ದಿನ್ಜೊಯ್ ಸತ್ರ ಅಸ್ಸಾಮಿಗಳ ವೈಷ್ಣವಿತೆ ಸಮುದಾಯದ ಸಾಮಾಜಿಕ-ಸಾಂಸ್ಕೃತಿಕ ಕೇಂದ್ರ. ಇದು ದಿಬ್ರುಗಡ್ನ ಚಬುವ ಪಟ್ಟಣಪ್ರದೇಶದಿಂದ 5 ಕಿಮೀ ದೂರದಲ್ಲಿದೆ. ವೈಷ್ಣವ ಪಂಥದ ಅನುಯಾಯಿಗಳು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಗೋಪಾಲ ಅತದೇವನ 12 ಮಂದಿ ಭಕ್ತರಲ್ಲಿ ಒಬ್ಬನಾದ ಅನಿರುದ್ಧ ದೇವನು ಈ ಸತ್ರವನ್ನು ಕಟ್ಟಿಸಿದನು. ಮೊದಲಿಗೆ ಈ ಸತ್ರವು ಉತ್ತರ ಲಕ್ಷ್ಮೀಪುರದ ಸಮೀಪದ ವಿಷ್ಣುಬಾಲಿಕಕುಂಶಿ ಹಳ್ಳಿಯಲ್ಲಿತ್ತು. ಮೊಮೊರಿಯ ಕ್ರಾಂತಿಯ ಸಂದರ್ಭದಲ್ಲಿ ದಿನ್ಜೊಯ್ ಸತ್ರಕ್ಕೆ ತೊಂದರೆಯಾಯಿತು. ಇದರ ಮುಖ್ಯಸ್ಥನ ಸಾವಿನ ನಂತರ ಈ ಸ್ಥಾನವು ತೆರವಾಗಿತ್ತು. ನಂತರ ಬರ್ಮಾದವರ ಆಕ್ರಮಣದಿಂದ ಕೂಡ ಈ ಸತ್ರಕ್ಕೆ ತೊಂದರೆಯಾಯಿತು.
ದಿನ್ಜೊಯ್ ಸತ್ರವು ಪ್ರಾರ್ಥನೆಗಳಿಗೆ ಮತ್ತು ವೈಷ್ಣವ ಮತದ ಆಚರಣೆಗಳ ಅನುಸರಣೆಗೆ ಪ್ರಸಿದ್ಧವಾದುದು. ಈ ಸತ್ರಕ್ಕೆ ಭೇಟಿ ನೀಡಿದಾಗ ನಿಶ್ಚಿತವಾಗಿ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಅನುಭೂತಿ ಉಂಟಾಗುತ್ತದೆ. ಇಂದು ಈ ಸತ್ರವು ಕೇವಲ ಧಾರ್ಮಿಕ ಸಂಸ್ಥೆ ಮಾತ್ರವಲ್ಲ ಬದಲಿಗೆ ಸಮಾಜವನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಕೇಂದ್ರವಾಗಿ ಕೂಡ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ.