ತಿರುತ್ತನಿಯನ್ನು ಮುರುಗ(ಸುಬ್ರಹ್ಮಣ್ಯ) ದೇವರ ಪುಣ್ಯ ಗ್ರಾಮ ಎನ್ನಲಾಗಿದೆ. ಈ ದೇವರ 6 ಹಿಂದೂ ದೇವಾಲಯಗಳ ಪೈಕಿ ಒಂದನ್ನು ಇಲ್ಲಿ ಕಾಣಬಹುದಾಗಿದೆ. ಈ ಗ್ರಾಮ ತವಿಳುನಾಡಿನ ತಿರುವಲ್ಲೂರ್ ಎಂಬಲ್ಲಿದೆ. ಇಲ್ಲಿರುವ ಸುಬ್ರಮಣ್ಯ ಸ್ವಾಮೀ ದೇವಸ್ಥಾನವು ಹೆಚ್ಚು ಜನಪ್ರಿಯಗೊಂಡಿದೆ ಮತ್ತು ಪ್ರತಿವರ್ಷ ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನಿಸರ್ಗ ಸೌಂದರ್ಯವನ್ನು ಪ್ರೀತಿಸುವವರಿಗೆ ಇಲ್ಲೊಂದು ಸಣ್ಣ ಆದರೂ ಸುಂದರವಾದ ನಂದಿ ನದಿಯು ಹರಿದಿದೆ. ಕುಮಾರ ತೀರ್ಥ ಅಥವಾ ಸರವಣ ಪೋಯ್ಕೈ ಎಂದು ಹೆಸರು ಪಡೆದಿರುವ ತೀರ್ಥ ಕೊಳ ಈ ಗ್ರಾಮದಲ್ಲಿದ್ದು, ಈ ತೀರ್ಥದಲ್ಲಿ ಔಷಧೀಯ/ಚಿಕಿತ್ಸಕ ಶಕ್ತಿಯ ಗುಣಗಳಿವೆ ಎನ್ನಲಾಗಿದೆ.
ತಿರುತ್ತನಿ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು :
ಮುರುಗ ದೇವ ರಾಕ್ಷಸರ ವಿರುದ್ದ ಯುದ್ಧದಲ್ಲಿ ಜಯಿಸಿದ 6 ಜಾಗಗಳಲ್ಲಿ ತಿರುತ್ತನಿಯೂ ಒಂದು ಎನ್ನಲಾಗಿದೆ. ಇನ್ನುಳಿದ 5 ಸ್ಥಳಗಳೆಂದರೆ, ಪಳನಿ ದಂಡಾಯುಧಪಾಣಿ ಸ್ವಾಮೀ ದೇವಸ್ಥಾನ, ತಿರುಚಂಡುರಿನ ಸೆಂಥಿಲ್ ದೇವಸ್ಥಾನ, ತಿರುಪರಮಕುಂದ್ರದ ಸುಬ್ರಮಣ್ಯ ದೇವಸ್ಥಾನ, ಸ್ವಾಮಿಮಲೈನ ಸ್ವಾಮಿ ನಾಥ ದೇವಸ್ಥಾನ, ಪಳಮುಧಿರ್ಚೋಲೈನ ಸುಬ್ರಮಣ್ಯ ಸ್ವಾಮಿ ದೇವಾಲಯ. ಸುಬ್ರಮಣ್ಯ ಸ್ವಾಮಿಯ ಆಶೀರ್ವಾದ ಪಡೆಯಲು ಈ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎಂದು ನಂಬಲಾಗಿದೆ.
ಸುಬ್ರಮಣ್ಯ ಸ್ವಾಮಿ ದೇವಾಲಯವಲ್ಲದೆ ಬೇರೆ ಪ್ರವಾಸಿ ಸ್ಥಳಗಳೂ ಕೂಡ ತಿರುತ್ತನಿಯಲ್ಲಿದೆ. ಸಂತಾನ ವೇಣುಗೋಪಾಲಪುರಂ ಇನ್ನೊಂದು ದೇವಾಲಯ/ ಧಾರ್ಮಿಕ ಕ್ಷೇತ್ರ. ಇಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತಾದಿಗಳು, ಪ್ರವಾಸಿಗರು ಸೇರುತ್ತಾರೆ.
ತಿರುತ್ತನಿ ವಾತಾವರಣ :
ಇಲ್ಲಿನ ವಾತಾವರಣ ಬಿಸಿ ಮತ್ತು ಉಷ್ಣ. ಚಳಿಗಾಲದಲ್ಲಿ ಈ ಸ್ಥಳ ಪ್ರವಾಸಿ ಯೋಗ್ಯ, ಸೆಪ್ಟೆಂಬರ್ ನಿಂದ ಮಾರ್ಚ್ ಇಲ್ಲಿ ಚಳಿಗಾಲ.
ತಿರುತ್ತನಿಗೆ ತಲುಪುವುದು ಹೇಗೆ ?
ತಿರುತ್ತನಿಗೆ ರೈಲು ಮತ್ತು ರಸ್ತೆ ಮಾರ್ಗಗಳು ಸುಗಮವಾಗಿದೆ. ಚನ್ನೈ, ತಿರುತ್ತನಿಗೆ ಹತ್ತಿರದ ರೈಲು ನಿಲ್ದಾಣ. ತಮಿಳುನಾಡಿನ ಇತರೆ ಮುಖ್ಯ ನಗರಗಳಿಂದ ಟ್ಯಾಕ್ಸಿ ಮತ್ತು ಬಸ್ಸಿನ ಇಲ್ಲಿಗೆ ಸುಲಭವಾಗಿ ತೆರಳಬಹುದು.