ಪಟ್ಟಣದ ಮಧ್ಯ ಭಾಗದಲ್ಲಿರುವ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕಾಳಹಸ್ತಿಯಲ್ಲಿ ಸುಬ್ರಹ್ಮಣ್ಯಸ್ವಾಮಿಯೇ ಮೂಲ ದೇವರು. ದೇವಾಲಯಕ್ಕೆ ರಸ್ತೆ ಸಂಪರ್ಕ ಸುಗಮವಾಗಿದೆ. ವರ್ಷಕ್ಕೊಮ್ಮೆ ಅಪಾರ ಭಕ್ತಿ, ಶ್ರದ್ಧೆಗಳಿಂದ ಆಚರಿಸಲ್ಪಡುವ ಆದಿ ಕೀರ್ತಕ ಉತ್ಸವದಿಂದಲೇ ದೇವಸ್ಥಾನ ಚಿರಪರಿಚಿತ. 8 ದಿನಗಳ ಕಾಲ ನಡೆಯುವ ಉತ್ಸವದಲ್ಲಿ...
ಕಾಳಹಸ್ತಿ ದೇವಸ್ಥಾನ, ಹೆಸರೇ ಸೂಚಿಸುವಂತೆ ಆಂಧ್ರ ಪ್ರದೇಶದ ಶ್ರೀಕಾಳಹಸ್ತಿ ಪಟ್ಟಣದಲ್ಲಿ ನೆಲೆಗೊಂಡಿದ್ದು ಪ್ರಮುಖ ಶಿವ ದೇವಾಲಯಗಳ ಪೈಕಿ ಒಂದಾಗಿದೆ. ದೇವಾಲಯವು ತಿರುಪತಿಯಿಂದ 36 ಕಿ.ಮೀ ದೂರದಲ್ಲಿದೆ. ಪಂಚಭೂತ ದೇವಾಲಯಗಳನ್ನು ಪ್ರತಿನಿಧಿಸುವ ಪ್ರಸಿದ್ಧ ವಾಯು ಲಿಂಗ ಸ್ಥಳವೂ ಇದಾಗಿದ್ದು ಈ ದೇವಾಲಯದಲ್ಲಿ ಲಿಂಗ...
ಶ್ರೀಕಾಳಹಸ್ತಿಯ ಮತ್ತೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಸಹಸ್ರಲಿಂಗ ದೇವಸ್ಥಾನ ಪಟ್ಟಣದ ಪ್ರಮುಖ ದೇವಸ್ಥಾನಗಳಲ್ಲೊಂದು. ಬಹುಮುಖ್ಯವಾಗಿ ಕಾಡಿನ ಮಧ್ಯೆ ಸ್ಥಾಪಿತವಾಗಿರುವ ಈ ದೇವಸ್ಥಾನದ ಸುತ್ತ ನೈಸರ್ಗಿಕ ಸೊಬಗಿನ ರುದ್ರ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ದೇವಸ್ಥಾನದ ಹಿಂಭಾಗ ಬೆಟ್ಟದಿಂದ ಆವೃತವಾಗಿದೆ...
ಶ್ರೀಕಾಳಹಸ್ತಿ ದುರ್ಗಾ ದೇವಸ್ಥಾನವನ್ನು ಉತ್ತರ ಭಾಗದಲ್ಲಿ 800 ಮೀಟರ್ ಎತ್ತರದ ಚಿಕ್ಕ ಪರ್ವತದ ಮೇಲೆ ನಿರ್ಮಿಸಲಾಗಿದ್ದು ಅತ್ಯಂತ ಹಳೆಯ ದೇವಾಲಯವಾಗಿದೆ. ಪರ್ವತವನ್ನು ಏರಲು ವಿಸ್ತಾರವಾದ ದಾರಿಯನ್ನು ನಿರ್ಮಿಸಲಾಗಿದ್ದಲ್ಲದೆ ಸುಲಭವಾಗಿ ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದು ಪ್ರತಿ ವರ್ಷ ಸಾವಿರಾರು ಭಕ್ತರನ್ನು...
ಯುಗ (ಹಿಂದೂ ಧರ್ಮದ ಒಂದು ಗತಕಾಲದ ಅವಧಿ) ಕುಂಡವು ಭಾರದ್ವಾಜ ಕುಂಡ ತಿರ್ಥವೆಂದು ಪ್ರಸಿದ್ಧಿಯಾಗಿದ್ದು, ಸಮೃದ್ಧ ಹಸಿರಿನ ಬೆಟ್ಟಗಳ ಕಣಿವೆಯ ಮೂಲಕ ನೀರು ಹಾದು ಹೋಗುತ್ತದೆ. ಇದನ್ನು ಪವಿತ್ರ ನೀರು ಎಂದು ತಿಳಿಯಲಾಗಿದ್ದು, ಈ ಕುಂಡದಲ್ಲಿ ಸ್ನಾನ ಮಾಡಿದರೆ ದೇಹದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದೆಂಬುದು ಸ್ಥಳೀಯರ...
ಕಾಳಹಸ್ತಿಯ ಮತ್ತೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ದುರ್ಗಾಂಬಿಕಾ ದೇವಸ್ಥಾನ ಅತ್ಯಂತ ಪ್ರಾಚೀನವಾದುದು. ಹಿಂದೂ ಸಂಪ್ರದಾಯದ ಅದೆಷ್ಟೋ ದೇವತೆಯರ ಸನ್ನಿಧಿಯಂತೆ ದುರ್ಗಾಂಬಿಕೆ ದೇವಸ್ಥಾನವನ್ನು ಸಣ್ಣ ದಿಬ್ಬವೊಂದರ ಮೇಲೆ ಕಟ್ಟಲಾಗಿದೆ. ಕಾಳಹಸ್ತೀಶ್ವರ ದೇವಸ್ಥಾನದ ಉತ್ತರ ಭಾಗದಲ್ಲಿರುವ ದುರ್ಗಾಂಬಿಕೆ ದೇವಸ್ಥಾನವನ್ನು...
ಶ್ರೀಕಾಳಹಸ್ತಿ ಸಮೀಪದಲ್ಲೇ ಇರುವ ವೆಯಿಲಿಂಗಲ ಕೋನ ಜಲಪಾತಕ್ಕೆ ಪಟ್ಟಣದಿಂದ 8 ಕಿ.ಮೀ.ಗಳಷ್ಟೇ ಕ್ರಮಿಸಿದರೆ ಸಾಕು. ನೈಸರ್ಗಿಕ ಸೊಬಗನ್ನೇ ತನ್ನ ಒಡಲಲ್ಲಿಟ್ಟುಕೊಂಡಂತೆ ಭಾಸವಾಗುವ ಜಲಪಾತ, ಪ್ರವಾಸಿಗರಿಗೆ ಹತ್ತಿರವಾಗುತ್ತದೆ. ತೆಲುಗು ಮೂಲದಿಂದ ಹೆಸರು ಪಡೆದಿರುವ ಈ ಜಲಪಾತದ ಅರ್ಥ ಸಾವಿರ ಲಿಂಗಗಳಿರುವ ಕಣಿವೆ ಎಂಬುದು. ಜಲಪಾತದ...
ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಪ್ರಸನ್ನ ವರದರಾಜ ದೇವಸ್ಥಾನ ಕಾಳಹಸ್ತಿಯ ಮತ್ತೊಂದು ವಿಶೇಷ. ಶ್ರೀಕಾಳಹಸ್ತಿ ದೇವಸ್ಥಾನದ ಸಮೀಪದಲ್ಲೇ ಇರುವ ಪ್ರಸನ್ನ ವರದರಾಜಸ್ವಾಮಿ ದೇವಸ್ಥಾನವನ್ನು ಶ್ರೀಕಾಳಹಸ್ತೀಶ್ವರ ದೇವಸ್ಥಾನದ ಉಪ-ವಿಭಾಗವೆಂದೂ ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ದೇವಸ್ಥಾನದ ಜೀರ್ಣೋದ್ಧಾರ...
ಶಿವನು ನಾಲ್ಕು ದಿಕ್ಕುಗಳನ್ನೂ ದಿಟ್ಟಿಸುತ್ತಿರುವಂತೆ ಭಾಸವಾಗುವ ಚತುರ್ಮುಕೇಶ್ವರ ದೇವಸ್ಥಾನದ ಐತಿಹ್ಯ ರೋಚಕವಾಗಿದೆ. ಈ ದೇವಸ್ಥಾನದಲ್ಲಿ ತನ್ನ ಪಾಪಗಳ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬ್ರಹ್ಮ ಬರುತ್ತಾನೆ. ಪಾಪವೇನೋ ಕಳೆಯುತ್ತದೆ. ಆದರೆ, ಅಖಂಡ ಬ್ರಹ್ಮಾಂಡವನ್ನೇ ಸೃಷ್ಟಿಸಬಹುದಾದ ಆತನ ಅಗೋಚರ ಶಕ್ತಿಗಳೆಲ್ಲವೂ ಮಾಯವಾಗುತ್ತವೆ....
ದಕ್ಷಿಣ ಭಾರತದಲ್ಲೇ ಬೃಹತ್ ಗಾತ್ರದ ಶಿವಲಿಂಗವನ್ನು ಹೊಂದಿರುವ ಏಕೈಕ ದೇವಾಲಯ ಚಕ್ರೇಶ್ವರನ ಸನ್ನಿಧಿ. ಪಟ್ಟಣದ ಮಧ್ಯಭಾಗದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ದೇವಸ್ಥಾನ ಸಣ್ಣ ಬೆಟ್ಟದ ತಪ್ಪಲಲ್ಲಿದೆ. 1960 ರಲ್ಲಿ ರೈತನೊಬ್ಬ ಭೂಮಿ ಅಗೆಯುತ್ತಿದ್ದಾಗ ಗರ್ಭಗುಡಿ ಸಮೇತವಾದ ಚಕ್ರೇಶ್ವರ ಲಿಂಗ ಪತ್ತೆಯಾಯಿತು ಎಂಬುದು ಪ್ರತೀತಿ....
ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಧವಿಧವಾದ ಲಿಂಗಗಳದ್ದೇ ಕಾರುಬಾರು. ಪ್ರತಿ ಕ್ಷೇತ್ರವೂ ವೈಶಿಷ್ಟ್ಯಪೂರ್ಣವಾದ ಮಹತ್ವ ಹೊಂದಿರುವುದರಿಂದಲೇ ಇಲ್ಲಿಗೆ ಭೇಟಿ ನೀಡುವ ಭಕ್ತರು ಬರಿಗೈಯಲ್ಲಿ ವಾಪಸಾಗಲು ಸಾಧ್ಯವೇ ಇಲ್ಲ. ಕಲಂಕರಿ ಎಂಬ ವಿಶಿಷ್ಟ ಕಲೆಗೆ ಪ್ರಸಿದ್ಧಿಯಾದ ಕಾಳಹಸ್ತಿಯಲ್ಲಿ, ಕಾಡಿನ ಸೊಪ್ಪು, ಸೆದೆಗಳನ್ನು ಬಳಸಿ...