ಯುಗ (ಹಿಂದೂ ಧರ್ಮದ ಒಂದು ಗತಕಾಲದ ಅವಧಿ) ಕುಂಡವು ಭಾರದ್ವಾಜ ಕುಂಡ ತಿರ್ಥವೆಂದು ಪ್ರಸಿದ್ಧಿಯಾಗಿದ್ದು, ಸಮೃದ್ಧ ಹಸಿರಿನ ಬೆಟ್ಟಗಳ ಕಣಿವೆಯ ಮೂಲಕ ನೀರು ಹಾದು ಹೋಗುತ್ತದೆ. ಇದನ್ನು ಪವಿತ್ರ ನೀರು ಎಂದು ತಿಳಿಯಲಾಗಿದ್ದು, ಈ ಕುಂಡದಲ್ಲಿ ಸ್ನಾನ ಮಾಡಿದರೆ ದೇಹದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದೆಂಬುದು ಸ್ಥಳೀಯರ ನಂಬಿಕೆಯಾಗಿದೆ. ಶಿವ ಹಾಗೂ ತಪೊ ವಿನಾಯಕನ ಭವ್ಯ ಪ್ರತಿಮೆ ಇಲ್ಲಿದ್ದು ಮಹಾಶಿವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ಹಾಗೂ ಸ್ನಾನಗಳು ನಡೆಯುತ್ತವೆ. ಶಿವರಾತ್ರಿಯ ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪಟ್ಟಣದಿಂದ ಹತ್ತಿರದಲ್ಲೇ ಇರುವ ಇದು ಹೇರಳವಾದ ಹಸಿರು ಸಂಪತ್ತು ಮತ್ತು ನೀರನ್ನು ಹೊಂದಿದ್ದು ನಿಸರ್ಗ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.