ್ತಿ ನದಿಯ ದಡದಲ್ಲಿದೆ. ಇದು ನೇಪಾಳ ಗಡಿಯ ಸಮೀಪದಲ್ಲಿದೆ, ರಾಜ್ಯದ ರಾಜಧಾನಿ ಲಕ್ನೋದಿಂದ 273 ಕಿಲೋಮೀಟರ್ ದೂರದಲ್ಲಿದೆ. ಗೋರಖ್ಪುರದ ಗೋರಖ್ನಾಥ್ ದೇವಾಲಯಕ್ಕೆ ಗುರು ಗೋರಖನಾಥನ ಹೆಸರನ್ನು ಇಡಲಾಗಿದೆ.
ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?
ದೇವಾಲಯವನ್ನು ನಾಶಮಾಡಲಾಗಿತ್ತು
PC: youtube
ದೇವಾಲಯದ ದಾಖಲೆಗಳಲ್ಲಿ ಗೋರಖ್ಪುರ ಗೋರಖ್ನಾಥ ದೇವಸ್ಥಾನದ ರಚನೆ ಮತ್ತು ಆಕಾರವು ಬಹಳ ಹಿಂದಿನ ಕಾಲಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ. ಸುಲ್ತಾನ ಮತ್ತು ಮೊಘಲ್ ಯುಗದ ಆಳ್ವಿಕೆಯಲ್ಲಿ ಈ ದೇವಾಲಯವನ್ನು ನಾಶಮಾಡಲು ಅನೇಕ ಪ್ರಯತ್ನಗಳು ನಡೆದವು. ಮೊದಲಿಗೆ ಅದು 14 ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಗೋರಖ್ನಾಥ ದೇವಸ್ಥಾನವನ್ನು ನಾಶಪಡಿಸಿದರೆ, ನಂತರ 18 ನೇ ಶತಮಾನದಲ್ಲಿ ಔರಂಗಜೇಬನ ಧಾರ್ಮಿಕ ಇಸ್ಲಾಮಿಕ್ ಆಡಳಿತಗಾರನಿಂದ ಇದನ್ನು ನಾಶಪಡಿಸಲಾಯಿತು.
ಬಿಳಿ ಅಮೃತಶಿಲೆಯ ಮೂರ್ತಿ
PC:Facebook
ಈ ದೇವಸ್ಥಾನದ ಅತ್ಯಂತ ಆಕರ್ಷಣೆಯ ವೈಶಿಷ್ಟ್ಯವೆಂದರೆ ಗೋರಖ್ನ ಬಿಳಿ ಅಮೃತಶಿಲೆಯ ಮೂರ್ತಿ. ಇಲ್ಲಿ ಶಿವನು ಧ್ಯಾನ ಮುದ್ರೆಯಲ್ಲಿರುವ ರೂಪದಲ್ಲಿ ಮೂರ್ತಿಯನ್ನು ಚಿತ್ರಿಸಲಾಗಿದೆ. ಚರಣ ಪಾದುಕವನ್ನು ಧ್ಯಾನ ಕೇಂದ್ರದ ಸಮೀಪದಲ್ಲೇ ಇರಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪ್ರತಿದಿನ ಪ್ರಾರ್ಥನೆ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತ್ತಾರೆ.
ಈ ವಾರಾಂತ್ಯದಲ್ಲಿ ಸಿಗೋ 3 ದಿನದ ರಜೆಯಲ್ಲಿ ಎಲ್ಲಿಗೆ ಹೋಗೋ ಪ್ಲ್ಯಾನ್ ಮಾಡಿದ್ದೀರಾ?
ಅಖಂಡ ಜ್ಯೋತಿ
ಗೋರಖ್ನಾಥ್ ದೇವಾಲಯದಲ್ಲಿರುವ ಅಖಂಡ ಜ್ಯೋತಿ ಇಲ್ಲಿನ ವಿಶೇಷತೆಗಳಲ್ಲೊಂದಾಗಿದೆ. ಇಲ್ಲಿನ ಜ್ಯೋತಿಯಿ ನಿರಂತರವಾಗಿ ತ್ರೇತಾಯುಗದಿಂದ ಉರಿಯುತ್ತಿದೆ ಎನ್ನಲಾಗುತ್ತದೆ. ಪ್ರತಿ ವರ್ಷ ಗೋರಖ್ನಾಥ ದೇವಸ್ಥಾನದಲ್ಲಿ ಮಕರ ಸಕ್ರಾಂತಿಯ ಹಬ್ಬವನ್ನು ಆಚರಿಸಲಾಗುತ್ತದೆ.
ಭೀಮ ಸರೋವರ
PC: Rkmishr15
ದೇವಸ್ಥಾನದ ಪೂರ್ವದಲ್ಲಿಭೀಮಸರೋವರ ಎಂಬ ಕೊಳವಿದೆ. ಈ ಕೊಳವು ಭಾರತದ ಎಲ್ಲಾ ತೀರ್ಥಯಾತ್ರೆಗಳ ಪವಿತ್ರ ನೀರನ್ನು ಹೊಂದಿದೆ. ಮಹಾಭಾರತ ಖ್ಯಾತಿಯ ಭೀಮನ ಕಥೆಗಳಲ್ಲಿ ಈ ಕೊಳವೂ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಈ ಕೊಳವನ್ನು ದೇವಾಲಯದ ಅಧಿಕಾರಿಗಳು ಬೋಟಿಂಗ್ ಸೈಟ್ ಆಗಿ ಪರಿವರ್ತಿಸಿದ್ದಾರೆ.
ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಗೆ ಹೋಗಿದ್ದೀರಾ?
ತಲುಪುವುದು ಹೇಗೆ?
ಗೋರಖ್ಪುರ್ ರೈಲ್ವೆ ಸಂಪರ್ಕದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಗೋರಖ್ಪುರ್ ರೈಲ್ವೆ ನಿಲ್ದಾಣವು ಈ ಪ್ರದೇಶದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
ಗೋರಖ್ಪುರ್ ಟೂರ್ಗಾಗಿ ರಸ್ತೆಗಳನ್ನು ಬಳಸುವುದನ್ನು ನೀವು ಯೋಚಿಸುತ್ತಿದ್ದರೆ, ಯಾವುದೇ ಆಶಯವಿಲ್ಲದೆ ಮುಂದುವರಿಯಿರಿ. ಗೋರಖಪುರದಲ್ಲಿ ಉತ್ತರಪ್ರದೇಶದ ಎಲ್ಲಾ ಪ್ರಮುಖ ನಗರಗಳಿಗೆ ನಿರಂತರವಾದ ರಸ್ತೆ ಸೌಲಭ್ಯವಿದೆ. ಈ ಸ್ಥಳದ ಮುಖ್ಯ ಬಸ್ ನಿಲ್ದಾಣವು ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿದೆ.