ಪನಮರತುಪಟ್ಟಿ ಕೆರೆಯು ನಿಸರ್ಗದತ್ತವಾದ ಕೊಳವಾಗಿದ್ದು ಪನಮರತುಪಟ್ಟಿ ಎಂಬ ಹಳ್ಳಿಯಲ್ಲಿದೆ. ಈ ಹಳ್ಳಿಯು ಸೇಲಂ ನ ಉಪನಗರ ವಾಗಿದ್ದು, ನಗರದ ಹಲವು ಭಾಗಗಳಿಗೆ ನೀರಿನ ಮೂಲವಾಗಿದೆ. ಮೆಟ್ಟೂರು (ನಾಲೆ) ಡ್ಯಾಮ್ ಕಟ್ಟುವ ಮೊದಲು ಈ ಕೆರೆಯೆ ನಗರಕ್ಕೆ ಮುಖ್ಯ ನೀರಿನ ಮೂಲವಾಗಿತ್ತು. ಈ ಕೊಳವು ತನ್ನ ಸಹಜ ಸುಂದರತೆಗೆ ಹೆಸರುವಾಸಿಯಾಗಿದ್ದು, ಪಕ್ಷಿ ವೀಕ್ಷಕರಿಂದ ವೇದಾಂತಗಳು ಎಂದು ಹೆಸರು ಪಡೆದಿದೆ. ಈ ಸರೋವರದಿಂದ ಉಕ್ಕಿ ಹರಿಯುವ ನೀರು ಇಲ್ಲಿನ ರೈತರಿಗೆ ಒಂದು ವರವಾಗಿದೆ.