ಪಂಚರಥಗಳು ಅಥವಾ ಐದು ರಥಗಳು 7ನೇಯ ಶತಮಾನದ ರಚನೆಗಳಾಗಿವೆ. ಇವು ಭಾರತೀಯ ಏಕಶಿಲಾ ವಿಗ್ರಹಗಳ ಪರಂಪರೆಗೆ ಒಂದು ಅದ್ಭುತ ನಿದರ್ಶನವಾಗಿ ನಿಂತಿವೆ. ಸಮುದ್ರ ತೀರದ ದೇವಾಲಯದಂತೆ ಇದು ಸಹ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಒಂದನೆ ಮಹೇಂದ್ರವರ್ಮನ್ ಮತ್ತು ಅವನ ಉತ್ತರಾಧಿಕಾರಿಯಾದ ಒಂದನೆ ನರಸಿಂಹವರ್ಮನ್ರವರ ಅವಧಿಯಲ್ಲಿ ನಿರ್ಮಾಣಗೊಂಡ ಈ ರಚನೆಯು ಇಂದಿಗು ವಿಸ್ಮಯವನ್ನುಂಟು ಮಾಡುತ್ತದೆ. ಕೆಲವು ಭಾಗಗಳು ಪೂರ್ಣಗೊಂಡಿಲ್ಲ. ಈ ಪಂಚ ರಥಗಳ ನಿರ್ಮಾಣಕ್ಕೆ ಬಳಸಲಾದ ಶುದ್ಧವಾದ ಗ್ರಾನೈಟ್, ಈ ಸ್ಮಾರಕವನ್ನು ಸಮುದ್ರದಿಂದ ಬರುವ ಲವಣಾಂಶಭರಿತ ಮಾರುತಗಳಿಂದ ನಿರಂತರವಾಗಿ ಕಾಪಾಡುತ್ತವೆ. ಅಲ್ಲದೇ 13 ನೇ ಶತಮಾನದಲ್ಲಿ ಇಲ್ಲಿ ಉಂಟಾದ ವಿನಾಶಕಾರಿ ಸುನಾಮಿಯಿಂದ ಸಹ ಈ ಸ್ಮಾರಕವನ್ನು ರಕ್ಷಿಸಿದೆ ಎಂದು ಹೇಳಲಾಗುತ್ತದೆ.
ಈ ಸಂಕೀರ್ಣದಲ್ಲಿ ಐದು ಏಕಶಿಲಾ ದೇವಾಲಯಗಳಿವೆ. ಅವುಗಳನ್ನು ಪಂಚ ಪಾಂಡವರ ಮತ್ತು ದ್ರೌಪದಿಯ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ಸ್ಮಾರಕವು ದ್ರಾವಿಡ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಬಿಂಬಿಸುವ ಶ್ರೇಷ್ಠ ಸ್ಮಾರಕವಾಗಿ ಪರಿಗಣಿಸಲಾಗುತ್ತಿದೆ. ಹಾಗಾಗಿ ಇದು ಪ್ರವಾಸಿಗರ ಆಕರ್ಷಣೆಯ ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿದೆ.