ನಾಲ್ಕು ಪುಣ್ಯಕ್ಷೇತ್ರ ಪ್ರವಾಸವನ್ನು ಚಾರ್ ಧಾಂ ಯಾತ್ರೆ ಎಂದು ಕರೆಯುತ್ತಾರೆ. ಅವುಗಳು ಯಾವುವು ಎಂದರೆ ಬದರಿನಾಥ, ದ್ವಾರಕೆ, ಪೂರಿ ಮತ್ತು ರಾಮೇಶ್ವರ. ಇಷ್ಟು ವಿಸೃತ ಪರೀಧಿಯಲ್ಲಿ ಇರುವುದೇ ಅತ್ಯಂತ ಪವಿತ್ರವಾದ ಸ್ಥಳ ಚಾರ್ ಧಾಂ. ಪ್ರವಾಸಿಗರು ಉತ್ತರಾಖಂಢದಲ್ಲಿನ ಚಾರ್ ಧಾಂ ಯಾತ್ರೆ ಸುಲಭವಾಗಿ ಮಾಡಬಹುದು. ಉತ್ತರಖಂಡದಲ್ಲಿನ ಚಾರ್ ಧಾಮ್ ಯಾತ್ರೆ ಎಂದರೆ, 4 ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನಗಳನ್ನು ಆಚರಿಸಿ ಆ ಪ್ರದೇಶಗಳಲ್ಲಿನ ದೇವತೆಗಳಿಗೆ ಪೂಜಿಸಿದರೆ ಮೋಕ್ಷ ಲಭಿಸುತ್ತದೆ ಎಂದು ನಂಬಲಾಗಿದೆ.
ಆ ನದಿಗಳು ಯಮುನಾದಲ್ಲಿ ಹುಟ್ಟಿ ಯಮುನೋತ್ರಿ, ಗಂಗದಲ್ಲಿ ಹುಟ್ಟಿದ ಗಂಗೋತ್ರಿ ಮಂದಾಕಿನಿ ಮೂಲವಾಗಿ ಕೇದಾರನಾಥ, ಅಲಕಾನಂದ ಸಮೀಪದಲ್ಲಿನ ಬದರಿನಾಥ. ಈ ನಾಲ್ಕು ಪವಿತ್ರವಾದುದು ಹಾಗು ಪುಣ್ಯ ನದಿಗಳು. ಅಲ್ಲಿನ ಪುಣ್ಯಕ್ಷೇತ್ರಗಳನ್ನು ಭೇಟಿ ಮಾಡಿ ತಮ್ಮ ಪಾಪಗಳಿಂದ ವಿಮುಕ್ತರನ್ನಾಗಿ ಮಾಡಿಕೊಂಡು ಮೋಕ್ಷವನ್ನು ಪಡೆಯಲು ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಶ್ರೀ ಮಹಾವಿಷ್ಣು ದೇವನಾಗಿ, ಮಂಜಿನಿಂದ ಕೂಡಿರುವ ನೀಲಕಂಠ ಶಿಖರದ ಮೇಲೆ ನೆಲೆಸಿದ್ದಾನೆ. ಇದನ್ನು ಹರಿದ್ವಾರದಿಂದ ಒಂದು ದಿನದ ಪ್ರವಾಸದಲ್ಲಿಯೂ ಕೂಡ ಸಂದರ್ಶಿಸಬಹುದು. ಈ ನಾಲ್ಕು ತೀರ್ಥಕ್ಷೇತ್ರವನ್ನು ದರ್ಶನ ಮಾಡಿಕೊಳ್ಳಬಹುದು. ಈ 4 ಕ್ಷೇತ್ರವನ್ನು ದರ್ಶನ ಮಾಡಿದರೆ ಮೋಕ್ಷ ನಿಮ್ಮ ಸ್ವಂತ! ಈ ದೇವಾಲಯಕ್ಕೆ ಹರಿದ್ವಾರ ಅಥವಾ ರಿಷಿಕೇಶ್ನಿಂದ ಜೋಷಿ ಮಠಕ್ಕೆ ತಲುಪಬೇಕು. ಸುಮಾರು 10 ರಿಂದ 12 ಗಂಟೆಗಳ ದೀರ್ಘವಾದ ಪ್ರಯಾಣ ಇದಾಗಿದೆ. ಬಸ್ಸುಗಳು ಬೆಳಗ್ಗೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೊರೆಯುತ್ತವೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಜೋಷಿ ಮಠದಿಂದ ಬದರಿನಾಥ್ಗೆ ಕೇವಲ 2 ಗಂಟೆಯ ಪ್ರಯಾಣ. ಒಂದೇ ದಾರಿಯಾದ್ದರಿಂದ ಕೆಲವು ಸಮಯಗಳ ಕಾಲ ಮಾತ್ರವೇ ಈ ಮಾರ್ಗದಲ್ಲಿ ಅನುಮತಿಯನ್ನು ನೀಡುತ್ತಾರೆ. ಸರೋವರ್ ಪೋರ್ಟಿಕೊ ಅಥವಾ ಗರ್ವಾಲ್ ಮಂಡಲ ವಿಕಾಸ ನಿಗಮ್ನಲ್ಲಿ ವಸತಿಯನ್ನು ಹೊಂದಬಹುದು.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಇಲ್ಲಿ ವಾಲಿ ಆಫ್ ಫ್ಲವರ್ಸ್ ಕೂಡ ನೋಡಬಹುದು. ಬಸ್ಸಿನಲ್ಲಿ ಜೋಷಿ ಮಠದಿಂದ ಗೋವಿಂದ ಘಾಟ್ವರೆಗೆ ಹೋಗುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭವಾಗುತ್ತದೆ. ಟ್ರೆಕ್ಕಿಂಗ್ ಪ್ರೇಮಿಗಳು ಇಲ್ಲಿ ಟ್ರೆಕ್ಕಿಂಗ್ಗೆ ತೆರಳಬಹುದಾಗಿದೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ನಾಲ್ಕು ಪುಣ್ಯ ಕ್ಷೇತ್ರಗಳ ಪ್ರವಾಸವನ್ನು ಚಾರ್ ಧಾಂ ಯಾತ್ರೆ ಎಂದು ಕರೆಯುತ್ತಾರೆ. ಅವುಗಳು ಯಾವುವು ಎಂದರೆ ಬದರಿನಾಥ, ದ್ವಾರಕ, ಪೂರಿ ಮತ್ತು ರಾಮೇಶ್ವರಂ. ಆದರೆ ಇಷ್ಟು ವಿಸೃತ ಪರಿಧಿಯಲ್ಲಿ ಪ್ರವಾಸ ಮಾಡದೇ ಇರುವವರು ಉತ್ತರಖಂಢದಲ್ಲಿನ ಚಾರ್ ಧಾಂ ಯಾತ್ರೆ ಸುಲಭವಾಗಿ ಮಾಡಬಹುದು.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಉತ್ತರಖಂಢದಲ್ಲಿನ ಚಾರ್ ಧಾಂ ಯಾತ್ರೆ ಎಂದರೆ, ನಾಲ್ಕು ಪವಿತ್ರವಾದ ನದಿಗಳು ಇರುವ ಪುಣ್ಯ ಸ್ಥಳವೇ ಆಗಿದೆ. ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಎಂದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಆ ನದಿಗಳು ಯಮುನಾದಲ್ಲಿ ಹುಟ್ಟಿದ ಯಮುನೋತ್ರಿ, ಗಂಗದಲ್ಲಿ ಹುಟ್ಟಿದ ಗಂಗೋತ್ರಿ, ಮಂದಾಕಿನಿ ಮೂಲವಾದ ಕೇದಾರನಾಥ, ಅಲಕಾನಂದದಲ್ಲಿರುವ ಬದರಿನಾಥ. ಈ ನಾಲ್ಕು ನದಿಗಳನ್ನು ದರ್ಶನ ಮಾಡಿದರೆ... ಮೋಕ್ಷ ಲಭಿಸುತ್ತದೆ. ಈ ಅದ್ಭುತವಾದ ದೇವಾಲಯಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಗಂಗೋತ್ರಿ ಪವಿತ್ರ ಗಂಗಾ ನದಿ ಹುಟ್ಟಿದ ಪ್ರದೇಶ. ಪ್ರತಿ ವರ್ಷ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಯಾತ್ರಿಕರು ಭೇಟಿ ನೀಡುತ್ತಾರೆ. ಏಪ್ರಿಲ್ನ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಅಕ್ಷಯ ತೃತೀಯದ ದಿನದಂದು ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿರುತ್ತದೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಈ ದಿನ ಮುಖ್ಯ ಮಠ ದೇವಾಲಯದಿಂದ ಮಾತ ಗಂಗಾ ದೇವಿಯನ್ನು ಒಂದು ಉತ್ಸವಕ್ಕೆ ತೆಗೆದುಕೊಂಡು ಬರುತ್ತಾರೆ. ಪ್ರತಿ ವರ್ಷ ದೀಪಾವಳಿ ಹಬ್ಬವಾದ ನಂತರ ಮಾತ ಗಂಗಾ ಮಾತೆಯನ್ನು ಮುಖ್ಯಮಠ ದೇವಾಲಯಕ್ಕೆ ತಲುಪಿಸುತ್ತಾರೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಗಂಗೋತ್ರಿ ದೇವಾಲಯವು ರಿಷಿಕೇಶ್ ನಿಂದ ಉತ್ತರಕಾಶಿಯ ಮೂಲಕ ಸೇರಿಕೊಳ್ಳಬಹುದು. ಬಸ್ಸು ಅಥವಾ ಜೀಪ್ಗಳು ದೊರೆಯುತ್ತವೆ. ವಸತಿ ಸೌಕರ್ಯವನ್ನು ಇತರ ಗೆಸ್ಟ್ ಹೌಸ್ನ ಮೂಲಕ ತೆಗೆದುಕೊಳ್ಳಬಹುದು.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಗಂಗೆ ಹುಟ್ಟಿದ ಗೋಮುಖ್ ಪ್ರದೇಶಕ್ಕೂ ಕೂಡ ಟ್ರೆಕ್ಕಿಂಗ್ಗೆ ತೆರಳಬಹುದು. ಆದರೆ ದಿನಕ್ಕೆ 6 ಗಂಟೆಗಳ ಕಾಲ ಟ್ರೆಕ್ಕಿಂಗ್ ಸತತ ಮೂರು ದಿನಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಯಮುನೋತ್ರಿ ಪ್ರದೇಶವು ಇತರ ಮೂರು ಪ್ರದೇಶಗಳಿಗಿಂತ ಕಡಿಮೆ ಅಭಿವೃದ್ಧಿಯನ್ನು ಹೊಂದಿದೆ. ಈ ಪ್ರದೇಶವು ಯಮುನಾ ನದಿ ಮೂಲಸ್ಥಾನಕ್ಕೆ ಸಮೀಪದಲ್ಲಿರುತ್ತದೆ. ತಾಜ್ ಮಹಲ್ ಪ್ರದೇಶದ ಸಮೀಪದಲ್ಲಿ ಪ್ರವಹಿಸುವ ಈ ನದಿ ಭಾರತ ದೇಶದಲ್ಲಿಯೇ 2 ನೇ ಪವಿತ್ರವಾದ ನದಿ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಯಮುನೋತ್ರಿ ದೇವಾಲಯವು ಹನುಮಾನ್ ಚಟ್ಟಿಗೆ 14 ಕಿ.ಮೀ ದೂರದಲ್ಲಿದೆ. ರಿಷಿಕೇಶ್ನಿಂದ 8 ಗಂಟೆ, ಮುಸ್ಸೂರಿ ಹಿಲ್ ಸ್ಟೇಷನ್ನಿಂದ 6 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಯಮುನೋತ್ರಿಯಲ್ಲಿ ರಾತ್ರಿ ತಂಗಿದ್ದರೆ ಸಾಯಂಕಾಲ ಹಾರತಿ ನೋಡಬಹುದು. ನಿವಾಸ ಅಥವಾ ವಸತಿ ದೇವಾಲಯ ಸಮೀಪ ಅಥವಾ ಜಾನಕಿ ಚಟ್ಟಿ, ಹನುಮಾನ್ ಚಟ್ಟಿಯಲ್ಲಿ ತೆಗೆದುಕೊಳ್ಳಬಹುದು.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಕೇದಾರನಾಥದಲ್ಲಿ ಶಿವ ಭಗವಾನನ ದೇವಾಲಯವಿದೆ. ದ್ವಾದಶ ಜ್ಯೋತಿರ್ಲಿಂಗದಲ್ಲಿ ಇದು ಪ್ರಧಾನವಾದುದು. ಚಾರ್ ಧಾಂನಲ್ಲಿ ಇದು ಅತ್ಯಂತ ಪ್ರಾಚೀನವಾದುದು. ಹಾಗಾಗಿಯೇ ಈ ಸ್ವಾಮಿ ದರ್ಶನ ಕೋರಿ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಈ ನಾಲ್ಕು ಪುಣ್ಯಕ್ಷೇತ್ರವನ್ನು ದರ್ಶಿಸಿದರೆ...ಮೋಕ್ಷ ನಿಮ್ಮ ಸ್ವಂತ!
ಬದರಿನಾಥ ದೇವಾಲಯವು ಚಾರ್ ಧಾಂ ಯಾತ್ರೆ ದೇವಾಲಯದಲ್ಲಿ ಪ್ರಸಿದ್ಧವಾದುದು. ಹಾಗೆಯೇ ಸುಲಭವಾಗಿ ಸೇರಿಕೊಳ್ಳಬಹುದು.