Search
  • Follow NativePlanet
Share
» »ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ಇಂದು ದೇಶಾದ್ಯಂತ ಜನರು ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಂತೂ ಸ್ವಲ್ಪ ಜಾಸ್ತಿನೇ ನಾಗಾರಾಧನೆಯನ್ನು ಮಾಡುತ್ತಾರೆ. ಹಾಗಾಗಿ ನಾಗನ ಕಲ್ಲಿಗೆ ಹಾಲೆರೆದು ಅಭಿಷೇಕ ಮಾಡುತ್ತಾರೆ. ಹಳದಿ ಕುಂಕುಮವನ್ನು ಹಚ್ಚುತ್ತಾರೆ. ಎಳನೀರಿನ ಅಭಿಷೇಕವನ್ನು ಮಾಡುತ್ತಾರೆ.

ಪ್ರತಿಯೊಬ್ಬರು ನಾಗನ ಆರಾಧನೆ ಮಾಡುತ್ತಾರೆ. ಈ ನಾಗರ ಪಂಚಮಿ ಹಬ್ಬದಂದು ಹೋಗಬೇಕಾದ ಪ್ರಮುಖ ನಾಗದೇವರ ದೇವಸ್ಥಾನವನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ, ಕರ್ನಾಟಕ

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ, ಕರ್ನಾಟಕ

PC:Darshkini

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ದೇವತೆ ಸುಬ್ರಹ್ಮಣ್ಯ, ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ. ಈ ದೇವಾಲಯವು ಸುಂದರವಾದ ಕುಮಾರ ಪರ್ವತ ಶಿಖರವನ್ನು ಅದರ ಹಿನ್ನೆಲೆಯಾಗಿ ಹೊಂದಿದೆ ಮತ್ತು ಇದು ಕುಮಾರದಾರಾ ನದಿಯಿಂದ ಆವೃತವಾಗಿದೆ. ವಾಸುಕಿ ಮತ್ತು ಇತರ ಹಾವುಗಳು ಸುಬ್ರಹ್ಮಣ್ಯ ಗುಹೆಗಳಲ್ಲಿ ಆಶ್ರಯ ಪಡೆದಿವೆ ಎಂಬ ನಂಬಿಕೆ ಇದೆ. ದೇವಾಲಯದ ಭೇಟಿ ಸರ್ಪ ದೋಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಗೋ ಏರ್‌ ಆಫರ್; ಬರೀ 1099 ರೂ. ಟಿಕೇಟ್‌ನಲ್ಲಿ ಎಲ್ಲೆಲ್ಲಾ ಪ್ರಯಾಣಿಸಬಹುದು

ಭುಜಂಗ ನಾಗಾ ದೇವಾಲಯ, ಗುಜರಾತ್

ಭುಜಂಗ ನಾಗಾ ದೇವಾಲಯ, ಗುಜರಾತ್

PC:Nizil Shah

ಭುಜಿಯ ಕೋಟೆ ಗುಜರಾತಿನ ಭುಜ್ ಹೊರವಲಯದಲ್ಲಿದೆ. ಜಾನಪದ ಕಥೆಯ ಪ್ರಕಾರ ಈ ಕೋಟೆಯು ಕೊನೆಯ ನಾಗಾ ಕ್ಲಾನ್ ಭುಜಂಗಕ್ಕೆ ಸಮರ್ಪಿಸಲಾಗಿದೆ. ಸ್ಥಳೀಯರು ಭುಜಿಯ ಬೆಟ್ಟದ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದನ್ನು ಭುಜಂಗ್ ನಾಗಾ ದೇವಸ್ಥಾನ ಎಂದು ಕರೆಯಲಾಗುತ್ತದೆ. ಪ್ರತಿವರ್ಷ ನಾಗರ ಪಂಚಮಿ ಸಮಯದಲ್ಲಿ ದೇವಸ್ಥಾನದ ಸುತ್ತಲೂ ಒಂದು ಜಾತ್ರೆ ನಡೆಯುತ್ತದೆ. ಪ್ರಸ್ತುತ, ಈ ಕೋಟೆಯು ಭಾರತೀಯ ಸೇನೆಯ ಸ್ವಾಮ್ಯದಲ್ಲಿದೆ ಮತ್ತು ಯುದ್ಧಸಾಮಗ್ರಿಗಳನ್ನು ಶೇಖರಿಸಿಡಲು ಬಳಸಲಾಗುತ್ತದೆ.

ನಾಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು

ನಾಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು

ತಿರುನಾಗೇಶ್ವರಂನಲ್ಲಿರುವ ನಾಗನಂತ ಸ್ವಾಮಿ ದೇವಸ್ಥಾನ ಶಿವ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಪ್ರಧಾನ ದೇವತೆ ಕೇತು. ಪೌರಾಣಿಕ ಹಾವುಗಳು ದಕ್ಷಿಣ, ಕರ್ಕೋಟಾಕನ್ ಮತ್ತು ಆದಿ ಶೇಷ ಹಾವುಗಳು ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲು ಬಳಸಲಾಗುತ್ತಿವೆ ಎಂದು ನಂಬಲಾಗಿದೆ.

ಅಗಾಸನಹಳ್ಳಿ ನಾಗಪ್ಪ, ಬೆಂಗಳೂರು

ಅಗಾಸನಹಳ್ಳಿ ನಾಗಪ್ಪ, ಬೆಂಗಳೂರು

ನರಸಿಂಹನಿಗಾಗಿ ನಿರ್ಮಿಸಿರುವ ದೇವಸ್ಥಾನ ಇದಾಗಿದೆ. ಇದು ದೇವಸ್ಥಾನವು ಸುಬ್ರಹ್ಮಣ್ಯದ ರೂಪದಲ್ಲಿದೆ. ಗರ್ಭಗುಡಿಯಲ್ಲಿ ನರಸಿಂಹದ ಸ್ವಾಭಾವಿಕವಾಗಿ ರೂಪುಗೊಂಡ ಒಂದು ಚಿತ್ರಣವಿದೆ. ದೇವಾಲಯದ ಸುತ್ತಲೂ ಸುವರ್ಣ ಬಣ್ಣದ ಹಾವಿನ ದೃಶ್ಯಗಳು ಕೂಡ ಇವೆ. ಭಗವಂತನ ಆಶೀರ್ವಾದ ಪಡೆಯಲು ಅಮವಾಸ್ಯೆ ದಿನಗಳಲ್ಲಿ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಈ ಸ್ಥ:ಳದಲ್ಲಿ ಅಗಸ್ತ್ಯ ಮುನಿ ಧ್ಯಾನ ಮಾಡುತ್ತಿದ್ದರಿಂದ ಈ ಸ್ಥಳಕ್ಕೆ ಆಗಸನ ಹಳ್ಳಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಅನಂತ ಪದ್ಮನಾಭ ದೇವಸ್ಥಾನ, ಕುಡುಪು

ಅನಂತ ಪದ್ಮನಾಭ ದೇವಸ್ಥಾನ, ಕುಡುಪು

ಕುಡುಪು ತನ್ನ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಪ್ರಮುಖ ನಾಗಾ-ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಚಂಪಾಷಷ್ಠಿಯ ಸಂದರ್ಭದಲ್ಲಿ ಜನರು ಇಲ್ಲಿನ ನಾಗದೇವರಿಗೆ ಪೂಜೆ ಸಲ್ಲಿಸುತ್ತಾರೆ.

ಶೇಷನಾಗ ದೇವಾಲಯ, ಜಮ್ಮು ಮತ್ತು ಕಾಶ್ಮೀರ

ಶೇಷನಾಗ ದೇವಾಲಯ, ಜಮ್ಮು ಮತ್ತು ಕಾಶ್ಮೀರ

PC: Krish Dulal

ಪುರಾಣದ ಪ್ರಕಾರ, ಹಾವಿನ ರಾಜನಾಗಿದ್ದ ಶೇಷನಾಗ ಪಹಲ್ಗಾಂ ಬಳಿ ಒಂದು ಸರೋವರದ ರಚನೆ ಮಾಡಿದರು. ಶೇಷನಾಗ ಇನ್ನೂ ಇಲ್ಲಿ ವಾಸಿಸುತ್ತಿದ್ದಾರೆಂದು ನಂಬಲಾಗಿದೆ ಮತ್ತು ಆದ್ದರಿಂದ ಸರ್ಪ ದೇವರಿಗೆ ಸಮರ್ಪಿತವಾದ ದೇವಸ್ಥಾನವನ್ನು ಅದರ ದಡದಲ್ಲಿ ನಿರ್ಮಿಸಲಾಗಿದೆ. ತಮ್ಮ ಯಾತ್ರೆಯಲ್ಲಿ ಭಕ್ತಾದಿಗಳು ಅಮರನಾಥ ಗುಹೆಗೆ ಹೋಗುವಾಗ ಈ ಸರೋವರದ ಬಳಿ ಭೇಟಿ ನೀಡುತ್ತಾರೆ ಮತ್ತು ಶೇಷನಾಗನ್ನು ಪೂಜಿಸುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+