ನಮ್ಮ ಭಾರತ ದೇಶದಲ್ಲಿ ಬದ್ರಿನಾಥ, ಪೂರಿ ಜಗನ್ನಾಥ, ರಾಮೇಶ್ವರ, ದ್ವಾರಕ ದೇವಾಲಯಗಳು ನಮ್ಮ ಭಾರತ ದೇಶದಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರಗಳು. ಈ 4 ಪುಣ್ಯ ಕ್ಷೇತ್ರಗಳನ್ನು ಸೇರಿ ಚಾರ್ ಧಾಮ ಎಂದು ಕರೆಯುತ್ತಾರೆ. ಶಂಕರಾಚಾರ್ಯರು ಈ 4 ಪುಣ್ಯಕ್ಷೇತ್ರಗಳನ್ನು ಚಾರ್ ಧಾಮ ಎಂಬ ಹೆಸರನ್ನು ಸೂಚಿಸಿದರು. ಶ್ರೀ ಕ್ರಷ್ಣ ಭಗವಾನನು ಶಿಲೆಯಾಗಿ ಮಾರ್ಪಾಟಾಗಿ ಇಂದಿಗೂ ಜಗನ್ನಾಥ ಮಂದಿರದಲ್ಲಿ ನೆಲೆಸಿದ್ದಾನೆ ಎಂದು ಭಕ್ತರ ಪ್ರಬಲವಾದ ನಂಬಿಕೆ. ಬೀಸುವ ಗಾಳಿಗೆ ವ್ಯತಿರೇಕವಾಗಿ ಬಾವುಟ, ನಗರದಿಂದ ಯಾವುದೇ ದಿಕ್ಕಿನಿಂದ ನೋಡಿದರು ಕೂಡ ಒಂದೇ ರೀತಿ ಕಾಣುವ ಶ್ರೀ ಕೃಷ್ಣನ ಸುದರ್ಶನ ಚಕ್ರ, ಪ್ರಕೃತಿ ನಿಯಮಕ್ಕೆ ವ್ಯತಿರೇಕವಾಗಿ ಪ್ರವಹಿಸುವ ಸಮುದ್ರದ ಅಲೆಗಳು ಹೀಗೆ ಇನ್ನು ಅನೇಕ ರಹಸ್ಯಗಳು ಈ ಶ್ರೀ ಕೃಷ್ಣ ದೇವಾಲಯದಲ್ಲಿದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ಮಹಿಮಾನ್ವಿತವಾದ ದೇವಾಲಯವು ಒಡಿಸ್ಸಾದ ಪೂರಿ ದೇವಾಲಯದಲ್ಲಿ ನೆಲೆಸಿರುವ ಜಗನ್ನಾಥ ದೇವಾಲಯದಲ್ಲಿ ಅನೇಕ ವಿಚಿತ್ರವನ್ನು ಕಾಣಬಹುದು. ಅಸಲಿಗೆ ಪೂರಿಯಲ್ಲಿ ಜಗನ್ನಾಥ ಮಂದಿರ ಹೇಗೆ ನಿರ್ಮಾಣವಾಯಿತು? ವಿಜ್ಞಾನಕ್ಕೂ ಕೂಡ ಸವಾಲನ್ನು ಎಸೆಯುತ್ತಿರುವ ಜಗನ್ನಾಥ ಮಂದಿರದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆಯೋಣ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಶ್ರೀ ಕೃಷ್ಣ ಭಗವಾನನು ತನ್ನ ಅವತಾರವನ್ನು ಬಿಟ್ಟ ನಂತರ ಆತನ ಶರೀರವನ್ನು ದಹನ ಮಾಡುತ್ತಾರೆ. ಎಷ್ಟೇ ದಹನ ಮಾಡಿದರು ಕೂಡ ಹೊಕ್ಕಳು ಇರುವ ಭಾಗ ಮಾತ್ರ ದಹನವಾಗುವುದಿಲ್ಲ. ಶ್ರೀ ಕೃಷ್ಣನ ಆ ಶರೀರದ ಹೊಕ್ಕಳ ಭಾಗವನ್ನು ಮಾತ್ರ ಸಮುದ್ರದಲ್ಲಿ ಲೀನಗೊಳಿಸಿದರಂತೆ. ಕೆಲವು ಕಾಲದ ನಂತರ ನೀಲಿ ವರ್ಣದಲ್ಲಿ ವಿಷ್ಣುವಿನ ಆಕಾರದಲ್ಲಿ ಶಿಲ್ಪವಾಗಿ ಮಾರ್ಪಾಟಾಗಿ ವಿಶ್ವವಸು ಎಂಬುವ ಗಿರಿಜನರ ನಾಯಕನಿಗೆ ದೊರೆಯಿತಂತೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಆತನು ಆ ಮೂರ್ತಿಯನ್ನು ಅರಣ್ಯದಲ್ಲಿ ರಹಸ್ಯವಾದ ಪ್ರದೇಶದಲ್ಲಿ ಪ್ರತಿಷ್ಟಾಪಿಸಿ ನೀಲಮಾದವ ಎಂಬ ಹೆಸರನ್ನು ಇಟ್ಟು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಿದ್ದನು. ಒಂದು ದಿನ ಈ ವಿಷಯವನ್ನು ತಿಳಿದುಕೊಂಡ ಮಾಳವ ವಂಶದ ರಾಜ ಇಂದ್ರದ್ಯುಮನು ಈ ವಿಷಯವನ್ನು ತಿಳಿದುಕೊಂಡು ಆ ರಹಸ್ಯವನ್ನು ಕಂಡುಹಿಡಿಯಲು ವಿದ್ಯಪತಿ ಎಂಬ ಬ್ರಾಹ್ಮಣ ಯುವಕನನ್ನು ಅರಣ್ಯಕ್ಕೆ ಕಳುಹಿಸುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ವಿಶ್ವವಸುವಿನ ಮಗಳಾದ ಲಲಿತಳನ್ನು ಪ್ರೇಮಿಸಿ ವಿವಾಹ ಮಾಡಿಕೊಳ್ಳುತ್ತಾನೆ. ವಿಗ್ರಹವನ್ನು ತೋರಿಸು ಎಂದು ಪದೇ ಪದೇ ತನ್ನ ಪತ್ನಿಗೆ ಕೇಳಿಕೊಳ್ಳುತ್ತಿರುತ್ತಾನೆ. ಈ ವಿಷಯ ತಿಳಿದ ವಿಶ್ವವಸುವು ತನ್ನ ಅಳಿಯನ ಕಣ್ಣಿಗೆ ಬಟ್ಟೆ ಕಟ್ಟಿ ದೇವಾಲಯದ ಸಮೀಪಕ್ಕೆ ಕರೆದುಕೊಂಡು ಹೋಗುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ವಿದ್ಯಪತಿಯು ಅತ್ಯಂತ ಚಾಣಾಕ್ಷದಿಂದ ದಾರಿಯುದ್ದಕ್ಕೂ ಗಸಗಸೆಯನ್ನು ಚೆಲ್ಲುತ್ತಾ ಅವುಗಳು ಮೊಳಕೆ ಹೊಡೆದು ಚಿಕ್ಕ ಚಿಕ್ಕ ಸಸಿಯಾಗುತ್ತದೆ. ಇದರಿಂದ ಸುಲಭವಾಗಿ ದಾರಿಯನ್ನು ಕಂಡು ಹಿಡಿಯಬಹುದು ಎಂದು ಅಲೋಚಿಸುತ್ತಾನೆ. ಈ ವಿಷಯವನ್ನು ತ್ವರಿತವಾಗಿ ಬ್ರಾಹ್ಮಣ (ವಿದ್ಯಪತಿ) ರಾಜನಿಗೆ ತಿಳಿಸುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ವಿಷಯವನ್ನು ತಿಳಿದುಕೊಂಡ ರಾಜನು ಆ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಆದರೆ ಅಲ್ಲಿ ನೀಲ ಮಾಧನವ ಮೂರ್ತಿಯು ಇರುವುದಿಲ್ಲ. ಆಗ ರಾಜನು ನಿರಾಶೆಯಿಂದ ನಿರಾಹಾರ ದೀಕ್ಷೆಯನ್ನು ಪ್ರಾರಂಭ ಮಾಡಿ ಆಶ್ವಮೇಧ ಯಾಗವನ್ನು ಮಾಡುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ವಿಷಯವನ್ನು ತಿಳಿದುಕೊಂಡ ರಾಜನು ಆ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಆದರೆ ಅಲ್ಲಿ ನೀಲ ಮಾಧನವ ಮೂರ್ತಿಯು ಇರುವುದಿಲ್ಲ. ಆಗ ರಾಜನು ನಿರಾಶೆಯಿಂದ ನಿರಾಹಾರ ದೀಕ್ಷೆಯನ್ನು ಪ್ರಾರಂಭ ಮಾಡಿ ಆಶ್ವಮೇಧ ಯಾಗವನ್ನು ಮಾಡುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಆ ಮರದ ತುಂಡಿನಿಂದಲೇ ವಿಗ್ರಹವನ್ನು ಮಾಡಿಸು ಎಂದು ಕೂಡ ಹೇಳುತ್ತಾನೆ. ರಾಜನು ಹಾಗೆಯೇ ಮರದ ತುಂಡನ್ನು ತೆಗೆದುಕೊಂಡು ಬರುತ್ತಾನೆ. ರಾಜ್ಯದಲ್ಲಿನ ಎಲ್ಲಾ ಕೆತ್ತನೆಗಾರರು ಆ ಮರದ ತುಂಡನ್ನು ಮುಟ್ಟಿದ ಕ್ಷಣದಲ್ಲೇ ಆ ಮರದ ತುಂಡು ಹಾಳಾಗುತ್ತದೆ. ಇದರಿಂದ ಆ ರಾಜನು ಗಾಢವಾಗಿ ಚಿಂತಿಸುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಆಗ ಸಾಕ್ಷತ್ ದೇವ ಶಿಲ್ಪಯಾದ ವಿಶ್ವಕರ್ಮ ಒಬ್ಬ ವೃದ್ಧ ಬ್ರಾಹ್ಮಣನ ರೂಪದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾನೆ. ರಾಜನಿಗೆ ವಿಗ್ರಹದ ಕೆತ್ತನೆಯನ್ನು ತಾನು ಮಾಡಿಕೊಡುತ್ತೇನೆ ಎಂದು ಹೇಳುತ್ತಾನೆ. ಆದರೆ ತಾನು ಒಂದು ಕೋಣೆಯಲ್ಲಿ ವಿಗ್ರಹಕ್ಕೆ ಒಂಟಿಯಾಗಿ ರೂಪಕಲ್ಪನೆಗಳನ್ನು ಮಾಡುತ್ತೇನೆ ಎಂದೂ, 21 ದಿನಗಳು ಯಾವುದೇ ರೀತಿಯಲ್ಲಿಯೂ ಒಂದು ತುಟ್ಟು ನೀರು ಕೂಡ ಸೇವಿಸುವುದಿಲ್ಲ ಎಂದೂ, ಆ ದಿಕ್ಕಿಗೆ ಯಾರು ಬರಬಾರದು ಎಂದು ಷರತ್ತನ್ನು ವಿಧಿಸುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ವಿಶ್ವಕರ್ಮ (ವೃದ್ಧ) ಹೇಳುವ ಎಲ್ಲಾ ಷರತ್ತಿಗೆ ರಾಜನು ಒಪ್ಪುತ್ತಾನೆ. ಎಷ್ಟೇ ದಿನಗಳು ಕಳೆದರು ಯಾವುದೇ ಶಬ್ಧಗಳು ಕೇಳಿಸುತ್ತಿರುವುದಿಲ್ಲ. ಹೀಗಾಗಿ ರಾಣಿಯು ಅವಸರದ ಮೇರೆಗೆ ದಿನಗಳು ಇನ್ನು ಇದ್ದರು ಕೂಡ ರಾಜನು ಬಾಗಿಲನ್ನು ತೆರೆಸುತ್ತಾನೆ. ಒಳಗೆ ನೋಡಿದಾಗ ಶಿಲ್ಪಿ ಇರುವುದಿಲ್ಲ. ಅಲ್ಲಿ ಶ್ರೀ ಕೃಷ್ಣ, ನಲರಾಮ ಹಾಗು ಸುಭದ್ರೆಯ ಆಕಾರವಿರುವ 3 ಮರದ ವಿಗ್ರಹಗಳು ಇರುವುದನ್ನು ಕಾಣುತ್ತಾರೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಆದರೆ ಆ ವಿಗ್ರಹಗಳು ಅಸಂಪೂರ್ತಿಯಾಗಿರುತ್ತದೆ. ಅಂದರೆ ಸೊಂಟದಿಂದ ಕೆಳಗಿನ ಭಾಗವು ಇಲ್ಲದೇ ಇರುತ್ತದೆ. ಪಾಶ್ಚ್ಯಾತಾಪದಿಂದ ರಾಜನು ಬ್ರಹ್ಮ ದೇವನನ್ನು ಪ್ರಾರ್ಥಿಸುತ್ತಾನೆ. ಚರ್ತುಮುಖ ಬ್ರಹ್ಮನು ಪ್ರತ್ಯಕ್ಷನಾಗಿ ಇನ್ನು ಮುಂದೆ ಅದೇ ರೂಪದಲ್ಲಿ ಪೂಜೆಗಳನ್ನು ಮಾಡಬೇಕು ಎಂದು ಹೇಳುತ್ತಾನೆ. ತಾನೇ ಸ್ವಯಂ ಪ್ರಾಣ ಪ್ರತಿಷ್ಟ ಮಾಡುತ್ತಾನೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪೂರಿ ಜಗನ್ನಾಥ ಸ್ವಾಮಿ ದೇವಾಲಯದಲ್ಲಿನ ವಿಗ್ರಹಕ್ಕೆ ಅಭಯ ಅಸ್ತ ಕಾಣಿಸದೇ ಇರುವುದಕ್ಕೆ ಕಾರಣ ಇದೇ ಎನ್ನುತ್ತಾರೆ. ರಾಜನ ವಾರಸುಧಾರನಾದ ಯಯತಿ ಕೇಸರಿ ಒಂದು ದೇವಾಲಯವನ್ನು ನಿರ್ಮಾಣ ಮಾಡಿ, ವಿಗ್ರಹವನ್ನು ಪ್ರತಿಷ್ಟಾಪಿಸಿದನು ಎಂದು ಕೆಲವು ಗ್ರಂಥಗಳ ಪ್ರಕಾರ ತಿಳಿಯುತ್ತದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪ್ರಸ್ತುತವಿರುವ ಈ ದೇವಾಲಯವನ್ನು ಕಳಿಂಗ ಪಾರಿಪಾಲಕನಾದ ಚೋಳಗಂಗ ದೇವನು ಎಂಬ ರಾಜನು ಪ್ರಾರಂಭಿಸಿ ಆತನ ಕುಮಾರನಾದ ಅನಂಗ ಮಹದೇವನ ಕೈಯಲ್ಲಿ ಪೂರ್ತಿಗೊಳಿಸಿದನು. ಆ ಕಾಲದಲ್ಲಿ ಈ ದೇವಾಲಯವನ್ನು ನೀಲಾದ್ರಿ ಎಂದು ಕರೆಯುತ್ತಿದ್ದರು.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪ್ರತಿಯೊಂದು ದೇವಾಲಯದ ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುವುದು ಸಾಮಾನ್ಯ ಆದರೆ ಈ ಜಗನ್ನಾಥನನ್ನು ಮರದಿಂದ ಮಾಡಿರುವುದಾಗಿದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದೆ. ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುವುದು ಒಂದು ವಿಶೇಷ. ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನ್ನು ಬದಲಾಯಿಸಿಲ್ಲ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಜಗನ್ನಾಥನ ದೇವಾಲಯದ ಗೋಪುರದ ಮೇಲೆ ಒಂದು ದಿವ್ಯವಾದ ಸುದರ್ಶನ ಚಕ್ರವಿದೆ. ಈ ಚಕ್ರವು ಸುಮಾರು 20 ಅಡಿಯಿಂದ ಎತ್ತರದಲ್ಲಿದೆ. ಇಂತಹ ಸುದರ್ಶನ ಚಕ್ರದ ಚಿಹ್ನೆಯನ್ನು ನಗರದ ಹಲವಾರು ಕಡೆಗಳಲ್ಲಿ ಕಾಣಬಹುದು. ಕಾರಣ ಈ ಚಕ್ರವಿದ್ದರೆ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಸಾಮಾನ್ಯವಾಗಿ ಈ ಚಕ್ರದ ಇತಿಹಾಸವು ಯಾರಿಗೂ ತಿಳಿದಿಲ್ಲ. ಈ ಚಕ್ರವು ಅತ್ಯಂತ ಭಾರವಾಗಿದ್ದು ಗೋಪುರದ ಮೇಲ್ಭಾಗದಲ್ಲಿ ಕಟ್ಟಿಸಿದ ಇಂಜಿನಿಯರ್ಗಳು ಹೇಗೆ ಸ್ಥಾಪನೆ ಮಾಡಿದರು ಎಂಬುದು ಈಗಲೂ ಅದು ವಿಸ್ಮಯವಾಗಿಯೇ ಉಳಿದಿದೆ. ಈ ಚಕ್ರವನ್ನು 2000 ವರ್ಷಗಳ ಹಿಂದೆ ಸ್ಥಾಪನೆ ಮಾಡಿದರು ಎನ್ನಲಾಗಿದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪ್ರಂಪಚದ ಯಾವುದೇ ಸ್ಥಳದಲ್ಲಿಯೂ ಗಾಳಿಯು ಹಿಂಭಾಗದಿಂದ ಬೀಸುತ್ತದೆ. ಆದರೆ ಈ ಪೂರಿ ಪುಣ್ಯ ಸ್ಥಳದಲ್ಲಿ ಗಾಳಿಯು ಮುಂಭಾಗದಿಂದ ಬೀಸುತ್ತದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಆಶ್ಚರ್ಯವೆಂದರೆ ಈ ಪುರಿ ಜಗನ್ನಾಥನಿರುವ ಆಲಯದಲ್ಲಿ ಯಾವ ಪಕ್ಷಿಯಾಗಲಿ, ವಿಮಾನವಾಗಲಿ ಹಾರಾಡುವುದಿಲ್ಲ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕವಾದ ಕಾರಣವನ್ನು ಇದುವರೆವಿಗೂ ಯಾರೂ ಕಂಡು ಹಿಡಿದಿಲ್ಲ ಎಂಬುದು ಮತ್ತೊಂದು ವಿಶೇಷ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ದೇವಾಲಯವನ್ನು ನಿರ್ಮಿಸಿದ ಇಂಜಿನಿಯರ್ಗಳು ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ ಇದು ಆಶ್ಚರ್ಯವಾದರೂ ಸತ್ಯ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ದೇವಾಲಯದಲ್ಲಿ ಲಕ್ಷಾಂತರ ಭಕ್ತರು ದಿನನಿತ್ಯ ಭೇಟಿ ಕೊಡುತ್ತಿರುತ್ತಾರೆ. ದೇವಾಲಯದ ಪ್ರಸಾದದ ಕೊರತೆ ಎದುರಾಗಿಲ್ಲ ಹಾಗೂ ವ್ಯರ್ಥವಾಗಿಲ್ಲ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈ ದೇವಾಲಯದ ಸಮೀಪದಲ್ಲಿ ಒಂದು ಕಡಲ ತೀರವಿದೆ. ದೇವಾಲಯದ ಮುಖ್ಯ ದ್ವಾರಕ್ಕೆ ಬಂದಾಗ ಅಲ್ಲಿ ಸ್ಪಷ್ಟವಾಗಿ ಆ ನದಿಯ ಜುಳು ಜುಳು ಶಬ್ದವನ್ನು ಕೇಳಿಸಿಕೊಳ್ಳಬಹುದು. ಇವೆಲ್ಲವೂ ಜಗನ್ನಾಥನ ಮಹಿಮೆಯಲ್ಲದೇ ಮತ್ತೇನು?. ದೇವಾಲಯದ ಒಳಭಾಗದಲ್ಲಿ ಸ್ವಲ್ಪ ದೂರ ನಡೆದು ಮತ್ತೆ ಮರಳಿ ದೌರದ ಹತ್ತಿರ ಬಂದರೆ ಸಮುದ್ರದ ಶಬ್ದ ನಿಮಗೆ ಕೇಳಿಸುವುದಿಲ್ಲ. ಬದಲಾಗಿ ಮತ್ತೊಮ್ಮೆ ದೇವಾಲಯ ಹೊರಭಾಗದಿಂದ ಒಳಗೆ ಪ್ರವೇಶ ಮಾಡುವಾಗ ಮಾತ್ರ ಈ ಶಬ್ದ ನಿಮಗೆ ಕೇಳಿಸುತ್ತದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಈಗ ಇರುವ ದೇವಾಲಯವು ಹಿಂದಿನ ಚೋಳಕಾಲದಲ್ಲಿ ಬೇರೆಯೇ ರೀತಿ ಇತ್ತು. ಪುರಿಯಲ್ಲಿ ಜಗನ್ನಾಥ ದೇವಾಲಯವನ್ನು ಮೊದಲು ಸ್ಥಾಪನೆ ಮಾಡಿದವರು ಚೋಳರ ಅರಸರು, ಮೇಘಾನಂದ ಪಚ್ಚೇರಿ, ಮುಖ ಸಳ, ನಟ ಮಂಟಪ ಇನ್ನು ಹಲವಾರು. ಇದು ಎರಡನೇ ಬಾರಿ ಪುನರ್ ನಿರ್ಮಾಣ ಮಾಡಿರುವುದಾಗಿದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪ್ರತಿ ವರ್ಷವು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಬದಲಾಯಿಸಲಾಗುತ್ತದೆ.
ಪೂರಿ ಜಗನ್ನಾಥ ಸ್ವಾಮಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು.....
ಪ್ರವೇಶ ಸಮಯ ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆ ಈ ಜನ್ನಾಥನ ದರ್ಶನವನ್ನು ಪಡೆಯಬಹುದು.