ಈ ದೇವಾಲಯವು ಅತ್ಯಂತ ಮಹಿಮಾನ್ವಿತವಾದ ದೇವಾಲಯ ಇಲ್ಲಿ 18 ಸಿದ್ಧ ಪರುಷರು ಮತ್ತು ಪರಮ ಶಿವನು ನೆಲೆಸಿರುವ ಪವಿತ್ರವಾದ ಕ್ಷೇತ್ರವಾಗಿದೆ. ಇಲ್ಲಿ ಹಲವಾರು ಭಕ್ತರು ಕಾಳಿಯನ್ನು ಹಾಗೂ ಪರಮಶಿವನನ್ನು ದರ್ಶನ ಮಾಡಲು ಭೇಟಿ ನೀಡುತ್ತಾರೆ. ಇಲ್ಲಿನ ದೇವಾಲಯದ ಸುತ್ತ ಮುತ್ತ ಇರುವುದೆಲ್ಲಾ ಆಶ್ರ್ಚಯಕರವಾದುದೇ.
ಈ ದೇವಾಲಯದ ವಾತಾವರಣವು ದಟ್ಟ ಕಾಡು, ಹಾಲಿನ ಹಾಗೆ ಧುಮುಕುತ್ತಿರುವ ಜಲಪಾತಗಳು, ಹಚ್ಚ ಹಸಿರಿನಿಂದ ಕೂಡಿದ ಪರ್ವತಗಳು ರಮಣೀಯ. ಇಲ್ಲಿ ಚೂಣೀ ಎಂಬ ಜಲಪಾತವಿದೆ. ಇಲ್ಲಿಯೇ ಸತುರಗಿರಿ ಎಂಬ ಬೆಟ್ಟವಿದೆ. ಆ ಬೆಟ್ಟದಲ್ಲಿ ಇರುವುದೆಲ್ಲಾ ಆಶ್ಚರ್ಯಕರವಾದ ವಿಷಯಗಳೇ........
ಪ್ರಸ್ತುತ ಲೇಖನದಲ್ಲಿ ಆಶ್ಚರ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಚತುರ ಗಿರಿ ಶಿಖರದ ಬಗ್ಗೆ ತಿಳಿಯೋಣ.
ಸತುರ ಗಿರಿ
ಈ ಸತುರ ಗಿರಿಯ ದೇವಿಯ ದರ್ಶನ ಪಡೆಯಲು ಕಾಲು ನಡಿಗೆಯಿಂದ ಸುಮಾರು 10 ಕಿ,ಮೀ ದೂರ ನಡೆಯಬೇಕಾಗುತ್ತದೆ. ಪರ್ವತ ಮೇಲೆ ದೇವಾಲಯವಿರುವುದರಿಂದ ಭಕ್ತರಿಗೆ ಚಿಕ್ಕ ಚಿಕ್ಕದಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.
ಟ್ರೆಕ್ಕಿಂಗ್
ಈ ದೇವಾಲಯವು ಪರ್ವತದ ಮೇಲೆ ಇರುವುದರಿಂದ ಟ್ರೆಕ್ಕಿಂಗ್ ಪ್ರೇಮಿಗಳಿಗೆ ಇದೊಂದು ಸದಾವಕಾಶ ಮಾಹಿಮಾನ್ವಿತ ದೇವಿಯ ದರ್ಶನದ ಜೊತೆ ಜೊತೆಗೆ ಸ್ನೇಹಿತರ ಜೊತೆಗೆ ಟ್ರೆಕ್ಕಿಂಗ್ಗೆ ಕೂಡ ಹೊರಡಬಹುದಾಗಿದೆ.
ತೀರ್ಥಕ್ಷೇತ್ರ
ಹೇಳಬೇಕಾದರೆ ಈ ತೀರ್ಥಕ್ಷೇತ್ರಕ್ಕೆ ತೆರಳಲು ಕಾಲು ನಡಿಗೆಯಿಂದ ಹೋಗಬೇಕಾಗಿರುವುದರಿಂದ ಭಕ್ತರಿಗೆ ಯಾವುದೇ ಆಯಾಸವಾಗುವುದಿಲ್ಲ. ಇದು ಕೂಡ ಇಲ್ಲಿನ ದೇವಿಯ ಮಹಿಮೆಗಳಲ್ಲಿ ಒಂದಾಗಿದೆ.
ಮಹಾಲಿಂಗನ ದೇವಾಲಯ
ಸತುರಗಿರಿ ಪರ್ವತದಲ್ಲಿ ಸುಂದರ ಮಹಾಲಿಂಗನ ದೇವಾಲಯವಿದೆ. ಇಲ್ಲಿನ ಸುಂದರ ಮಹಾಲಿಂಗ ಸ್ವಾಮಿಯು ಅತ್ಯಂತ ಮಾಹಿಮಾನ್ವಿತನು ಎಂದು ಹಲವಾರು ಭಕ್ತರು ಈ ಸ್ವಾಮಿಯ ದರ್ಶನ ಹಾಗು ಆರ್ಶಿವಾದ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಎಲ್ಲಿದೆ?
ತಮಿಳು ನಾಡಿನ ಮಧುರೈನಿಂದ ಸುಲಭವಾಗಿ ಸತುರಗಿರಿಗೆ ತೆರಳಬಹುದು. ಈ ದೇವಾಲಯವು ಮಧುರೈನ ವಿರುಧನಗರ ಜಿಲ್ಲೆಯ ಥೆಣಿ ತಾಲ್ಲೂಕಿನಲ್ಲಿದೆ.
ಕಾಳಿ
ಇಲ್ಲಿನ ಆದಿ ಶಕ್ತಿಯು ಕಾಳಿ ರೂಪದಲ್ಲಿ ದರ್ಶನವನ್ನು ನೀಡುತ್ತಾಳೆ. ಕಾಳಿ ಸಾಮಾನ್ಯವಾಗಿ ರೌದ್ರ ಅವತಾರದಲ್ಲಿರುವುದರಿಂದ ಭಯಾನಕವಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.
ವೃಕ್ಷಗಳು
ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ಹಲವಾರು ಬೃಹತ್ ಗಾತ್ರದ ವೃಕ್ಷಗಳಿವೆ. ಆ ವೃಕ್ಷಗಳ ಕೆಳಗೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು ಎಂದು ಭಕ್ತರ ನಂಬಿಕೆಯಾಗಿದೆ.
ಗಿಡ ಮೂಲಿಕೆಗಳು
ಕಾಲು ನಡಿಗೆಯಿಂದ ಸಾಗುವ ಹಲವಾರು ಭಕ್ತರಿಗೆ ಹಾಗೂ ಯಾತ್ರಿಕರಿಗೆ ಗಿಡ ಮೂಲಿಕೆಗಳಿಂದ ಕೂಡಿರುವ ವಾತಾವರಣವನ್ನು ಅಸ್ವಾಧಿಸುತ್ತ ಸಾಗಬಹುದಾಗಿದೆ. ಈ ಪ್ರದೇಶದಲ್ಲಿ ಋಷಿ ಮುನಿಗಳು ಉಪಯೋಗಿಸುತ್ತಿದ್ದ ಹಲವಾರು ದಿವ್ಯ ಔಷಧಿಗಳು ಅದೆಷ್ಟೊ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂತೆ.
ಪಂಚ ಲಿಂಗಗಳು
ಈ ಸತುರಗಿರಿ ಪರ್ವತದ ಮೇಲೆ 5 ದೇವಾಲಯಗಳಿವೆ. ಅವುಗಳೆಂದರೆ ಮಹಾಲಿಂಗ, ಸುಂದರ ಮೂರ್ತಿ ಲಿಂಗ, ಚಂದನ ಮಹಾಲಿಂಗ, ದ್ವಿಲಿಂಗ ಹಾಗೂ ಬೃಹತ್ ಲಿಂಗ.
ಭಕ್ತರು
ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ತಾವು ಬೇಡಿ ಕೊಂಡ ಕಾರ್ಯವು ನಡೆದರೆ ಈ ದೇಗುಲಕ್ಕೆ ಬಂದು ದರ್ಶನ ಭಾಗ್ಯ ಪಡೆಯುತ್ತೇವೆ ಎಂದು ಭಕ್ತರು ಬರುತ್ತಾರೆ.
ವಿಶೇಷ ಪೂಜೆಗಳು
ಈ ದೇವಾಲಯದಲ್ಲಿ ಅಮಾವಸ್ಯೆಯೊಂದು ಹಾಗೂ ಶಿವರಾತ್ರಿಯಂದು ಅತ್ಯಂತ ವಿಜೃಬಣೆಯಿಂದ ಹಬ್ಬಗಳನ್ನು ಆಚರಿಸಲಾಗುತ್ತದೆ.
ಸಂಜೀವಿನಿ ಬೆಟ್ಟ
ಉತ್ತರ ದಿಕ್ಕಿಗೆ ಇರುವ ಮಹಾಲಿಂಗ ದೇವಾಲಯವನ್ನು ಸಂಜೀವಿನಿ ಬೆಟ್ಟ ಎಂದು ಕರೆಯಲಾಗುತ್ತದೆ.
ಭಾರತೀಯ ಅರಣ್ಯ ಇಲಾಖೆ
1940 ನಿಂದಲೂ ಈ ಸತುರಗಿರಿ ಪರ್ವತವನ್ನು ಭಾರತೀಯ ಅರಣ್ಯ ಇಲಾಖೆಯವರು ನಿರ್ವಹಿಸುತ್ತಿದ್ದಾರೆ.
ವೃಕ್ಷ
ಈ ದೇವಾಲಯದ ಪರ್ವತದಲ್ಲಿ ಮುಕರವಿಕಿ ಎಂಬ ಮರವಿದೆ ಈ ಮರವು ಮುಖವು ಊದಿಕೊಂಡಿದ್ದರೆ ಮರದಿಂದ ಬರುವ ಹಾಲನ್ನು ಹಚ್ಚಿಕೊಂಡರೆ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಎಂತೆ.
ಹುಲ್ಲು
ಜ್ಯೋತಿಪಾಲ ಹುಲ್ಲುನ್ನು ಬೆಳಗಿನ ಜಾವ ನೀರಿನಲ್ಲಿ ನೆನೆಸಿ ರಾತ್ರಿಯಂದು ಋಷಿ ಮುನಿಗಳು ಈ ಜ್ಯೋತಿಪಾಲದಿಂದ ಬೆಳಕನ್ನು ಪಡೆಯುತ್ತಿದ್ದರಂತೆ.
ಆಳಿಲು
ಸಾಮಾನ್ಯವಾಗಿ ಅಳಿಲು ಚಿಕ್ಕದಾಗಿರುತ್ತದೆ. ಆದರೆ ಈ ಪರ್ವತದಲ್ಲಿ ಅತ್ಯಂತ ದೊಡ್ಡದಾದ ಅಳಿಲುಗಳನ್ನು ಕಾಣಬಹುದಾಗಿದೆ.
ಥವಾಸಿ ಗುಹೆ
ಮಹಾಲಿಂಗ ದೇವಾಲಯದಿಂದ ಸುಮಾರು 1 ಕಿ,ಮೀ ದೂರ ಕ್ರಮಿಸಿದರೆ ಅಲ್ಲಿ ಥವಾಸಿ ಎಂಬ ಗುಹೆ ಇದೆ. ಈ ಗುಹೆಯನ್ನು ಭೇಟಿ ಮಾಡಲೇಬೇಕಂತೆ ಏಕೆಂದರೆ ಈ ಗುಹೆಯಲ್ಲಿ ಸುಮಾರು 18 ಋಷಿ ಮಿನಿಗಳನ್ನು ಕಂಡ ಪುಣ್ಯ ದೊರೆಯುತ್ತದೆಯಂತೆ. ಇಲ್ಲಿ ಹಲವಾರು ಪವಾಡಗಳನ್ನು ಕಾಣಬಹುದಾಗಿದೆ.
ಸಾರಿಗೆ ವ್ಯವಸ್ಥೆ
ಹಲವು ಜನರು ಈ ದೇವಾಲಯಕ್ಕೆ ಸರಿಯಾದ ರಸ್ತೆ ಸಾರಿಗೆ ಇಲ್ಲ ಎಂದು ಭಾವಿಸಿದ್ದಾರೆ. ಆದರೆ ತಮಿಳು ನಾಡು ರಾಜ್ಯದ ಮಟ್ಟುಪೆಟಾಣಿ ಬಸ್ ಸ್ಟೇಷನ್ನಿಂದ ಸತುರಗಿರಿಗೆ ಸುಮಾರು 7 ಕಿ,ಮೀ ದೂರವಿದೆ. ಟ್ರೆಕ್ಕಿಂಗ್ ಮಾಡಲು ಸುಮಾರು 10 ಕಿ,ಮೀ ದೂರವಿದೆ.