ತಮಿಳುನಾಡಿನ ತಂಜಾವೂರಿನಿಂದ ಹದಿನೆಂಟು ಕಿ.ಮೀ ದೂರವಿರುವ ತಿಂಗಳೂರು ಕೈಲಾಸನಾಥರ್ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದ ಆವರಣದಲ್ಲಿ ಚಂದ್ರದೇವತೆಗೆ ಮುಡುಪಾಗಿರುವ ಗುಡಿಯೊಂದಿದೆ. ಪುರಾಣದ ಪ್ರಕಾರ ದಕ್ಷ ಪ್ರಜಾಪತಿಯ ಶಾಪದಿಂದ ಚಂದ್ರದೇವತೆಯನ್ನು ರಕ್ಷಿಸಿ ತಿಂಗಳೂರಿನಲ್ಲಿ ಸ್ಥಾಪಿಸಿದ್ದರಂತೆ. ಹಾಗೂ ತಮ್ಮ ಜಾತಕದಲ್ಲಿ ಚಂದ್ರನ ಸ್ಥಾನದ ದೋಷವಿರುವ ಜನರಿಗೆ ಸಹಾಯ ಮಾಡಲು ಆದೇಶಿಸಿದ್ದರಂತೆ. ಆ ಪ್ರಕಾರದಲ್ಲಿ ಜಾತಕದಲ್ಲಿ ಚಂದ್ರದೋಷವಿರುವ ಸಾವಿರಾರು ಜನರು ದೇಶ ವಿದೇಶಗಳಿಂದ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
ಧಾರ್ಮಿಕ ಮಹತ್ವ:
ಹಿಂದೂ ಪುರಾಣದ ಪ್ರಕಾರ ಜಗತ್ತಿನಲ್ಲಿರುವ ಒಂಭತ್ತು ನವಗ್ರಹ ಸ್ಥಳಗಳಲ್ಲಿ ಈ ದೇವಾಲಯವೂ ಒಂದಾಗಿರುವುದರಿಂದ ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ದೇವಾಲಯವು ಕಾವೇರಿ ನದಿಯು ಕವಲಾಗಿ ಮತ್ತೆ ಸೇರಿದಾಗ ಉಂಟಾದ ನಡುಗಡ್ಡೆಯಲ್ಲಿದೆ.
ತಲುಪುವ ಬಗೆ ಮತ್ತು ಪ್ರಯಾಣಿಸಬಹುದಾದ ಉತ್ತಮ ಸಮಯ
ತಿಂಗಳುರಿನಲ್ಲಿ ಯಾವುದೆ ವಿಮಾನ ಅಥವಾ ರೈಲು ನಿಲ್ದಾಣವಿಲ್ಲದಿದ್ದರೂ ರಸ್ತೆಯ ಮುಖಾಂತರ ಸುಲಭವಾಗಿ ತಲುಪಬಹುದು. ಹಲವು ನಗರಗಳಿಂದ ತಿಂಗಳೂರಿಗೆ ನಿರಂತರ ಸರ್ಕಾರಿ ಚಾಲಿತ ಬಸ್ ಸೌಲಭ್ಯ ಲಭ್ಯವಿರುತ್ತದೆ. ಇನ್ನೂ ಇಲ್ಲಿ ಪ್ರವಾಸ ಹೋಗಬಯಸುವಿರಾದರೆ ಚಳಿಗಾಲದ ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ತಿಂಗಳುಗಳು ಉತ್ತಮ ಅವಧಿಯಾಗಿರುತ್ತದೆ.