ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿರುವ ರೆಬಲ್ ಸ್ಟಾರ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ದೈವಾಧೀನರಾಗಿರುವ ಕಲಿಯುಗದ ಕರ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಿ ಎನ್ನುವುದು ನಿಮಗೆ ಗೊತ್ತೇ ಇದೆ. ಅಂಬರೀಶ್ ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದು. ಹಾಗಾದ್ರೆ ಅಂಬರೀಶ್ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯ ವಿಶೇಷತೆ ಏನು ಅನ್ನೋದನ್ನು ಇಲ್ಲಿ ತಿಳಿಯೋಣ.
ಸಕ್ಕರೆನಾಡು
ಮಂಡ್ಯ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದ್ದು, ಭಾರತದಲ್ಲೇ ಅತೀ ದೊಡ್ಡ ಕಬ್ಬು ಉತ್ಪಾದಿಸುವ ಪ್ರದೇಶಗಳಲ್ಲಿ ಒಂದಾಗಿದೆ. ಹೆಮಾವತಿ, ಕಾವೇರಿ, ಶಿಮ್ಷಾ ಮತ್ತು ಲೋಕಪಾವಾನಿ ಈ ನಾಲ್ಕು ನದಿಗಳು ಮಂಡ್ಯದ ಮೂಲಕ ಹಾದುಹೋಗುತ್ತವೆ. ಮಂಡ್ಯವನ್ನು 'ಸಕ್ಕರೆನಾಡು' ಎಂಬ ಉಪನಾಮದಿಂದ ಕರೆಯುತ್ತಾರೆ. ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿ ಅನೇಕ ದೇವಾಲಯಗಳು ಮತ್ತು ವನ್ಯಜೀವಿ ತಾಣಗಳನ್ನು ಭೇಟಿ ಮಾಡಬಹುದು.
ಹೊಸಪೇಟೆಯಲ್ಲಿನ ಕಾಂಚನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ
ಮಂಡ್ಯ ಹೆಸರು ಬಂದಿದ್ದು ಹೇಗೆ?
ದಂತಕಥೆಗಳ ಪ್ರಕಾರ, ಮಾಂಡವ್ಯ ಮುನಿ ಅಲ್ಲಿ ನೆಲೆಸಿದ್ದರಿಂದ ಈ ಊರಿಗೆ ಮಂಡ್ಯ ಎಂದು ಹೆಸರು ಬಂದಿತು ಎನ್ನಲಾಗುತ್ತದೆ. ಈ ಸ್ಥಳವನ್ನು ಗಂಗಾ ರಾಜವಂಶರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರಿಂದ ಆಳಲ್ಪಟ್ಟಿತ್ತು. ನಂತರ, ಇದು ಟಿಪ್ಪು ಸುಲ್ತಾನ್ನ ಕೈ ಸೇರಿ ಅಂತಿಮವಾಗಿ ಬ್ರಿಟೀಷರಿಂದ ಆಳಲ್ಪಟ್ಟಿತು. 1939 ರಲ್ಲಿ ಮಂಡ್ಯ ಜಿಲ್ಲೆಯನ್ನು ಆಡಳಿತಾತ್ಮಕ ಘಟಕವೆಂದು ಗುರುತಿಸಲಾಯಿತು. ದೇಶವು ಸ್ವಾತಂತ್ರ್ಯ ಪಡೆದ ನಂತರ, ಅದು ಅಧಿಕೃತವಾಗಿ ಕರ್ನಾಟಕ ರಾಜ್ಯದ ಜಿಲ್ಲೆಯಾಯಿತು.
ಸೌಮ್ಯಕೇಶ್ವರ ದೇವಸ್ಥಾನ
ನಾಗಮಂಗಲದಲ್ಲಿರುವ ಈ ಭವ್ಯವಾದ 12 ನೇ ಶತಮಾನದ ದೇವಾಲಯವು ಹೊಯ್ಸಳ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿದೆ ಮತ್ತು ಇದು ರಾಜವಂಶದ ವಾಸ್ತುಶೈಲಿಯಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಏಳು ಅಂತಸ್ಥಿನ ಎತ್ತರದ ಗೋಪುರವು ಹಿಂದೂ ದೇವಿ, ದೇವತೆಗಳ ಚಿತ್ರಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ಭಾರತದ ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಟ್ಟಿದೆ.
ಹನಿಮೂನ್ಗೆ ಹೊಟೇಲ್ ಬುಕ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಭೀಮೇಶ್ವರಿ ವನ್ಯಜೀವಿ ಧಾಮ
ಮಂಡ್ಯದಲ್ಲಿರುವ ಪ್ರಸಿದ್ಧ ಭೀಮೇಶ್ವರಿ ವನ್ಯಜೀವಿ ಧಾಮವು ಆನೆ, ಮೊಸಳೆಗಳು, ಮಂಗಗಳು, ಚಿರತೆಗಳು ಹೀಗೆ ಹಲವು ಪ್ರಾಣಿಗಳನ್ನು ಹೊಂದಿದೆ. ಹಲವು ವಿಧದ ಮೀನುಗಳು ನೀರಿನಲ್ಲಿನಲ್ಲಿವೆ, ಈ ಪ್ರದೇಶವು ಆಂಗ್ಲಿಂಗ್ಗೆ ಆದರ್ಶ ಸ್ಥಳವಾಗಿದೆ.
ಗಗನಚುಕ್ಕಿ, ಬರಚುಕ್ಕಿ
ನೀವು ಈ ಸ್ಥಳಕ್ಕೆ ಭೇಟಿ ನೀಡಿದಾಗ ಈ ಎರಡೂ ಜಲಪಾತಗಳನ್ನು ಭೇಟಿ ನೀಡಲೇಬೇಕು. ಮಳೆಗಾಲದಲ್ಲಿ ಕಾವೇರಿ ನದಿ ಸಂಪೂರ್ಣವಾಗಿ ರಭಸದಿಂದ ಹರಿಯುತ್ತಾಳೆ. ಗಗನಚುಕ್ಕಿ ಜಲಪಾತವು ಅದ್ಭುತ ನೋಟವನ್ನು ನೀಡುತ್ತದೆ. ಬರಾಚುಕ್ಕಿ ಜಲಪಾತವು 250 ಅಡಿಯಿಂದ ಧುಮ್ಮಿಕ್ಕಿ ಪ್ರಸಿದ್ಧವಾದ ನಯಾಗರಾ ಫಾಲ್ಸ್ ಅನ್ನು ಹೋಲುತ್ತವೆ.
ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ?
ಚೆಲುವನಾರಾಯಣ ದೇವಾಲಯ
PC: Philanthropist 1
ಚೆಲುವನಾರಾಯಣ ದೇವಾಲಯವು ಮೆಲ್ಕೋಟೆಯಲ್ಲಿದೆ ಮತ್ತು ವಿಷ್ಣು ದೇವರಿಗೆ ಅರ್ಪಿತವಾಗಿದೆ. ಇದು ಯಾದವಗಿರಿಯ ಕಲ್ಲಿನ ಬೆಟ್ಟಗಳ ಮೇಲೆ ನಿರ್ಮಿಸಲಾಗಿದೆ. ಅನೇಕ ಸ್ತಂಭಗಳನ್ನು ಅದ್ಭುತ ಕೆತ್ತನೆಗಳಿಂದ ಅಲಂಕರಿಸಲಾಗುತ್ತದೆ. ಪ್ರತಿಯೊಂದು ಬದಿಯೂ ವಿಭಿನ್ನ ಕೆತ್ತನೆಗಳನ್ನು ಒಳಗೊಂಡಿರುತ್ತದೆ. ದೇವಾಲಯವು ಸಾಮಾನ್ಯವಾಗಿ ಸುಮಾರು 5 ಗಂಟೆಗೆ ತೆರೆದಿರುತ್ತದೆ.
ಪಾಂಡವಪುರ
ಪಾಂಡವಪುರ ಮಹಾಭಾರತದೊಂದಿಗೆ ಸಂಬಂಧ ಹೊಂದಿದ್ದು, ಮಂಡ್ಯದಿಂದ 26 ಕಿ.ಮೀ ದೂರದಲ್ಲಿದೆ. ಇದು ಹೈದರ್ ಮತ್ತು ಟಿಪ್ಪು ಕಾಲದಲ್ಲಿ ಮಿಲಿಟರಿ ನಿಲ್ದಾಣವಾಗಿತ್ತು ಮತ್ತು ಅವರ ಫ್ರೆಂಚ್ ಸೈನಿಕರಿಗೆ ನೆಲೆಯಾಗಿತ್ತು. ಅದರ ದೊಡ್ಡ ಪ್ರಮಾಣದ ಸಕ್ಕರೆ ಕಾರ್ಖಾನೆಗೆ ಇದು ಈಗ ಮುಖ್ಯವಾಗಿದೆ. ಮೊದಲಿಗೆ, ಪಾಂಡವಪುರವನ್ನು ಹಿರೋಡೆ, ದಂಡು, ಮತ್ತು ಫ್ರೆಂಚ್ ರಾಕ್ಸ್ ಎಂದು ಕರೆಯಲಾಗುತ್ತಿತ್ತು.
ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.
ಕುಂತಿಬೆಟ್ಟಾ
ಪಾಂಡವಪುರದಿಂದ 2 ಕಿ.ಮೀ. ದೂರದಲ್ಲಿರುವ ಕುಂತಿಬೆಟ್ಟಾ ಒಂದು ಸಣ್ಣ ಬೆಟ್ಟವಾಗಿದ್ದು, ಗಡಿಪಾರಾದ ಪಾಂಡವ ಸಹೋದರರು ಮತ್ತು ಅವರ ತಾಯಿ ಕುಂತಿ ಇಲ್ಲಿ ಸ್ವಲ್ಪ ಸಮಯ ಕಳೆದರು ಎಂಬ ನಂಬಿಕೆಯಿಂದೆ ಹಾಗಾಗಿ ಈ ಬೆಟ್ಟವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಮದ್ದೂರು
ಮದ್ದೂರು ಪಟ್ಟಣವು ಮದ್ದೂರು ವಡೆಗೆ ಪ್ರಸಿದ್ಧವಾಗಿದೆ. ಇಲ್ಲಿನ ವಡೆಯನ್ನು ಸವಿಯುವುದಕ್ಕಾಗಿಯೇ ಪ್ರವಾಸಿಗರಿಗೆ ಮದ್ದೂರು ಒಂದು ಆಕರ್ಷಕವಾದ ನಿಲುಗಡೆಯಾಗಿದೆ.
ಗಾಯತ್ರಿ ತಪೋಭೂಮಿಯಲ್ಲಿ ಕುಳಿತು ಗಾಯತ್ರಿ ಮಂತ್ರವನ್ನೊಮ್ಮೆ ಜಪಿಸಿದ್ರೆ..
ಶಿವಪುರ
ಶಿವಪುರವು ಮದ್ದೂರಿನಿಂದ 1 ಕಿ.ಮೀ ದೂರದಲ್ಲಿದೆ. ಶಿವಪುರವು 1938 ರ ಏಪ್ರಿಲ್ 10 ರಿಂದ 12 ರ ವರೆಗೆ ಬ್ರಿಟಿಷ್ ಸರ್ಕಾರ ಹೇರಿದ ನಿಷೇಧದ ಆದೇಶದ ಹೊರತಾಗಿಯೂ ಸಾವಿರಾರು ಸ್ವಾತಂತ್ರ್ಯ ಯೋಧರು ಭಾರತೀಯ ತ್ರಿವರ್ಣವನ್ನು ಹಾರಿಸಿದ್ದ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿನ ಸ್ಮಾರಕವು ಭಾರತದ ಘನತೆಗೆ ಸರಳವಾಗಿದೆ, ಭಾರತದ ಸ್ವಾತಂತ್ರ್ಯಕ್ಕಾಗಿ ಆ ಶೌರ್ಯ ಯೋಧರಿಗೆ ಸೂಕ್ತ ಗೌರವವಾಗಿದೆ.
ತಲುಪುವುದು ಹೇಗೆ?
ಸಮೀಪದ ವಿಮಾನ ನಿಲ್ದಾಣ ಮೈಸೂರು ವಿಮಾನ ನಿಲ್ದಾಣ. ಇದು 38 ಕಿ.ಮೀ ದೂರದಲ್ಲಿದೆ. ಬೆಂಗಳೂರಿನ ವಿಮಾನ ನಿಲ್ದಾಣವು 92 ಕಿ.ಮೀ ದೂರದಲ್ಲಿದೆ.
ಈ ಸ್ಥಳವು ರೈಲು ನಿಲ್ದಾಣಗಳನ್ನು ಹೊಂದಿದೆ. ರಾಜ್ಯದಲ್ಲಿರುವ ಎಲ್ಲಾ ಪ್ರಮುಖ ನಗರಗಳಿಂದ ನೀವು ಸುಲಭವಾಗಿ ಮಂಡ್ಯ ನಿಲ್ದಾಣಕ್ಕೆ ರೈಲುಗಳನ್ನು ಪಡೆಯಬಹುದು.
ಬೆಂಗಳೂರಿನಿಂದ, ರಸ್ತೆಯ ಮೂಲಕ ಮಂಡ್ಯವನ್ನು ತಲುಪಲು ಸುಮಾರು 2 ರಿಂದ 2.5 ಗಂಟೆಗಳು ಬೇಕಾಗುತ್ತದೆ. ನೀವು NH 25 ರಸ್ತೆಯನ್ನು ತೆಗೆದುಕೊಂಡು ಅದನ್ನು ಅನುಸರಿಸಬೇಕು.