ಪ್ರಪಂಚ ಇಷ್ಟೇ ವೈಜ್ಞಾನಿಕತೆಗೆ ಮುಂದುವೆರೆದರೂ ಕೂಡ ಕೆಲವೊಮ್ಮೆ ಉತ್ತರ ನೀಡಲು ಯಾರಿಗೂ ಸಾಧ್ಯವಾಗುವುದಿಲ್ಲ. ಆಗಲೇ ಅಲ್ಲಿ ನಿಗೂಢತೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಸೂರ್ಯನ ಕಿರಣವು ಪ್ರತಿಯೊಂದು ಜೀವಿಯ ಮೇಲೆ ಬೀಳಲೇಬೇಕು. ಯಾವುದೇ ಒಂದು ವಸ್ತುವಿನ ಮೇಲೆ ಸೂರ್ಯಕಾಂತಿ ಬಿದ್ದರೆ ಅದರ ನೆರಳನ್ನು ಕಾಣವುದು ಸಾಮಾನ್ಯದ ವಿಚಾರವೇ.
ಒಂದೇ ಸ್ಥಾನದಲ್ಲಿ ಅಲ್ಲಾಡದಂತೆ ಕಾಣುವ ನೆರಳನ್ನು ಎಲ್ಲಿಯಾದರು ಕಂಡಿದ್ದೀರಾ?. ಆದರೆ ಒಂದು ದೇವಾಲಯದಲ್ಲಿ ಯಾವುದೇ ಆಧಾರವಿಲ್ಲದೇ ಸೂರ್ಯಕಿರಣಗಳ ಸಹಾಯವಿಲ್ಲದೇ ನೆರಳು ಬೀಳುತ್ತದೆ. ಯಾವುದೇ ಕಾರಣದಿಂದಲೂ ಎಂದಿಗೂ ಆ ನೆರಳು ಕದಲುದಿಲ್ಲವಂತೆ. ಈ ವಿಸ್ಮಯವನ್ನು ಕಾಣಲು ಹಲವಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಸ್ತುತ ಲೇಖನದಲ್ಲಿ ಅಂತಹ ವಿಸ್ಮಯ ತಾಣ ಯಾವುದು ಎಂಬುದನ್ನು ತಿಳಿಯೋಣ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಅಯ್ಯೋ ಹಾಗೇನೂ ಇಲ್ಲ ಇವರು ಸುಮ್ಮನೆ ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಅಂದುಕೊಳ್ಳುತ್ತಿದ್ದೀರಾ?
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ನಾನು ಹೇಳುತ್ತಿರುವುದು ಅಕ್ಷರಶಃ ನಿಜ. ಈ ನೆರಳು ಬೀಳುವುದು ಸೋಮೇಶ್ವರ ದೇವಾಲಯದಲ್ಲಿ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ದೇವಾಲಯದ ಗರ್ಭಗುಡಿಯ ಮೇಲೆ ಎಂದಿಗೂ ಕದಲದಂತೆ ಒಂದೇ ಸ್ಥಾನದಲ್ಲಿದೆ. ಈ ನೆರಳು ಅಲ್ಲಿನ ಭಕ್ತರಿಗೆ ಆಶ್ಚರ್ಯ ಚಕಿತರನ್ನಾಗಿಸುತ್ತದೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಆಂಧ್ರ ಪ್ರದೇಶದ ನಲ್ಗೋಂಡ ಪಟ್ಟಣಕ್ಕೆ ಸುಮಾರು 4 ಕಿ,ಮೀ ದೂರದಲ್ಲಿರುವ ಪಾನಗಲ್ಲು ಗ್ರಾಮದಲ್ಲಿರುವ ಈ ದೇವಾಲಯವು 10 ನೇ ಶತಮಾನದಲ್ಲಿ ಚೋಳರು ನಿರ್ಮಿಸಿದರು ಎನ್ನಲಾಗಿದೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಗರ್ಭ ಗುಡಿ ಮುಖ ದ್ವಾರದ ಮುಂದೆ 2 ಸ್ತಂಭಗಳಿವೆ. ಆ ಗರ್ಭ ಗುಡಿ ಗೋಡೆಯ ಮೇಲೆ ನಿರಂತರವಾಗಿ ಒಂದೇ ನೆರಳು ಬೀಳುತ್ತದೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಪಾನಗಲ್ಲು ಗ್ರಾಮದಲ್ಲಿ ಯಾವುದೇ ರಾಜ ಗೋಪುರವಿಲ್ಲದೇ 3 ಗರ್ಭ ಆಲಯವಿದೆ. ಅದರಲ್ಲಿ ಪೂರ್ವ ದಿಕ್ಕಿಗೆ ಇರುವ ಗರ್ಭ ಗುಡಿಯಲ್ಲಿ ಶ್ರೀ ಸೋಮೇಶ್ವರ ಸ್ವಾಮಿ ದರ್ಶನ ನೀಡುತ್ತಾನೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ನಿರಂತರವಾಗಿ ನೆರಳಿನಿಂದಲೇ ಅವೃತ್ತನಾಗಿರುವುದರಿಂದ ಈ ಭಗವಂತನನ್ನು ಛಾಯ ಸೋಮೇಶ್ವರ ಎಂದು ಕರೆಯುತ್ತಾರೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ನೆರಳು ಎಲ್ಲಿಂದ ಬೀಳುತ್ತದೆ ಎಂದು ಸಹ ಯಾರಿಗೂ ಗೊತ್ತಿಲ್ಲ. ಸಾವಿರಾರು ವರ್ಷಗಳಾದರು ಯಾಕೆ ಆ ನೆರಳು ತನ್ನ ಸ್ಥಾನವನ್ನು ಬದಲಿಸಿಕೊಳ್ಳುತ್ತಿಲ್ಲ. ಸುಮಾರು 10 ನೇ ಶತಮಾನದಿಂದಲೂ ಕೂಡ ಈ ರಹಸ್ಯವನ್ನು ಯಾರಿಗೂ ಭೇಧಿಸಲು ಸಾಧ್ಯವಾಗುತ್ತಿಲ್ಲ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಛಾಯ ರಹಸ್ಯವನ್ನು ಎಷ್ಟೋ ಶತಮಾನಗಳಿಂದ ಭೇಧಿಸಲಾಗದಿದ್ದದ್ದನ್ನು ಒಬ್ಬ ಫಿಜಿಕ್ಸ್ ಲೆಕ್ಚರರ್ ಭೇಧಿಸಿದರು. ಅದೇನೆಂದರೆ......
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಆ ಲೆಕ್ಚರರ್ ಸೂರ್ಯಪೇಟ ಗ್ರಾಮಕ್ಕೆ ಸಂಬಂಧಿಸಿದವ ಮನೋಹರ್. ಈ ದೇವಾಲಯದಲ್ಲಿ ಪೂರ್ವ, ಪಶ್ಚಿಮ ಹಾಗೂ ಉತ್ತರ ದಿಕ್ಕಿಗೆ 3 ಗರ್ಭಗುಡಿಗಳು ಇವೆ. ಪಶ್ಚಿಮ ದಿಕ್ಕಿಗೆ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ನೆರಳು ಬೀಳುತ್ತಿದೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಉಳಿದ 2 ಗುಡಿಯಲ್ಲಿ ಹೆಚ್ಚು ಕತ್ತಲು ಅವರಿಸಿರುತ್ತದೆ. ಮಧ್ಯದಲ್ಲಿ 4 ಸ್ತಂಭಗಳಿವೆ. ಪ್ರಧಾನ ದ್ವಾರ ಮಧ್ಯೆಯಲ್ಲಿ 3 ಗರ್ಭಗುಡಿಯ ಮುಂದೆ 8 ಸ್ತಂಭಗಳಿವೆ. ಮಧ್ಯದಲ್ಲಿ ನಿಂತು ಯಾವುದಾದರೂ ಗರ್ಭಗುಡಿಯನ್ನು ನೋಡಿದರು ಕೂಡ ನಿರ್ಮಾಣ ಒಂದೇ ರೀತಿಯಾಗಿ ಗೋಚರವಾಗುತ್ತದೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಇವೆಲ್ಲಾ ಮನಸ್ಸಿನಲ್ಲಿ ಇಟ್ಟು ಕೊಂಡು ಎಷ್ಟೊ ಪ್ರಯೋಗವನ್ನು ಮನೋಹರ್ ಮಾಡಿದನು. ಎಷ್ಟೋ ಕಾಲಗಳ ನಂತರ ವಿಜಯವನ್ನು ಸಾಧಿಸಿದನು ಮನೋಹರ್.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಛಾಯ ಸೋಮೇಶ್ವರ ದೇವಾಲಯ ಕಾಕತೀಯ ಕಾಲದ ನಿರ್ಮಾಣ ಶೈಲಿಯನ್ನು ಒಳಗೊಂಡಿದೆ. ಆ ಛಾಯ ಸೋಮೇಶ್ವರ ದೇವಾಲಯಕ್ಕೆ ಪರಿಕ್ಷೇಪಣ ಕಾಂತಿ ಆಧಾರವಾಗಿ ನಿರ್ಮಿಸಲಾಗಿದೆ ಎಂತೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಹಾಗೇಯೇ ಆ ಶಿವಲಿಂಗದ ಮೇಲೆ ಬೀಳೂವ ನೆರಳು ಒಂದೇ ಸ್ತಂಭಕ್ಕೆ ಸಂಬಂಧಿಸಿದ್ದು ಅಲ್ಲವಂತೆ. 2 ಕಡೆಯಿಂದ ಉತ್ಪತ್ತಿಯಾಗುವ ಕಾಂತಿಯು 4 ಸ್ತಂಭಗಳಿಗೆ ಬಿದ್ದು ಪರಿಕ್ಷೇಣವಾಗುತ್ತದೆ ಎಂತೆ.
ನೂರಾರು ವರ್ಷಗಳ ಕಾಲ ಆ ದೇವಾಲಯದಲ್ಲಿದ್ದ ನೆರಳಿನ ರಹಸ್ಯ ಬೆಳಕಿಗೆ ಬಂದಿದೆ
ಅಂತಹ ಸುಂದರವಾದ ರಹಸ್ಯವನ್ನು ಇಟ್ಟು ನಿರ್ಮಿಸಿದ ಆಗಿನ ಕಾಕತೀಯ ಕಾಲದ ಶಿಲ್ಪಿಗಳ ಕಲಾ ಚಾರ್ತುಯ ಮೆಚ್ಚಲೇ ಬೇಕು.