ಠಾಕೂರ್ ಅಂಕುಲಚಂದ್ರರಿಂದ 1946ರಲ್ಲಿ ಈ ಆಶ್ರಮವು ಸ್ಥಾಪನೆಯಾಯಿತು. ಇದು ದಿಯೋಘರ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇಲ್ಲಿನ ಭಕ್ತಾದಿಗಳು ನಾಲ್ಕು ಮುಖ್ಯ ತತ್ವಗಳನ್ನು ಪಾಲಿಸುತ್ತಾರೆ. ಅವುಗಳೆಂದರೆ: ಕೃಷಿ, ಶಿಕ್ಷಣ, ಮದುವೆ ಮತ್ತು ಇತಿಹಾಸ. ಈ ಆಶ್ರಮವು ಆರ್ಯ ಧರ್ಮವನ್ನು ಭೋದಿಸುತ್ತದೆ. ಇಲ್ಲೊಂದು ವಸ್ತು ಸಂಗ್ರಹಾಲಯ ಮತ್ತು ಪ್ರಾಣಿಸಂಗ್ರಹಾಲಯವಿದೆ.
ಈ ಆಶ್ರಮವು ಹಲವು ಚಾರಿಟೆಬಲ್ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಜನರ ಉಪಯೋಗಕ್ಕಾಗಿ ತೆರೆದಿದೆ. ಸತ್ಸಂಗದ ಸದಸ್ಯರು ಪ್ರಕಟಣಾಲಯಗಳು ಮತ್ತು ಮುದ್ರಣಾಲಯಗಳನ್ನು ಕೂಡ ಸ್ಥಾಪಿಸಿದ್ದಾರೆ.