ನಿತ್ಯಾನಂದಾಶ್ರಮ (ಹೆಚ್ಚಾಗಿ ಪ್ರಪಂಚಕ್ಕೆ ಅರಿಯದ ) ಸ್ವಾಮಿ ನಿತ್ಯಾನಂದ ನಿಂದ ಸ್ಥಾಪಿಸಲಾಗಿದೆ. ಈ ಆಶ್ರಮವು ಹೊಸದುರ್ಗ ಪಟ್ಟಣದ ದಕ್ಷಿಣಕ್ಕೆ 500 ಮೀಟರ್ ಎತ್ತರದ ಪರ್ವತದ ಮೇಲೆ ಗಂಭೀರವಾಗಿ ನಿಂತಿದೆ. ಈ ಸ್ಥಳವು ಮೊದಲು ಕೇವಲ ಒಂದು ಕಾಡಾಗಿತ್ತು. ನಂತರ ಸ್ವಾಮಿ, ಒಂದೇ ಲ್ಯಾಟರೈಟ್ (ಕೆಂಪು ಬಣ್ಣದ ಜೇಡಿಮಣ್ಣಿನ ಕಲ್ಲು) ಕಲ್ಲಿನಿಂದ 45 ಗುಹೆಗಳನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈ ಗುಹೆಗಳು ಹೊಸದುರ್ಗ ಕೋಟೆಯ ಹತ್ತಿರದಲ್ಲಿದೆ. ಪ್ರತಿವರ್ಷ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ನಿತ್ಯಾನಂದ ಸ್ವಾಮಿ ಆಶ್ರಮವು ಧ್ಯಾನ ಮಾಡುವುದಕ್ಕೆ ಅತ್ಯಂತ ಒಳ್ಳೆಯ ಸ್ಥಳವಾಗಿದ್ದು ಸ್ವಾಮಿಯೇ ಧ್ಯಾನ ಮಾಡುವುದಕ್ಕಾಗಿ ಗುಹೆಗಳಲ್ಲಿ ಕುಳಿತುಕೊಳ್ಳುತ್ತಿದ್ದರು ಎನ್ನಲಾಗುತ್ತದೆ.
ಈ ಆಶ್ರಮದ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಸ್ವಾಮಿಯು ಧ್ಯಾನಕ್ಕೆ ಕುಳಿತ ಭಂಗಿಯ ಪೂರ್ಣ ಮೂರ್ತಿ ಇದೆ. ಈ ಮೂರ್ತಿಯು ಪಂಚಲೋಹಗಳಿಂದ ಮಾಡಲ್ವಟ್ಟಿದೆ. ಈ ನಿತ್ಯಾನಂದ ಸ್ವಾಮಿ ಆಶ್ರಮವು ಕಾಸರಗೋಡಿನಿಂದ 27 ಕೀ.ಮಿ ದೂರದಲ್ಲಿದೆ. ಈ ಆಶ್ರಮವು ಪ್ರಸಿದ್ಧ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಬೆಕಲ್ ಗೆ ಪ್ರವಾಸಕ್ಕಾಗಿ ನೀವು ಬಂದರೆ ಯಾವುದೇ ಕಾರಣಕ್ಕೂ ಈ ಆಶ್ರಮದಲ್ಲಿನ ಗುಹೆಗಳನ್ನು ನೋಡದೇ ಹಿಂತಿರುಗಬೇಡಿ. ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುವ ಈ ಸ್ಥಳವು ನೀವು ನೋಡಲೇ ಬೇಕಾದ ಸ್ಥಳವಾಗಿದೆ.