Search
  • Follow NativePlanet
Share
» »ಬೆಂಗಳೂರಿನಿಂದ ಬಂಡೀಪುರಕ್ಕೆ ವನ್ಯಜೀವಿ ಪ್ರವಾಸ

ಬೆಂಗಳೂರಿನಿಂದ ಬಂಡೀಪುರಕ್ಕೆ ವನ್ಯಜೀವಿ ಪ್ರವಾಸ

ದಕ್ಷಿಣ ಭಾರತದ ಅತ್ಯಂತ ಆಕರ್ಷಣೀಯ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡಿ, ಇದು ಬೆಂಗಳೂರಿನಿಂದ ಕೆಲವೇ ಗಂಟೆಗಳ ಕಾಲದಲ್ಲಿ ತಲುಪಬಹುದಾದ ಸ್ಥಳವಾಗಿದೆ. ಸಫಾರಿ ಸಮಯ ಮತ್ತು ದಾರಿಯಲ್ಲಿ ಭೇಟಿ ನೀಡುವ ಸ್ಥಳಗಳ ಬಗ್ಗೆ ಇನ್ನಷ್ಟು ತಿಳಿದುಕೊ

ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹುಲಿಗಳ ವಾಸಸ್ಥಾನ ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಬೇಧಗಳ ನೆಲೆಯಾಗಿದೆ ಅಲ್ಲದೆ ಇದು ಪಶ್ಚಿಮ ಘಟ್ಟಗಳಂತಹ ಭವ್ಯ ಪರ್ವತಗಳಿಂದ ಆವೃತವಾಗಿದೆ. ರಾಮನಗರ, ರಂಗನತಿಟ್ಟು, ಮತ್ತು ಕೊನೆಯದಾಗಿ ಬಂಡೀಪುರ ಪಕ್ಷಿ ವೀಕ್ಷಣೆಗೆ ಅದ್ಭುತವಾದ ಸ್ಥಳಗಳಾಗಿವೆ. ನೀವು ಹಿಂದೆಂದೂ ನೋಡಿರದ ಸಸ್ಯ ಮತ್ತು ಪ್ರಾಣಿಗಳನ್ನು ಅನ್ವೇಷಿಸಿ!

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾಗೂ ವನ್ಯಜೀವಿಗಳಿಗೆ ಮೀಸಲಾಗಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು 1974 ರ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಸ್ಥಾಪಿಸಲಾಯಿತು.ಹುಲಿಗಳಿಲ್ಲದೆ, ಬಂಡೀಪುರದ ಒಣ ಹಾಗೂ ದಟ್ಟವಾದ ಕಾಡುಗಳಲ್ಲಿ ಬೃಹತ್ ಸಂಖ್ಯೆಯ ವನ್ಯಜೀವಿಗಳು ಮತ್ತು ವಿವಿಧ ರೀತಿಯ ಸಸ್ಯ ಜಾತಿಗಳಿಗೆ ನೆಲೆಯಾಗಿದೆ, ಬಹಳ ಕಾಲದ ಹಿಂದೆ, ಬಂಡೀಪುರವು ಮೈಸೂರು ಮಹಾರಾಜರ ಖಾಸಗಿ ಬೇಟೆಯಾಡುವ ಸ್ಥಳವಾಗಿತ್ತು.

ಬಂಡಿಪುರದಲ್ಲಿ ಭಾರತೀಯ ಆನೆಗಳು, ಹುಲಿಗಳು, ಭಾರತೀಯ ರಾಕ್ ಹೆಬ್ಬಾವುಗಳು, ಗೌರ್ಸ್ ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳಿವೆ.ತೇಗ, ರೋಸ್ವುಡ್, ಶ್ರೀಗಂಧದ ಮರ ಮತ್ತು ಹೆಚ್ಚಿನ ಸಸ್ಯ ಸಸ್ಯ ಜಾತಿಗಳು!

ಅಲ್ಲದೆ ಇದು ವಿಶಾಲ ವ್ಯಾಪ್ತಿಯ ಪಕ್ಷಿಗಳ ನೆಲೆಯಾಗಿದೆ, ಎಲ್ಲವೂ ಸೇರಿ, ಇದು ಪ್ರಕೃತಿಯ ಪರಿಪೂರ್ಣವಾದ ತಾಣವಾಗಿದೆ.

ಬಂಡೀಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮೇ ವರೆಗೆ, ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ.

ಸಫಾರಿ ವಿವರಗಳು

ಶುಲ್ಕಗಳು: ರೂ. ಭಾರತೀಯ ನಾಗರಿಕರಿಗೆ 300 ರೂ(ಪ್ರತಿ ವ್ಯಕ್ತಿಗೆ). ವಿದೇಶಿ ಪ್ರವಾಸಿಗರಿಗೆ 1100 (ಪ್ರತಿ ವ್ಯಕ್ತಿಗೆ)

ಸಮಯಗಳು:

ಬೆಳಿಗ್ಗೆ 6.30 ರಿಂದ 8.30 ರವರೆಗೆ ಮತ್ತು ಸಾಯಂಕಾಲ 3.30 ರಿಂದ 5.30 ರವರೆಗೆ ಸಫಾರಿ ದಿನದ ಎರಡು ಬಾರಿ ಮಾತ್ರ ನಡೆಯುತ್ತದೆ.

ಬೆಂಗಳೂರಿನಿಂದ ಬಂಡೀಪುರಕ್ಕೆ ಮಾರ್ಗ

ಬೆಂಗಳೂರಿನಿಂದ ಬಂಡೀಪುರಕ್ಕೆ ಮಾರ್ಗ

ಮಾರ್ಗ1: ನೈಸ್ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ - ರಾಮನಗರ - ಚನ್ನಪಟ್ಟಣ - ಮಂಡ್ಯ (ಎನ್ ಹೆಚ್ 275) - ಮೈಸೂರು - ನಂಜನಗೂಡು (ಎನ್ ಹೆಚ್ 766) - ಎನ್ ಹೆಚ್ 181 - ಬಂಡೀಪುರ (230 ಕಿ.ಮೀ - 4 ಗಂ 30 ನಿ)

ಮಾರ್ಗ 2: ಸಿಎನ್ಆರ್ ರೋಡ್ ಅಂಡರ್ಪಾಸ್ / ಸಿ.ವಿ ರಾಮನ್ ರೋಡ್. - ಎನ್ ಹೆಚ್ 75 -ಎನ್ ಹೆಚ್ 150A ಎನ್ ಹೆಚ್ 766 - ಎನ್ ಹೆಚ್ 181 - ಬಂಡೀಪುರ (268 ಕಿ.ಮೀ - 5ಗಂ 15 ನಿ)

ಮಾರ್ಗ 3: ನೈಸ್ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ - ರಾ.ಹೆ. 209 - ಮಾಳವಳ್ಳಿ - ಮೈಸೂರು - ಎನ್ಹೆಚ್ 766 - ಎನ್ಹೆಚ್ 181 - ಬಂಡೀಪುರ (235 ಕಿಮೀ - 5 ಗಂ )

ದಾರಿಯಲ್ಲಿ ಭೇಟಿ ನೀಡಬಹುದಾದ ಕೆಲವು ಸ್ಥಳಗಳು ಇಲ್ಲಿವೆ.

ಬಿಡದಿ

ಬಿಡದಿ

PC: Rameshng

ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಗ್ರಾಮ ಬಿಡದಿ. ಬೆಂಗಳೂರಿನ ಎರಡು ಅಚ್ಚುಮೆಚ್ಚಿನ ಸ್ಥಳಗಳು ಬಿಡದಿ ಯಲ್ಲಿವೆ. ಒಂದು ಇನ್ನೊವೇಟಿವ್ ಫಿಲಂ ಸಿಟಿ ಇನ್ನೊಂದು ವಂಡರ್ಲಾ ಅಮ್ಯುಸ್ ಮೆಂಟ್ ಪಾರ್ಕ್ ಬೆಂಗಳೂರಿನ ಅಚ್ಚು ಮೆಚ್ಚಿನ ಈ ಎರಡು ಸ್ಥಳಗಳು ನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಬಿಡದಿಯಲ್ಲಿ ಒಮ್ಮೆ ಸವಿಯಲೇ ಬೇಕಾದುದೆಂದರೆ ಇಲ್ಲಿಯ ಪ್ರಸಿದ್ದ ತಟ್ಟೆ ಇಡ್ಲಿ.

ರಾಮನಗರದಲ್ಲಿ ಪಕ್ಷಿ ವೀಕ್ಷಣೆ

ರಾಮನಗರದಲ್ಲಿ ಪಕ್ಷಿ ವೀಕ್ಷಣೆ

PC: Vaibhavcho

ಟ್ರೆಕ್ಕಿಂಗ್ ಮತ್ತು ಬಂಡೆ ಹತ್ತುವ ಸಾಹಸಿಗರಿಗೆ ಮಾತ್ರವಲ್ಲದೆ ರಾಮನಗರದ ಕಡಿಮೆ ಪ್ರಚಾರದಲ್ಲಿರುವ ಬೆಟ್ಟಗಳು ಪಕ್ಷಿ ವೀಕ್ಷಣೆಗೂ ಹೆಸರುವಾಸಿಯಾಗಿದೆ. ಅವು ಯಾವುವೆಂದರೆ, ರಾವಣೇಶ್ವರ ಮತ್ತು ಹಂಡಿಗುಂಡಿ ಬೆಟ್ಟಗಳು, ಇವು ಅಸಂಖ್ಯಾತ ಲಾಂಗ್-ಬಿಲ್ಡ್ ವಲ್ಚರ್ಸ್, ಹಳದಿ-ಕತ್ತಿನ ಬುಲ್ಬುಲ್ಸ್, ಮತ್ತು ಈಜಿಪ್ಟ್ ವಲ್ಚರ್ಸ್ ಮುಂತಾದ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಪಕ್ಷಿಗಳ ಹೊರತಾಗಿ, ರಾಮನಗರವು ಹಲವಾರು ಹಿಮಕರಡಿಗಳಿಗೆ ನೆಲೆಯಾಗಿದೆ.

ಚನ್ನಪಟ್ಟಣದ ಬೊಂಬೆಗಳು

ಚನ್ನಪಟ್ಟಣದ ಬೊಂಬೆಗಳು

PC: Hari Prasad Nadig

ಬೆಂಗಳೂರಿನಿಂದ 60 ಕಿ. ಮೀ ದೂರದಲ್ಲಿರುವ ಚನ್ನಪಟ್ಟಣವು ಬೊಂಬೆಗಳಿಗೆ ಪ್ರಸಿದ್ದಿಯಾಗಿದೆ. ಇದನ್ನು ಕರ್ನಾಟಕದ ಗೊಂಬೆಗಳ ನಗರವೆಂದು ಕರೆಯಲಾಗುತ್ತದೆ. ಇಲ್ಲಿಯ ಕರಕುಶಲ ಪರಿಣಿತರು ಮರದಿಂದ ತಯಾರಿಸಿದ ಮೃದುವಾದ ಬೊಂಬೆಗಳು ಮುಖ್ಯವಾದುದಾಗಿದೆ. ಗೊಂಬೆಗಳನ್ನು ಮಾಡುವ ವಿಧಾನವು ಇಲ್ಲಿಯ ಪರಿಣಿತರಿಂದ ಮಾತ್ರ ಸಾಧ್ಯವೆಂದು ಹೇಳಲಾಗುತ್ತದೆ. ಈ ನಗರದಲ್ಲಿ ನೋಡಬಹುದಾದ ಅನೇಕ ದೇವಾಲಯಗಳೂ ಇವೆ.

ರಂಗನತಿಟ್ಟು ಪಕ್ಷಿಧಾಮ

ರಂಗನತಿಟ್ಟು ಪಕ್ಷಿಧಾಮ

PC: _paVan_

ರಂಗನತಿಟ್ಟು ಪಕ್ಷಿ ಧಾಮವು ಚನ್ನಪಟ್ಟಣದಿಂದ 70 ಕಿ.ಮೀ ದೂರದಲ್ಲಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಪಕ್ಷಿಧಾಮವಾಗಿದೆ. ವರ್ಣರಂಜಿತವಾದ ಕೊಕ್ಕರೆ, ಏಷ್ಯನ್ ಓಪನ್ ಬಿಲ್ ಕೊಕ್ಕರೆ, ಕಾಮನ್ ಸ್ಪೂನ್ ಬಿಲ್, ಬ್ಲಾಕ್ ಹೆಡೆಡ್ ಐಬಿಸ್ ಮುಂತಾದ 170 ಕ್ಕೂ ಹೆಚ್ಚು ಬಗೆಯ ಪಕ್ಷಿಗಳನ್ನು ಹೊಂದಿದೆ.

ರಂಗನತಿಟ್ಟಿ ಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್ ಮಧ್ಯಭಾಗದಿಂದಲೂ ಇದೆ, ಏಕೆಂದರೆ ಕೆಲವು ಋತುಗಳಲ್ಲಿ ಸುಮಾರು 40,000 ಹಕ್ಕಿಗಳು ಈ ಸ್ಥಳಕ್ಕೆ ವಲಸೆ ಹೋಗುತ್ತವೆ, ಅವುಗಳಲ್ಲಿ ಸೈಬೀರಿಯಾ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ಪಕ್ಷಿಗಳು ಸೇರಿವೆ!

ಕೃಷ್ಣರಾಜ ಸಾಗರ ಜಲಾಶಯ (ಕೆ.ಆರ್.ಎಸ್ ಅಣೆಕಟ್ಟು)

ಕೃಷ್ಣರಾಜ ಸಾಗರ ಜಲಾಶಯ (ಕೆ.ಆರ್.ಎಸ್ ಅಣೆಕಟ್ಟು)

PC: original photographer

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜ ಸಾಗರ, ಕೆ.ಆರ್.ಎಸ್ ಅಣೆಕಟ್ಟು ಎಂದು ಪ್ರಸಿದ್ಧವಾಗಿದೆ. ಇದು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಅಣೆಕಟ್ಟು ಮಂಡ್ಯ, ಬೆಂಗಳೂರು ಮತ್ತು ಮೈಸೂರುಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಹತ್ತಿರದಲ್ಲಿರುವ, ಬೃಂದಾವನ ಉದ್ಯಾನವನಗಳು ಒಂದು ಸುಂದರವಾದ ಸಸ್ಯಗಳ ಉದ್ಯಾನವನವಾಗಿದೆ, ಮಧ್ಯದಲ್ಲಿ ಸಂಗೀತ ಕಾರಂಜಿ ಇದೆ. ಉದ್ಯಾನದಲ್ಲಿರುವ ಸರೋವರದಲ್ಲಿ ಬೋಟಿಂಗ್ ಸಹ ಲಭ್ಯವಿದೆ.

ಮೈಸೂರ್ ಅಥವಾ ಮೈಸೂರು

ಮೈಸೂರ್ ಅಥವಾ ಮೈಸೂರು

PC: Ezhuttukari

ಕರ್ನಾಟಕದ ಸಾಂಸ್ಕೃತಿಕ ನಗರವೆಂದೇ ಕರೆಯಲ್ಪಡುವ ಮೈಸೂರು ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ. ಇಲ್ಲಿಯ ಕಲೆ ಮತ್ತು ಸಂಸ್ಕೃತಿ ಒಡೆಯರ್ ರಾಜಮನೆತನದವರು ಕೊಟ್ಟ ಕೊಡುಗೆಯಾಗಿದೆ. ಪ್ರಸಿದ್ದ ಮೈಸೂರು ಅರಮನೆ ಮಾತ್ರವಲ್ಲದೆ ಇಲ್ಲಿ ಇತರ ಭೇಟಿ ಕೊಡಬಹುದಾದ ಸ್ಥಳಗಳೆಂದರೆ ಸೈಂಟ್ ಫಿಲೋಮಿನ ಚರ್ಚ್, ಮೈಸೂರು ಝೂ, ಚಾಮುಂಡಿ ಬೆಟ್ಟ, ಲಲಿತ ಮಹಲ್, ಇತ್ಯಾದಿ. ಒಡೆಯರ ಕಾಲದಲ್ಲಿ ರಚಿಸಲಾದ ರಸ್ತೆ ಭಿತ್ತಿಚಿತ್ರಳು ಇತ್ಯಾದಿಗಳನ್ನು ಇಲ್ಲಿ ನೋಡಬಹುದು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತ ಭೇಟಿ ನೀಡುವ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಓದಿ

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತ ಭೇಟಿ ನೀಡುವ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಓದಿ

PC: Nikhilvrma

ಬಂಡೀಪುರ ರಾಷ್ಟ್ರೀಯ ಉದ್ಯಾನ ಮೈಸೂರು ನಗರದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪ್ರಶಾಂತವಾದ ರಾಷ್ಟ್ರೀಯ ಉದ್ಯಾನವನವಾಗಿದ್ದು ಪಶ್ಚಿಮ ಘಟ್ಟದ ​​ಪರ್ವತ ಶ್ರೇಣಿಗಳಿಂದ ಆವೃತವಾಗಿದೆ.

ಬೆಂಗಳೂರಿನಿಂದ ಬಂಡೀಪುರಕ್ಕೆ ಹಲವಾರು ಪ್ಯಾಕೇಜ್ ಪ್ರವಾಸಗಳು ಲಭ್ಯವಿದೆ.ಇಲ್ಲಿ ವಸತಿ ಸೌಕರ್ಯ ಮುಂಗಡವಾಗಿ ಬುಕ್ಕಿಂಗ್ ಮಾಡುವ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಗೌರ್ಗಳು, ನಾಲ್ಕು ಕೊಂಬಿನ ಹುಲ್ಲೆಗಳು, ಕಾಡು ಹಂದಿ ಮತ್ತು ಇನ್ನೂ ಹೆಚ್ಚಿನ ಪ್ರಾಣಿಗಳು ಈ ಉದ್ಯಾನವನದಲ್ಲಿ ವಾಸಿಸುತ್ತವೆ. ಕಾಡು ಕೋಳಿಗಳು, ಡ್ರೊಂಗೋಗಳು ಮತ್ತು ಹಸಿರು ಪಾರಿವಾಳಗಳು ಮುಂತಾದ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

PC: Jobycv2k3

ಬಂಡೀಪುರದ ಮುಖ್ಯ ಭಾಗದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ 1450 ಮೀ ಎತ್ತರದಲ್ಲಿದೆ. ಈ ಗುಡ್ಡಗಳ ಶಿಖರವು ವರ್ಷದಾದ್ಯಂತ ದಟ್ಟವಾದ ಮಂಜಿನಿಂದ ಆವರಿಸಿಕೊಂಡಿದೆ, ಆದ್ದರಿಂದ ಇದನ್ನು "ಹಿಮವದ್" (ಮಂಜು) ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ, ಕಾಡು ಆನೆಗಳು ಸಹ ಬೆಟ್ಟಗಳಲ್ಲಿ ಮೇಯುವಿಕೆ ಮಾಡುತ್ತಿರುವುದು ಕಂಡುಬರುತ್ತದೆ.

ಗೋಪಾಲಸ್ವಾಮಿ ದೇವಾಲಯವು ಕೃಷ್ಣ ದೇವರ ಗೌರವಾರ್ಥವಾಗಿ ಸ್ಥಾಪಿಸಲಾಗಿದೆ. ಈ ದೇವಾಲಯವು ಬೆಟ್ಟದ ಮೇಲೆ ಇದೆ. ಖಾಸಗಿ ವಾಹನದಲ್ಲಿ ಬೆಟ್ಟದ ಮೇಲೆ ಹೋಗಲಾಗುವುದಿಲ್ಲ. ಆದುದರಿಂದ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಕೇವಲ 40 ರೂಪಾಯಿಗಳಿಗೆ ಬೆಟ್ಟದ ಮೇಲೆ ಕೆಳಗೆ ಹೋಗಲು ಸೌಲಭ್ಯವಿದೆ.

ಮದುಮಲೈ ರಾಷ್ಟ್ರೀಯ ಉದ್ಯಾನವನ

ಮದುಮಲೈ ರಾಷ್ಟ್ರೀಯ ಉದ್ಯಾನವನ

PC: Bikash Das

ಮದುಮಲೈ ರಾಷ್ಟ್ರೀಯ ಉದ್ಯಾನವನವು ಬಂಡಿಪುರಕ್ಕೆ ಹತ್ತಿರದಲ್ಲಿದೆ, ನೀಲಗಿರಿ ಬೆಟ್ಟದ ವಾಯವ್ಯ ಭಾಗದಲ್ಲಿದೆ. ಮದುಮಲೈ, ಬಂಡಿಪುರ ಜೊತೆಗೆ, "ನೀಲಗಿರಿ ಬಯಾಸ್ಪಿಯರ್ ರಿಸರ್ವ್" ಎಂದು ಕರೆಯಲ್ಪಡುವ ಭಾರತದ ಅತಿದೊಡ್ಡ ಜೀವರಾಶಿಗಳ ಬಂಡಾರವಾಗಿದೆ.

ಇದನ್ನು ಟೈಗರ್ ರಿಸರ್ವ್ ಎಂದು ಘೋಷಿಸಲಾಗಿದೆ, ಆದರೆ ಆನೆಗಳು , ಬಂಗಾಳ ಟೈಗರ್, ಇಂಡಿಯನ್ ಲಿಯೋಪಾರ್ಡ್, ಗೋಲ್ಡನ್ ಜ್ಯಾಕಲ್ ಮುಂತಾದ ಹಲವು ಪ್ರಾಣಿಗಳನ್ನು ಹೊಂದಿದೆ. ತೆರೆದ ಜೀಪ್ ಗಳಲ್ಲಿ ರಾತ್ರಿಯ ಸಫಾರಿಗಳನ್ನು ಹೊಂದಿರುವ ಮಸಿನಗುಡಿ ಇಲ್ಲಿರುವ ಒಂದು ಶ್ರೇಣಿಯಲ್ಲಿದೆ. ಈ ರೀತಿಯ ಸಫಾರಿಯನ್ನು ಒದಗಿಸುವ ತಜ್ಞ ರಿಂದ ಸೇವೆಗಳನ್ನು ಒದಗಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X