ರುದ್ರಪ್ರಯಾಗ ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಪುರಾಣದಲ್ಲಿ ಪ್ರಸ್ತಾಪವಿರುವ ಹಲವಾರು ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದಾದ ಈ ಸ್ಥಳಕ್ಕೆ ಹಿಮಾಲಯದ ಬೃಹತ್ ಮುಚ್ಚಳವಿದೆ ಅರ್ಥಾತ್ ಸುತ್ತಲೂ ಆವರಿಸಿದೆ. ಈ ಅದ್ಭುತ ದೃಶ್ಯವನ್ನು ಈ ಸ್ಥಳಕ್ಕೆ ಭೇಟಿ ನೀಡಿದ ನಂತರವಷ್ಟೇ ಅನುಭವಿಸಬಹುದು. ಸುಂದರ ನಾಡು ರುದ್ರಪ್ರಯಾಗದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದು ಇಲ್ಲಿದೆ.
ರುದ್ರಪ್ರಯಾಗ ಉತ್ತರಖಂಡದ ಒಂದು ಸಣ್ಣ ಪಟ್ಟಣ. 'ರುದ್ರ', ಎಂಬ ಪದ ಹಿಂದೂ ದೇವತೆ, ಶಿವನ ಅವತಾರ ರುದ್ರ ಎಂಬ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹಿಂದೂ ಪುರಾಣದ ಪ್ರಕಾರ, ನಾರದ ಮುನಿಯು ಈ ಸ್ಥಳದಲ್ಲಿ ರುದ್ರನಿಂದ ಆಶೀರ್ವಾದ ಪಡೆದಿದ್ದನು ಎಂದು ಹೇಳಲಾಗುತ್ತದೆ. ರುದ್ರಪ್ರಯಾಗ ಈ ಮೊದಲು ಮೂರು ಜಿಲ್ಲೆಗಳಾದ, ಚಮೋಲಿ, ಪೌರಿ ಮತ್ತು ತೆಹ್ರಿ ಯ ಭಾಗವಾಗಿತ್ತು. ಇದನ್ನು 1997, ಸೆಪ್ಟೆಂಬರ್ 16 ರಲ್ಲಿ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಲಾಯಿತು. ಈ ಪಟ್ಟಣವು ಒಮ್ಮುಖವಾಗಿ ಹರಿಯುವ ಮಂದಾಕಿನಿ ಮತ್ತು ಅಲಕನಂದಾ ನದಿಗಳ ಮೇಲೆ ನೆಲೆಗೊಂಡಿದೆ.
ಪ್ರವಾಸಿಗರು, ರುದ್ರಪ್ರಯಾಗ ದೇವಾಲಯದ ಸಮೀಪದಲ್ಲಿರುವ ಜಗದಂಬಾ ದೇವಾಲಯಕ್ಕೂ ಭೇಟಿ ಮಾಡಬಹುದು. ಅಗಸ್ತ್ಯಮುನಿ ಪಟ್ಟಣದ, ಅಗಸ್ತೇಶ್ವರ ಮಹಾದೇವ ದೇವಾಲಯಕ್ಕೂ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಪುರಾಣದ ಪ್ರಕಾರ, ಅಗಸ್ತ್ಯಮುನಿ ಅನೇಕ ವರ್ಷಗಳ ಕಾಲ ಈ ಸ್ಥಳದಲ್ಲಿ ಧ್ಯಾನಮಾಡಿದ್ದರು ಎನ್ನಲಾಗುತ್ತದೆ.
ಡಿಯೋರಿಯಾ ತಾಲ್, ರುದ್ರಪ್ರಯಾಗದಲ್ಲಿ ಭೇಟಿ ಮಾಡಲೇ ಬೇಕಾದ ಒಂದು ಮೋಡಿಮಾಡುವ ಕೆರೆ. ಇದು ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿದೆ. ಈ ಸರೋವರದ ಚೌಕಂಬಾ ಶ್ರೇಣಿಗಳ ಜೊತೆಗೆ ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳ ರುದ್ರರಮಣೀಯ ಪ್ರತಿಫಲನಗಳ ನೋಟಗಳನ್ನು ಒದಗಿಸುತ್ತದೆ. ಪಕ್ಷಿವೀಕ್ಷಣೆ, ದೋಣಿ ವಿಹಾರ ಮತ್ತು ಆಂಗ್ಲಿಂಗ್ (ಗಾಳ ಹಾಕುವುದು) ಇಲ್ಲಿ ಅನುಭವಿಸವಹುದಾದಂತಹ ಜನಪ್ರಿಯ ಚಟುವಟಿಕೆಗಳು.
ಪ್ರವಾಸಿಗರು, ರುದ್ರಪ್ರಯಾಗದ ಒಂದು ಸಣ್ಣ ಗ್ರಾಮವಾದ ತ್ರಿಯುಗಿನಾರಾಯಣ್ ನಲ್ಲಿ ನಿರಂತರ ಉರಿಯುತ್ತಿರುವ ಜ್ವಾಲೆಯನ್ನು ಹೊಂದಿರುವ ಹವನ ಕುಂಡವನ್ನು ನೋಡಬಹುದು. ನಂಬಿಕೆಗಳ ಪ್ರಕಾರ, ಈ ಗ್ರಾಮದ ದೇವತೆ ಪಾರ್ವತಿಯು, ಈ ಹವನ ಕುಂಡದ ಅಗ್ನಿ ಸಾಕ್ಷಿಯಾಗಿ ಶಿವನನ್ನು ಮದುವೆಯಾದಳು. ಅಲ್ಲದೇ ಇದು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು.
ರುದ್ರಪ್ರಯಾಗದ ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ ಗುಪ್ತಕಾಶಿ, ಉಖಿಮಠ, ವಾಸುಕಿ ತಾಲ್, ಜಖೋಲಿ ಮತ್ತು ತುಂಗಾನಾಥ್ ಮೊದಲಾದವು. ಅಲ್ಲದೇ ಪ್ರವಾಸಿಗರು ಕಲಿಮಠ, ಕಾರ್ತಿಕ ಸ್ವಾಮಿ ದೇವಸ್ಥಾನ, ಇಂದ್ರಸಾನಿ, ಮಾನಸ ದೇವಿ ದೇವಾಲಯ, ಚಂದ್ರಶೀಲ, ಮಾ ಹರಿಯಾಲಿ ದೇವಿ ದೇವಸ್ಥಾನ, ಕೋಟೇಶ್ವರ ದೇವಸ್ಥಾನ ಮತ್ತು ಮದ್ ಮಹೇಶ್ವರಕ್ಕೂ ಹೋಗಬಹುದು.
ರುದ್ರಪ್ರಯಾಗ ಪಟ್ಟಣವು ಉತ್ತಮವಾದ ವಿಮಾನ, ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ಹವಾಮಾನವು ಅನುಕೂಲಕರವಾಗಿರುವುದರಿಂದ ಪ್ರವಾಸಿಗರು ಬೇಸಿಗೆಯಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಒಳ್ಳೆಯದು.