ಸುಬ್ರಮಣ್ಯ ದೇವಸ್ಥಾನ, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ನಡುವೆ ತಿರುತ್ತನಿ ಮುರುಗನ್ ದೇವಾಲಯ ಎಂದು ಹೆಸರುವಾಸಿಯಾಗಿದ್ದು, ಈ ಪ್ರದೇಶದ ಹಿಂದೂ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನ ತಮಿಳುನಾಡಿನ 6 ಜನಪ್ರಿಯ ಸುಬ್ರಮಣ್ಯ ದೇವಸ್ಥಾನಗಳ ಪೈಕಿ ಒಂದಾಗಿದೆ. ಇದನ್ನು ಅರುಪದೈವೀಡು ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಬೇಟೆಗಾರರ ಮಗಳಾದ ವಲ್ಲಿಯನ್ನು ಇಲ್ಲಿನ ದೇವ ಮದುವೆಯಾಗುತ್ತಾನೆ, ಆದ್ದರಿಂದ ಈ ಸ್ಥಳ ಹಿಂದೂ ಯಾತ್ರಾ ಸ್ಥಳವಾಗಿದೆ.
ಸುಬ್ರಮಣ್ಯ ದೇವಸ್ಥಾನವನ್ನು ಕಾಲಕ್ರಮೇಣ ಅನೇಕರು ಪೋಷಿಸಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ ಸ್ಥಳೀಯ ಆಡಳಿತಗಾರರು, ವಿಜಯನಗರ ಅರಸರು, ಜಮೀನ್ದಾರರು. ಈ ದೇವಾಲಯವನ್ನು ನಕ್ಕೀರರ್ ನ ಸಂಯೋಜನೆಗಳಾದ ತಿರುಮುರುಗಾತ್ರುಪ್ಪದೈನಲ್ಲಿ ಉಲ್ಲೇಖಿಸಲಾಗಿದೆ. ವರ್ಷದ 365 ದಿನದ ಸಂಕೇತವಾದ 365 ಮೆಟ್ಟಿಲುಗಳನ್ನು ಹತ್ತಿ ಈ ದೇವಸ್ಥಾನ ತಲುಪಬೇಕಾಗಿರುವುದು ವಿಶೇಷ.
ಇಲ್ಲಿ ಗಣಪತಿ ವಿಗ್ರಹವೂ ಇದೆ, ವಾಲಿಯ ತಂದೆಯೊಡನೆ ಯುದ್ಧದಲ್ಲಿ ಗೆಲ್ಲಲು ಮುರುಗನಿಗೆ ಗಣಪತಿಯು ಸಹಾಯ ಮಾಡಲು ಬಂದನು ಎಂದು ಕೂಡ ಹೇಳಲಾಗುತ್ತದೆ . ದೇವಸ್ಥಾನಕ್ಕೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು ಮತ್ತು ಇಲ್ಲಿ ಪ್ರತಿ ದಿನ ಪೂಜೆ ನಡೆಯುತ್ತದೆ.