ತ್ರಿಪ್ರಯರ್ ಶ್ರೀ ರಾಮ ದೇವಾಲಯವು ಕೊಡುಂಗಲ್ಲೂರಿನಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇದು ತ್ರಿಪ್ರಯರ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಕೊಡುಂಗಲ್ಲೂರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ. ಮಹಾ ವಿಷ್ಣುವಿನ ಏಳನೆಯ ಅವತಾರವಾದ ಶ್ರೀ ರಾಮನಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಹಲವಾರು ಪುರಾಣ ಕಥೆಗಳು ಮತ್ತು ದಂತ ಕಥೆಗಳು ಈ ಸುಂದರವಾದ ದೇವಾಲಯಗಳ ಸುತ್ತ ಸುತ್ತುತ್ತಿರುತ್ತದೆ. ದಂತಕಥೆಗಳ ಪ್ರಕಾರ ಈ ದೇವಾಲಯದಲ್ಲಿರುವ ವಿಗ್ರಹವು ಇಲ್ಲಿನ ಪಾಳೆಗಾರರಿಗೆ ಸಮುದ್ರ ತೀರದಲ್ಲಿ ದೊರೆತಿದ್ದಂತೆ. ಈ ವಿಗ್ರಹವು ಬ್ರಹ್ಮ , ವಿಷ್ಣು ಮತ್ತು ಮಹೇಶ್ವರ ಅಂಶವನ್ನು ಒಳಗೊಂಡಿದೆಯಂತೆ. ಹಾಗಾಗಿ ಇದನ್ನು ತ್ರಿಮೂರ್ತಿಗಳ ಅಪರಾವತಾರವೆಂದು ಪರಿಗಣಿಸಿ ಪೂಜಿಸಲಾಗುತ್ತಿದೆ.
ಈ ದೇವಾಲಯವು ಇಲ್ಲಿ ನಡೆಯುವ ಅರಟ್ಟುಪುಳ ಪೂರಮ್ ಉತ್ಸವಕ್ಕಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ. ಈ ದೇವಾಲಯ ಸಂಕೀರ್ಣವು ಗರ್ಭಗುಡಿ ಮತ್ತು ರಾಮಾಯಣದ ದೃಶ್ಯಗಳನ್ನು , ನವಗ್ರಹಗಳಿರುವ ಮರದ ಕೆತ್ತನೆಗಳನ್ನು ಹಾಗು ಪ್ರಾಚೀನ ಭಿತ್ತಿ ಚಿತ್ರಕಲೆಗಳನ್ನು ಹೊಂದಿರುವ ನಮಸ್ಕಾರ ಮಂಟಪವನ್ನು ಹೊಂದಿದೆ. ತ್ರಿಪ್ರಿಯರ್ ಶ್ರೀ ರಾಮ ದೇವಾಲಯವು ಪ್ರತಿನಿತ್ಯವು ಕೂತು (ನಾಟಕ) ಎಂಬ ಸಾಂಪ್ರದಾಯಿಕ ಕಲೆಯ ಪ್ರದರ್ಶನವನ್ನು ಏರ್ಪಡಿಸುತ್ತಿರುತ್ತದೆ.