ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ ಕ್ರಾಂತಿಯ ಪರಿಣಾಮವೆಂದರೆ ಭಾರತ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಅತಿ ದೊಡ್ಡ ದೇಶವಾಯಿತು. ಆನಂದ್ ನಗರ ಗುಜರಾತಿನ ರಾಜಧಾನಿ ಗಾಂಧಿನಗರದಿಂದ ಸುಮಾರು 101 ಕಿ.ಮೀ ದೂರದಲ್ಲಿದೆ.
ಪಶ್ಚಿಮ ರೈಲ್ವೆಯಲ್ಲಿ ಸಾಗಿದರೆ ಆನಂದ್ ವಡೋದ್ರಾ ಮತ್ತು ಅಹಮ್ಮದಾಬಾದ್ ನಗರಗಳ ನಡುವೆ ಇದೆ. ಶ್ರೀ ರೋಕಾಡಿಯಾ ಹನುಮಾನಜೀ ದೇವಾಲಯ, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ವೀರ್ ವಿಠ್ಠಲ್ ಬಾಯಿ ಪಟೇಲ್ ಸ್ಮಾರಕ ಸ್ವಾಮಿ ನಾರಾಯಣ್ ದೇವಾಲಯ ಆನಂದ್ ನಗರದ ಕೆಲವು ಪ್ರಮುಖವಾದ ಪ್ರವಾಸಿ ಸ್ಥಳಗಳಾಗಿವೆ. ಆನಂದ್ ನಗರದಿಂದ ಈಶಾನ್ಯಕ್ಕೆ 43 ಕಿ.ಮೀ ದೂರದಲ್ಲಿ ರಾಂಚೋರ್ದೊಯಿ ದೊಕೊರ್ ದೇವಾಲಯ ಇದೆ.