108 ಪಿಳ್ಳಯಾರ್ ಕೋವಿಲ್, ತಮಿಳು ನಾಡು ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿರುವ ಕಾರೈಕುಡಿ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಶಿವ -ಪಾರ್ವತಿಯರ ಪುತ್ರನಾದ ಗಣಪತಿಗಾಗಿ ನಿರ್ಮಿಸಲಾಗಿದೆ.
ಈ ದೇವಾಲಯವು ದೇಶ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಕಾರಣ ಈ ದೇವಾಲಯದಲ್ಲಿ 108 ಗಣಪತಿ ಮೂರ್ತಿಗಳಿವೆ. ಈ ವಿಶೇಷತೆಯಿಂದಾಗಿಯೆ ಹಲವಾರು ಭಕ್ತಾಧಿಗಳು ಈ ದೇವಾಲಯಕ್ಕೆ ಭೇಟಿಕೊಡುತ್ತಿರುತ್ತಾರೆ. ವಿಘ್ನ ವಿನಾಶಕ ಗಣಪತಿಯ ಆಶೀರ್ವಾದವನ್ನು ಪಡೆಯುವ ಸಲುವಾಗಿ ಇಲ್ಲಿನ ಸ್ಥಳೀಯ ಭಕ್ತಾಧಿಗಳು ಸಹ ಇಲ್ಲಿಗೆ ಅಪರಿಮಿತ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ನಂಬಿಕೆಗಳ ಪ್ರಕಾರ, ವಿಘ್ನೇಶ್ವರನನ್ನು ಆರಾಧಿಸುವುದರಿಂದ ನಮಗೆ ಎದುರಾಗುವ ಎಲ್ಲಾ ವಿಘ್ನಗಳು ದೂರವಾಗುತ್ತವೆಯಂತೆ. ಗಣಪತಿಯನ್ನು ಒಲಿಸಿಕೊಳ್ಳಲು ಭಕ್ತಾಧಿಗಳು ಇಲ್ಲಿ ದೇವರಿಗೆ "ಲಡ್ಡೂ" ಅಥವಾ "ಮೋದಕ"ವನ್ನು ಅರ್ಪಿಸುತ್ತಾರೆ.