ಕಾಳಿದಾಸ ಅಕಾಡೆಮಿ, ದೇವಾಲಯದ ಪಟ್ಟಣ ಉಜ್ಜಯಿನಿಯಲ್ಲಿ 1978 ರಲ್ಲಿ ಮಧ್ಯ ಪ್ರದೇಶ ಸರ್ಕಾರ ಸ್ಥಾಪಿಸಿದ ಒಂದು ಬಹು ಶಿಸ್ತಿನ ಸಂಸ್ಥೆಯಾಗಿದೆ. ಕವಿ ಕಾಳಿದಾಸ ಭಾರತೀಯ ಸಾಹಿತ್ಯದ ಇತಿಹಾಸದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದು ಈ ಸಂಸ್ಥೆಯು ಈ ಪ್ರಸಿದ್ಧ ವ್ಯಕ್ತಿಯ ಚಿತ್ರವನ್ನು ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಸಾಮಾನ್ಯ ಜನರಲ್ಲಿ ಈ ಮಹಾನ್ ಕವಿಯ ನೆನಪನ್ನು ಮರುಕಳಿಸುವಂತೆ ಮಾಡುವುದೇ ಸರಕಾರ ಈ ಸಂಸ್ಥೆಯನ್ನು ಸ್ಥಾಪಿಸಿದುದ ಉದ್ದೇಶ! ಈ ಅಕಾಡೆಮಿ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನೆಯಲ್ಲಿ ದೇಶದಲ್ಲಿಯೇ ಅತ್ಯುತ್ತಮವಾದವುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಅಕಾಡೆಮಿಯ ಪ್ರಮುಖ ಉದ್ದೇಶ, ಶೈಕ್ಷಣಿಕ ಬಿಂದುವಿನಿಂದ ಮಾತ್ರವಲ್ಲದೇ ಅಂತರಶಾಸ್ತ್ರೀಯ ದೃಷ್ಟಿಕೋನಗಳಿಂದಲೂ ಕೂಡ ಕಾಳಿದಾಸ ಸಾಹಿತ್ಯವನ್ನು ಕಂಡುಹಿಡಿಯುವುದಾಗಿದೆ. ಇತರ ವಿದೇಶಿ ಭಾಷೆಗಳಲ್ಲಿ ಪ್ರಕಟಿಸುವಂತಹ ಕಾಳಿದಾಸನ ಕೃತಿಗಳ ಅನುವಾದ ಮತ್ತು ದಸ್ತಾವೇಜನ್ನು(ಡಾಕ್ಯುಮೆಂಟೇಶನ್) ಗಳನ್ನು ಮಾಡುವುದು ಈ ಅಕಾಡೆಮಿಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ನಿಯಮಿತವಾಗಿ ಅಕಾಡೆಮಿಯಲ್ಲಿ ವಿಚಾರಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.