ಬೆಕಲ್ ಕೋಟೆ ಪಾಮ್-ಫ್ರಿಂಜ್ಡ್ ಕಡಲತೀರಗಳು ನಡುವೆ ಮುಗಿಯದ ಅಲೆಗಳ ಹೊಡೆತಕ್ಕೆ ಅಲುಗಾಡದೇ ಎತ್ತರದಲ್ಲಿ ನಿಂತಿದೆ. ಇತಿಹಾಸದ ಪ್ರಕಾರ ಅತ್ಯಂತ ಹಳೆಯದಾದ ಹಾಗೂ ಚಿರಕ್ಕಲ್ ರಾಜರ ಕಾಲದಲ್ಲಿ ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರ್ಮಿಸಲಾಗಿದೆ. ಈ ಕೋಟೆಯಲ್ಲಿನ ತಿರುವು ಮುರುವಾದ ಕಿರಿದಾದ...
ಬೆಕಲ್ ಬೀಚ್ ಬೆಕಲ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಒದ್ದೆಯಾದ ಮರಳಿನ ತಂಪು ಅದ್ಭುತ ಅನುಭವವನ್ನು ಕೊಡುತ್ತದೆ. ಈ ಬೀಚ್ ನಲ್ಲಿ ನೀವು ನಿಮ್ಮ ಇಡೀ ದಿನವನ್ನು ಆನಂದದಿಂದ ಕಳೆಯಬಹುದು. ಪ್ರಶಾಂತವಾದ ಹಿನ್ನೀರಿನಲ್ಲಿ ನೀವು ಈಜಾಡಬಹುದು, ಆಟವಾಡಬಹುದು. ಇಲ್ಲಿನ ಸಮೃದ್ಧ ತೆಂಗುಗಳ ಸೌಂದರ್ಯವನ್ನು ಸವಿಯುತ್ತ,...
ನಿತ್ಯಾನಂದಾಶ್ರಮ (ಹೆಚ್ಚಾಗಿ ಪ್ರಪಂಚಕ್ಕೆ ಅರಿಯದ ) ಸ್ವಾಮಿ ನಿತ್ಯಾನಂದ ನಿಂದ ಸ್ಥಾಪಿಸಲಾಗಿದೆ. ಈ ಆಶ್ರಮವು ಹೊಸದುರ್ಗ ಪಟ್ಟಣದ ದಕ್ಷಿಣಕ್ಕೆ 500 ಮೀಟರ್ ಎತ್ತರದ ಪರ್ವತದ ಮೇಲೆ ಗಂಭೀರವಾಗಿ ನಿಂತಿದೆ. ಈ ಸ್ಥಳವು ಮೊದಲು ಕೇವಲ ಒಂದು ಕಾಡಾಗಿತ್ತು. ನಂತರ ಸ್ವಾಮಿ, ಒಂದೇ ಲ್ಯಾಟರೈಟ್ (ಕೆಂಪು ಬಣ್ಣದ ಜೇಡಿಮಣ್ಣಿನ ಕಲ್ಲು)...
ಅನಂತಪುರ ದೇವಾಲಯವು ಕೇರಳದಲ್ಲಿರುವ ಕೆರೆಯ ಮಧ್ಯದ ಏಕೈಕ ದೇವಾಲಯ. ಪುರಾಣದ ಪ್ರಕಾರ ಈ ದೇವಾಲಯವು ಅನಂತ ಪದ್ಮನಾಭ ಸ್ವಾಮಿಯ ಮೂಲ ಸ್ಥಾನ. ಈ ದೇವಾಲಯದ ಕೆರೆಯಲ್ಲಿ ಒಂದು ಮೊಸಳೆಯನ್ನು ಕಾಣಬಹುದು. ಅಲ್ಲದೇ ಇಲ್ಲಿನ ಮೊಸಳೆಯು ಮರಣ ಹೊಂದಿದರೆ ಅತ್ಯಾಶ್ಚರ್ಯ ಎಂಬಂತೆ ಇಲ್ಲಿ ಇನ್ನೊಂದು ಮೊಸಳೆ ಬಂದು ಸೇರುತ್ತದೆ. ಅನಂತಪುರ...
ಚಂದ್ರಗಿರಿ ಕೋಟೆ ಚಂದ್ರಗಿರಿ ನದಿಯ ಪಕ್ಕದಲ್ಲಿಯೇ ಕಟ್ಟಲಾಗಿದೆ. ಇದೊಂದು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು ತೆಂಗು ಕಂಗುಗಳ ಸೊಬಗು ಸುತ್ತಲೂ ಆವರಿಸಿದೆ. ಅಲ್ಲದೇ ಅರೇಬಿಯನ್ ಸಮುದ್ರವೂ ಕೂಡಾ ಇಲ್ಲಿ ಅತ್ಯಂತ ರಮಣೀಯವಾಗಿ ಗೋಚರವಾಗುತ್ತದೆ. ಇಲ್ಲಿನ ಪಶ್ಚಿಮ ದಿಕ್ಕಿಗೆ ಬಂದರೆ ಅದ್ಭುತವಾದ ಸೂರ್ಯಾಸ್ತವನ್ನು ನೋಡಬಹುದು....
ಮಲ್ಲಿಕ್ ದೀನಾರ್ ಮಸೀದಿಯು ಹೆಚ್ಚಾಗಿ ಮಲ್ಲಿಕ್ ದೀನಾರ್ ಗ್ರ್ಯಾಂಡ್ ಜುಮ್ಮಾ ಮಸೀದಿ ಎಂದು ಕರೆಯಲ್ಪಡುತ್ತದೆ. ತಲಂಕರಾ ಎಂಬಲ್ಲಿ ಮಲ್ಲಿಕ್ ಇಬನ್ ದೀನಾರ್ ಎಂಬವನಿಂದ ಸ್ಥಾಪಿತವಾಯಿತು. ಇದನ್ನು ಸುಮಾರು ಕ್ರಿ.ಶ 642 ರ ಹೊತ್ತಿಗೆ ನಿರ್ಮಿಸಲಾಗಿದೆ. ನಂತರ 1809 ರಲ್ಲಿ ಇದರ ಜೀರ್ಣೋದ್ಧಾರ ಕಾರ್ಯ ನಡೆಯಿತು. ಇದು ಭಾರತದಲ್ಲಿನ...
ಹೌಸ್ ಬೋಟ್ ಪ್ರಯಾಣ ಬೆಕಲ್ ನ ಇನ್ನೊಂದು ಪ್ರಮುಖ ಆಕರ್ಷಣೆ. ಮಲಬಾರ್ ತೀರದಲ್ಲಿರುವ, ತಾಳೆ (ಪಾಮ್) ಗಿಡ ಗಳಿಂದ ಸುತ್ತುವರಿದ ಪ್ರಶಾಂತವಾದ ಹಿನ್ನೀರಿನಲ್ಲಿ ನೀವು ಪ್ರಯಾಣವನ್ನು ಮಾಡಬಹುದು. ಈ ಸೌಂದರ್ಯವನ್ನು ಹೊರತು ಪಡಿಸಿ ಇಲ್ಲಿನ ಹೌಸ್ ಬೋಟ್ ನಲ್ಲಿ ನೀವು ಕಾಲ ಕಳೆಯಬಹುದು. ನೀವು ಈ ಹೌಸ್ ಬೋಟ್ ಗೆ ಒಮ್ಮೆ ...
ಕಪೀಲ್ ಬೀಚ್ ಬೆಕಲ್ ಕೋಟೆ ಯಿಂದ ಸುಮಾರು 7 ಕೀ. ಮಿ ಅಂತರದಲ್ಲಿದೆ. ಇದೊಂದು ಪ್ರಮುಖವಾದ ಪ್ರವಾಸಿ ಸ್ಥಳವಾಗಿದೆ. ಈ ಬೀಚ್ ನ ಸುತ್ತಲಿನ ಪ್ರಶಾಂತವಾದ ಪರಿಸರದಿಂದಾಗಿ ಬೇರೆಲ್ಲ ಬೀಚ್ ಗಳಿಗಿಂತ ಇದು ತುಸು ವಿಭಿನ್ನವಾಗಿದೆ. ಬೆಕಲ್ ಪೋರ್ಟ್ ಅಥವಾ ಕೋಟೆಯನ್ನು ನೋಡಿದ ನಂತರ ಸಮುದ್ರಕ್ಕೆ ಸೂರ್ಯ ಮುತ್ತಿಡುತ್ತ ಮುಳುಗುವ...
ನೀಲೇಶ್ವರಂ, ಬೇಕಲ್ ನಿಂದ 12 ಕೀ.ಮಿ ದೂರದಲ್ಲಿ ಅಂತರದಲ್ಲಿದೆ. ನೀಲೇಶ್ವರಂ ಈ ಪದವು ’ನೀಲಕಂಠ ಹಾಗೂ ’ಈಶ್ವರ’ ಎಂಬ ಪದದಿಂದ ಉತ್ಪತ್ತಿಯಾಗಿದೆ. ಈ ಸ್ಥಳವು ಪುರಾತನ ಕಾಲದಲ್ಲಿ ನೀಲೇಶ್ವರ ರಾಜರ ಸಾಮ್ರಾಜ್ಯವಾಗಿತ್ತು ಎಂದು ಹೇಳಲಾಗುತ್ತದೆ. ಈ ಸ್ಥಳವು ಸಾಂಸ್ಕೃತಿಕ ಕೇಂದ್ರ ಎಂದು...