ಉಜ್ಜಯಿನಿಯ ಪವಿತ್ರ ನಗರದಲ್ಲಿರುವ ಅತ್ಯಂತ ಮಹತ್ವದ ದೇವಾಲಯ ಇದಾಗಿದೆ ಎಂದು ಇಲ್ಲಿನ ಜನತೆ ನಂಬುತ್ತಾರೆ. ಈ ದೇವಾಲಯ ಒಂದು ಕೊಳದ ಸಮೀದಲ್ಲಿದೆ. ಇಲ್ಲಿ ದೊಡ್ಡ ಆವರಣವಿದ್ದು ಇದರ ಪಕ್ಕದಲ್ಲಿ ಎತ್ತರದ ಗೋಡೆಗಳಿವೆ. ದೇವಾಲಯದ ಒಳಗಡೆ ಐದು ಹಂತಗಳಿವೆ. ಹಾಗೂ ಇವುಗಳಲ್ಲಿ ಒಂದು ಹಂತ ನೆಲದ ಅಡಿಯಲ್ಲಿದೆ. ಮಹಾಕಾಲೇಶ್ವರನಿಗೆ ಇಲ್ಲಿ ದಕ್ಷಿಣಾಮೂರ್ತಿ ಎಂಬ ಹೆಸರು ನೀಡಲಾಗಿದೆ. ಹಾಗೂ ಇಲ್ಲಿನ ವಿಗ್ರಹ ದಕ್ಷಿಣದ ಕಡೆ ಮುಖಮಾಡಿದೆ. ಇದು ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ನೀಡಲಾಗುವ ಪ್ರಸಾದವನ್ನು ಮತ್ತೊಮ್ಮೆ ಬಳಸಬಹುದು ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಹಾಗೂ ಇದು ಈ ದೇವಾಲಯದಲ್ಲಷ್ಟೇ ಸಾಧ್ಯ. ಇಲ್ಲಿನ ದೇವಾಲಯದ ವಿಗ್ರಹ ಓಂಕಾರೇಶ್ವರ ಶಿವನಾಗಿದೆ. ಹಾಗೂ ಇದು ಮಹಾಕಾಲ್ ದೇವತೆಯ ಸ್ವಲ್ಪ ಮೇಲ್ಭಾಗದ ಪವಿತ್ರ ಸ್ಥಳದಲ್ಲಿ ಇಡಲಾಗಿದೆ. ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಬೃಹತ್ ಜಾತ್ರೆಯನ್ನು ಆಯೋಜಿಸಲಾಗುತ್ತದೆ.