ಹಿಮಾಚಲ ಪ್ರದೇಶ್ ರಾಜ್ಯದ ನರಕಂದ ಪಟ್ಟಣದಲ್ಲಿರುವ ಜಲೋರಿ ಪಾಸ್ ಸಮುದ್ರ ಮಟ್ಟದಿಂದ ಸುಮಾರು 3500 ಮೀ.ಎತ್ತರದಲ್ಲಿದೆ. ನರಕಂದಾದಿಂದ 90 ಕಿ.ಮೀ.ದೂರದಲ್ಲಿರುವ ಈ ಸ್ಥಳಕ್ಕೆ ಹೋಗುವಾಗ ಕುಲ್ಲು ಕಣೆವೆ ಮೂಲಕ ಹಾದು ಹೋಗುವಾಗ ಲೂಹ್ರಿ, ಅನಿ ಹಾಗೂ ಖನಾಗ್ ಪ್ರದೇಶಗಳನ್ನು ದಾಟುವಾಗ ಪ್ರಕೃತಿಯ ಸೌಂದರ್ಯವನ್ನು ಇಲ್ಲಿ ಕಾಣಬಹುದು. ಹಸಿರು ಕಾನನವನ್ನು ದಾಟುವಾಗ ಸಿಗುವ ಸರೋಲ್ಸರ್ ಸರೋವರಕ್ಕೆ ಇಲ್ಲಿಂದ 30 ನಿಮಿಷಗಳಲ್ಲಿ ನಡೆದು ಹೋಗಬಹುದು.
ಹೀಗೆ ಹಾದು ಹೋಗುವಾಗ ಬಂಜಾರ ಕಣಿವೆಯಲ್ಲಿ ಸಿಗುವ ಶೃಂಗ ಋಷಿ ದೇವಸ್ಥಾನ ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇಲ್ಲಿಗೆ ಹೋಗುವ ಎಲ್ಲಾ ಭಕ್ತರು ಕಾಡಿನಲ್ಲಿ ಸಿಗುವ 'ಪಿಂಡಿ' ಎಂಬ ಪವಿತ್ರ ಕಲ್ಲನ್ನು ಈ ದೇವಸ್ಥಾನಕ್ಕೆ ಪ್ರತಿಯೊಬ್ಬರೂ ತರಲೇ ಬೇಕೆಂಬ ನಂಬಿಕೆ ಇದೆ.
ರಾಂಪುರ, ಸಿಮ್ಲಾ, ಹಾಗೂ ಕಿನ್ನೌರ್, ಈ ಪ್ರದೇಶಗಳು ಕುಲ್ಲು ಕಣಿವೆಯನ್ನು ಹಾದು ಹೋಗುವಾಗ ಸಿಗುತ್ತವೆ. ಶಿಮ್ಲಾ ದಿಂದ ಮನಾಲಿ ವರೆಗೂ ಈ ಮಾರ್ಗವಾಗಿ ಬೈಕ್ ನಲ್ಲಿ ಹೋಗುವ ಪ್ರವಾಸಿಗರು ಹೊಸ ಅನುಭವವನ್ನು ಕಾಣುತ್ತಾರೆ.