Search
  • Follow NativePlanet
Share
» »ಮಹಾತ್ಮರ ಈ ಪುಣ್ಯ ಭೂಮಿಗೆ ಹೋದರೆ ದೇಶಪ್ರೇಮ ಉಕ್ಕುವುದಂತೂ ಗ್ಯಾರಂಟಿ

ಮಹಾತ್ಮರ ಈ ಪುಣ್ಯ ಭೂಮಿಗೆ ಹೋದರೆ ದೇಶಪ್ರೇಮ ಉಕ್ಕುವುದಂತೂ ಗ್ಯಾರಂಟಿ

ಸ್ವಾತಂತ್ರ್ಯ ದಿನಾಚರಣೆಯಂದು ಸಾವ್ರರ್ತಿಕವಾಗಿ ರಜಾ ದಿನ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆ ವಾರದ ನಡುವೆ ಬಂದಿದೆ. ಈ ರಜಾ ದಿನವನ್ನು ಹಾಗೆಯೇ ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಮಾಡುವುದಕ್ಕಿಂತ . ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತಹ ಕೆಲವು ತಾಣಗಳಿಗೆ ಭೇಟಿ ನೀಡುವುದು ಉತ್ತಮವಲ್ಲವೆ. ಸ್ವಾತಂತ್ರ್ಯ ದಿನಾಚರಣೆಯಂದು ಇಂತಹ ದೇಶಭಕ್ತಿಯ ಸ್ಥಳಕ್ಕೆ ಹೋಗೋದರಿಂದ ನಿಮ್ಮಲ್ಲೂ ದೇಶಪ್ರೇಮ ಮೂಡುತ್ತದೆ. ನಿಮ್ಮ ಸ್ನೇಹಿತರ ಜೊತೆ ಸೇರಿ ಸ್ವಾತಂತ್ರ್ಯ ದಿನದಂದು ಇಂತಹ ಸ್ಥಳಗಳಿಗೆ ಹೋಗುವುದರಿಂದ ಒಂದು ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯವನ್ನು ಆಚರಿಸಿದಂತಾಗುತ್ತದೆ.

ಕೆಂಪು ಕೋಟೆ

ಕೆಂಪು ಕೋಟೆ

ನಾವು ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತನಾಡುವಾಗ, ನಮ್ಮ ಮನಸ್ಸಿಗೆ ಮೊದಲು ಬರುವುದು ದೆಹಲಿ. ದೆಹಲಿಯ ಕೆಂಪುಕೋಟೆ. ನಮ್ಮ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮೊದಲ ಸ್ವಾತಂತ್ರ್ಯ ದಿನ ಭಾಷಣವನ್ನು ನೀಡಿದ ಸ್ಥಳ ದೆಹಲಿ. ಇಂಡಿಯಾ ಗೇಟ್, ಕೆಂಪು ಕೋಟೆ, ರಾಜ್ ಘಾಟ್ ಮತ್ತು ಗಾಂಧಿ ಸ್ಮಾರಕಗಳಂತಹ ಭಾರತದ ಆಕರ್ಷಣೆಗಳು ಭಾರತದ ಸ್ವಾತಂತ್ರ್ಯ ಚಳುವಳಿಯ ನೆನಪುಗಳಾಗಿವೆ.

ಅಹಮದಾಬಾದ್

ಅಹಮದಾಬಾದ್

PC:Nichalp

ಭಾರತದ ಸ್ವಾತಂತ್ರ್ಯ ಚಳವಳಿಯ ಕೇಂದ್ರಗಳಲ್ಲಿ ಒಂದಾಗಿರುವ ಸಬರಮತಿ ಆಶ್ರಮ ಇರುವ ನಗರವೇ ಅಹಮದಾಬಾದ್ . ಸಬರಮತಿ ಆಶ್ರಮವು ಸಬರಮತಿ ನದಿಯ ದಡದಲ್ಲಿದೆ. ಅದನ್ನು ಸತ್ಯಾಗ್ರಹ ಆಶ್ರಮ ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ, ಮಹಾತ್ಮ ಗಾಂಧಿಯವರು ತಮ್ಮ ಸ್ವಾತಂತ್ರ್ಯವಾದಿ ಚಳುವಳಿ ಮತ್ತು ಸ್ವದೇಶಿ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳನ್ನು ಸೇರಲು ಕಾರ್ಯಕರ್ತರನ್ನು ಕರೆದರು. ಸ್ವಾತಂತ್ರ್ಯ ದಿನದಂದು ಈ ಸ್ಥಳದಲ್ಲಿದ್ದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಸಾರ್ವಭೌಮತ್ವಕ್ಕಾಗಿ ಹೋರಾಡಿದ ಆ ದಿನಗಳಲ್ಲಿ ನಿಮ್ಮನ್ನು ಸಂಪರ್ಕಿಸಬಹುದು.

 ಕೊಲ್ಕತ್ತಾ

ಕೊಲ್ಕತ್ತಾ

ಕೊಲ್ಕತ್ತಾವು ಇನ್ನೂ ವಸಾಹತುಶಾಹಿ ಮೋಡಿ ಹೊಂದಿದ್ದು, ಇದು ಅನೇಕ ದೇಶಪ್ರೇಮಿಗಳ ಭೂಮಿಯಾಗಿದೆ. ಸ್ವಾತಂತ್ರ್ಯ ದಿನದಂದು ಕೋಲ್ಕತ್ತಾದಲ್ಲಿ ವಾರಾಂತ್ಯದಲ್ಲಿ ವಿವಿಧ ಉತ್ಸವಗಳು ಮತ್ತು ಆಚರಣೆಗಳು ನಡೆಯುತ್ತವೆ. 15 ನೇ ಆಗಸ್ಟ್ ಇತರ ನಗರಗಳಂತೆ ಕೋಲ್ಕತ್ತಾದಲ್ಲಿ ಅಬ್ಬರದ ಸಂಬಂಧವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ ತನ್ನ ಧ್ವನಿಯನ್ನು ಎತ್ತಿಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಮೊದಲ ಬಂಡಾಯವನ್ನು ಪ್ರಾರಂಭಿಸಿದ್ದು ಕೋಲ್ಕತ್ತಾದಲ್ಲಿನ ಬ್ಯಾರಕ್ಪೋರ್ನಿಂದ.

ಅಲಹಾಬಾದ್

ಅಲಹಾಬಾದ್

PC:Gpdprince

ಸ್ವಾತಂತ್ರ್ಯ ದಿನಾಚರಣೆಯಂದು ಭೇಟಿನೀಡಲು ಸುಂದರವಾದ ಸ್ಥಳವೆಂದರೆ ಅಲಹಾಬಾದ್ ನ ಸಂಗಮ ನಗರ. ಈ ದೇಶಭಕ್ತಿಯ ಉತ್ಸವದ ಆಗಮನವನ್ನು ಗುರುತಿಸುವ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಿಂದ ನಗರದ ಮಾರುಕಟ್ಟೆಗಳು ತುಂಬಿವೆ. ಅಲಹಾಬಾದ್‌ನ ಚಂದ್ರಶೇಖರ್ ಆಜಾದ್ ಪಾರ್ಕ್ ಭಾರತೀಯ ಸ್ವಾತಂತ್ರ್ಯ ಚಳವಳಿಯೊಂದಿಗೆ ಉತ್ತಮ ಸಹಯೋಗವನ್ನು ಹೊಂದಿದೆ. ಈ ಉದ್ಯಾನವನವನ್ನು ಮೊದಲಿಗೆ ಆಲ್ಫ್ರೆಡ್ ಪಾರ್ಕ್ ಅಥವಾ ಕಂಪನಿ ಗಾರ್ಡನ್ ಎಂದು ಕರೆಯಲಾಗುತ್ತಿತ್ತು . ಈ ಸ್ಥಳದಲ್ಲಿ ಚಂದ್ರಶೇಖರ್ ಆಜಾದ್‌ ಬಂದನಕ್ಕೊಳಗಾಗುವ ಬದಲು ತನ್ನ ಕೊನೆಯ ಬುಲೆಟ್ ಅನ್ನು ಹೊಡೆದು ಪ್ರಾಣತ್ಯಾಗ ಮಾಡಿದ ಸ್ಥಳ ಇದಾಗಿದೆ.

ಮುಂಬೈ

ಮುಂಬೈ

ಮುಂಬೈನಲ್ಲಿ ಸ್ವಾತಂತ್ರ್ಯ ದಿನವು ಬಿಗಿಯಾದ ಭದ್ರತೆಗಳ ನಡುವೆ ಉತ್ಸಾಹಭರಿತ, ದೇಶಭಕ್ತಿಯ ಭಾವನೆಯಿಂದ ಆಚರಿಸಲ್ಪಡುತ್ತದೆ. ಸಾರ್ವಜನಿಕ ದಿನವು ಮೆರವಣಿಗೆಗಳು, ವಾಯು ಪ್ರದರ್ಶನಗಳು, ಬಾಣಬಿರುಸುಗಳು ಮತ್ತು ಸಂಗೀತ ಕಚೇರಿಗಳಂತಹ ಕಾರ್ಯಕ್ರಮಗಳನ್ನು ಹೊಂದಿರುತ್ತದೆ. ಮುಂಬೈಯಲ್ಲಿ ಹಲವಾರು ಸ್ಥಳಗಳನ್ನು ನೀವು ಕಾಣಬಹುದು, ಇದು ಭಾರತದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ನಿಮಗೆ ತಿಳಿಸುವಂತಾಗುತ್ತದೆ.
ಈ ಸ್ಥಳಗಳಲ್ಲಿ ಕೆಲವು ಐತಿಹಾಸಿಕ ಪ್ರಾಮುಖ್ಯತೆಗಳಿವೆ. ಹಾಗಾಗಿ ನೀವು ಇಂತಹ ಸ್ಥಳಗಳಲ್ಲಿರುವುದರ ಬಗ್ಗೆ ನಿಮಗೆ ಹೆಮ್ಮೆ ಮೂಡುವುದರಲ್ಲಿ ಸಂದೇಹವೇ ಇಲ್ಲ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+