ಬಂಗಾರದ ದೇವಾಲಯ ಕಟ್ಟಡದ ಹಿಂದೆ ಇರುವ ಆ ಶಕ್ತಿ ಯಾರು ಗೊತ್ತ? ಅಮೃತಸರ್, ಗುರುದ್ವಾರವೇ ಅಲ್ಲದೇ ನಮ್ಮ ದೇಶದಲ್ಲಿ ಮತ್ತೊಂದು ದೇವಾಲಯವು ಬಂಗಾರದಿಂದ ಮಾಡಲಾಗಿದೆ. ಇಲ್ಲಿನ ಸ್ತಂಭಗಳು ಬಂಗಾರ, ಆ ಸ್ತಂಭಗಳ ಮೇಲೆ ಇರುವುದು ಕೂಡ ಬಂಗಾರದ ಕೆತ್ತನೆಗಳೇ ಆಗಿದೆ. ಹಾಗಾಗಿಯೇ ಇದು ಬಂಗಾರಕ್ಕೆ ಪ್ರಸಿದ್ಧವಾದ ದೇವಾಲಯವಾಗಿದೆ. ಹಾಗಾದರೆ ಈ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು? ಎಲ್ಲಿದೆ ಎಂಬ ವಿಷಯವನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.
ಶ್ರೀ ಪುರಂ ಸ್ವರ್ಣ ದೇವಾಲಯವು ವೆಲ್ಲೂರಿನ ಮಲೈಕೊಡಿ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ ಮತ್ತು ಇದೊಂದು ಪ್ರಸಿದ್ಧವಾದ ಆಧ್ಯಾತ್ಮಿಕವಾದ ಪ್ರದೇಶವಾಗಿದೆ. ಶ್ರೀ ನಾರಾಯಣಿ ಅಮ್ಮ ಈ ದೇವಾಲಯವನ್ನು ನಿರ್ಮಾಣ ಮಾಡಿದರು. ಈ ದೇವಾಲಯದ ಒಳಭಾಗದಲ್ಲಿ ಹಾಗು ಹೊರಭಾಗದಲ್ಲಿ ಬಂಗಾರದಿಂದ ನಿರ್ಮಾಣ ಮಾಡಲ್ಪಟ್ಟ ಲಕ್ಷ್ಮೀ ವಿಗ್ರಹವು ದೇವಾಲಯದಲ್ಲಿದೆ. ಈ ದೇವಾಲಯದಲ್ಲಿ ಶಾಸನಗಳು, ಕಲಾ ವೇದಗಳು ಎಷ್ಟೋ ಪ್ರಧಾನ್ಯತೆಯನ್ನು ಹೊಂದಿದೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಸಂದರ್ಶನಕ್ಕೆ ತಪ್ಪದೇ ಭಾರತೀಯ ವಸ್ತ್ರಗಳು ಪಾಲಿಸಬೇಕು. ಶ್ರೀಪುರಂ ಸ್ವರ್ಣ ದೇವಾಲಯವು ಭೇಟಿಗಾಗಿ ಬರುವ ಪ್ರವಾಸಿಗರು ಚಿಕ್ಕ ಪ್ಯಾಂಟ್ಗಳು, ಮಿಡ್ಡಿಗಳು ಮತ್ತು ಜೀನ್ಸ್ಗಳನ್ನು ಹಾಕಿಕೊಳ್ಳುವಂತಿಲ್ಲ. ಹಾಗೆಯೇ ಮೊಬೈಲ್ ಫೋನ್ಗಳು, ಕ್ಯಾಮೆರಾ ಇತರ ಎಲಕ್ಟ್ರಾನಿಕ್ಸ್ ವಸ್ತುಗಳು, ಧೂಮಪಾನ, ಮಧ್ಯಪಾನದ ಸರಕುಗಳು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಭಕ್ತರು ವರ್ಷದಲ್ಲಿ 365 ದಿನಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 8 ರವರೆಗೆ ಶ್ರೀ ಪುರಂ ಸ್ವರ್ಣ ದೇವಾಲಯಕ್ಕೆ ಭೇಟಿ ನೀಡಬಹುದು. ದೇವಾಲಯದ ಸಮೀಪದಲ್ಲಿ ಅಭಿಷೇಕವನ್ನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ, ಆರತಿ ಸೇವೆಯು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನಿರ್ವಹಿಸುತ್ತಾರೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ತಮಿಳುನಾಡು ರಾಜ್ಯದಲ್ಲಿ ಶ್ರೀಪುರಂನಲ್ಲಿ ಶ್ರೀ ಲಕ್ಷ್ಮೀನಾರಾಯಣಿ ದೇವಿಯ ದೇವಾಲಯವು ಕೂಡ ಇದೆ. 100 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ 1500 ಕೆ.ಜಿ ಬಂಗಾರ, 400 ಶಿಲ್ಪಗಳು, ಅದ್ಭುತವಾದ ಶಿಲ್ಪಕಲಾ ಚಾತುರ್ಯವನ್ನು ಹೊಂದಿದೆ. ಸುಮಾರು 600 ಕೋಟಿಯಷ್ಟು ನಿರ್ಮಾಣವೇ ಈ ಸ್ವರ್ಣ ದೇವಾಲಯ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಇಂದಿನವರೆವಿಗೂ ಸ್ವರ್ಣ ದೇವಾಲಯವು ಹೆಸರು ಕೇಳಿದ ತಕ್ಷಣವೇ ನೆನಪಿಗೆ ಬರುವುದು ಅಮೃತಸರ್. ಆದರೆ ಇಂದು ಆ ಖ್ಯಾತಿಯನ್ನು ಶ್ರೀಪುರಂಗೆ ದಕ್ಕಿಸಿಕೊಂಡಿದೆ. ದೇವಾಲಯದ ನಿರ್ಮಾಣದಲ್ಲಿ ಸ್ತಂಭಗಳು, ಶಿಲ್ಪಗಳು ಮೊದಲು ರಾಗಿಯ ಶೀಟ್ಗಳನ್ನು ಹಾಕಿದ್ದರು. ಆ ನಂತರ ಅದರ ಮೇಲೆ ಬಂಗಾರ ಶೀಟ್ ಹಾಕಿ ಶಿಲ್ಪಗಳನ್ನು ಕೆತ್ತನೆ ಮಾಡಿದ್ದಾರೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ದೇವಿಯ ವಿಗ್ರಹವನ್ನು ಮಾತ್ರ ಗ್ರಾನೈಟ್ನಿಂದ ತಯಾರಿಸಿ ಬಂಗಾರದ ಆಭರಣದಿಂದ ಅಲಂಕರಿಸಿದ್ದಾರೆ. ಈ ದೇವಾಲಯವನ್ನು ಸೇರಿಕೊಳ್ಳಬೇಕಾದರೆ 1.5 ಕಿ.ಮೀ ದೂರದಲ್ಲಿರುವ ನಕ್ಷತ್ರಾಕಾರದ ಮಾರ್ಗದ ಸಮೀಪದವರೆವಿಗೂ ತೆರಳಬೇಕು. ಈ ಮಾರ್ಗದ ಉದ್ದಕ್ಕೂ ಗೋಡೆಯ ಮೇಲೆ ಭಗವದ್ಗಿತೆ, ಖುರಾನ್, ಬೈಬಲ್ನ ಪ್ರವಚನವನ್ನು ಬರೆದಿದ್ದಾರೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಇವೆಲ್ಲವನ್ನು ಓದುವುದರಿಂದ ಭಕ್ತರು ತಮ್ಮ ಅಜ್ಞಾನದ ಅಲೋಚನೆಯನ್ನು ಬಿಟ್ಟು ಜ್ಞಾನ ಸಂಪತ್ತನ್ನು ರೂಢಿಸಿಕೊಳ್ಳುತ್ತಾರೆ ಎಂಬುದೇ ದೇವಾಲಯದ ಉದ್ದೇಶ. ದೇವಾಲಯದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಪ್ರತ್ಯೇಕವಾದ ಮಂಟಪ, ಕೃತ್ರಿಮ ಎಂಬ ಫಾಂಟೆನ್ಗಳು ಭಕ್ತರ ದೃಷ್ಟಿಯನ್ನು ಆಕರ್ಷಿಸುತ್ತದೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಮಂಟಪ ಬಲಭಾಗದಲ್ಲಿ ದೇವಾಲಯದ ಒಳಗೆ ಹೋಗಿ ಎಡಭಾಗದಿಂದ ಹೋಗುವ ಹಾಗೆ ಏರ್ಪಾಟು ಮಾಡಿದ್ದಾರೆ. ಮಾನವನು ತನ್ನ 7 ಜನ್ಮವನ್ನು ದಾಟಿಕೊಂಡು ಮುಕ್ತಿಯನ್ನು ಹೊಂದುತ್ತಾರೆ ಎಂಬುದಕ್ಕೆ ಚಿಹ್ನೆಯಾಗಿ ದೇವಾಲಯದ ದ್ವಾರವನ್ನು ಏರ್ಪಾಟು ಮಾಡಿದ್ದಾರೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಮೂಲಸ್ಥಾನದಲ್ಲಿ ವಜ್ರಗಳು, ವೈಡೂರ್ಯಗಳು, ಮುತ್ತುಗಳು, ಪ್ಲಾಟಿನಂನಿಂದ ರೂಪಗೊಳಿಸಿರುವ ಬೆಳ್ಳಿಯ ಕವಚಗಳು, ಕೀರಿಟಗಳು, ಸ್ವರ್ಣತಾಮರದ ಮೇಲೆ ಆಸಿನವಾಗಿರುವ ಮಹಾಲಕ್ಷ್ಮೀ ದೇವಿಯು ದರ್ಶನವನ್ನು ನೀಡುತ್ತಾಳೆ. ವಿಜೃಂಬಣೆಯಿಂದ ಕಂಗೋಳಿಸುವ ಮಹಾ ಮಂಟಪದಲ್ಲಿ ನಿಂತು ದೇವಿಯನ್ನು ದರ್ಶನ ಮಾಡಿಕೊಂಡರೆ ಅಷ್ಟ ಐಶ್ವರ್ಯಗಳು ಪಾಪ್ತಿಯಾಗುತ್ತದೆ ಎಂದು ಭಕ್ತರು ದೃಢವಾದ ನಂಬಿಕೆಯಾಗಿದೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಉಳಿದ ದೇವಾಲಯದ ಹಾಗೆ ದರ್ಶನದ ವಿಷಯಕ್ಕೆ ಇಲ್ಲಿ ಪ್ರತ್ಯೇಕವಾದ ತರಗತಿಗಳು, ವಿಭಾಗಗಳು ಇಲ್ಲ. ಎಲ್ಲರೂ ಕ್ಯೂನಲ್ಲಿಯೇ ಹೋಗಿ ದೇವಿಯನ್ನು ದರ್ಶನ ಮಾಡಿಕೊಳ್ಳಬೇಕು. ತಾರತಮ್ಯವಿಲ್ಲದ ಸಮಾನತ್ವವನ್ನು ಸೂಚಿಸುವ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. ನಾರಾಯಣಿ ದೇವಾಲಯದ ನಿರ್ಮಾಣದ ಹಿಂದೆ ಇರುವ ವ್ಯಕ್ತಿ ಸತೀಷ್ ಕುಮಾರ್.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಸ್ವಂತ ಊರು ವೆಲೂರು, ತಂದೆ ನಂದಗೋಪಾಲ. ಒಬ್ಬ ಕಾರ್ಮಿಕನು. ತಾಯಿ ಟೀಚರ್. 1976 ರಲ್ಲಿ ಜನಿಸಿದ ಸತೀಶ್ ಕುಮಾರ್ ಚಿಕ್ಕವಯಸ್ಸಿನಿಂದಲೂ ಓದುವುದು, ಆಟಗಳ ಮೇಲೆ ಆಸಕ್ತಿಯನ್ನು ತೋರದೇ ದೇವಾಲಯಗಳು, ಗೋಪುರಗಳು, ಪೂಜೆಗಳು, ಯಜ್ಞಗಳು ಎಂದು ತಿರುಗುತ್ತಿದ್ದರು.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಪ್ರಾರ್ಥಮಿಕ ವಿದ್ಯ ನಂತರ ಆತನು ಪೂರ್ತಿಯಾಗಿ ಭಕ್ತನಾಗಿ ಮಾರ್ಪಟಾದನು. ದೇವಿಯನ್ನು ಆರಾಧಿಸಲು ಪ್ರಾರಂಭ ಮಾಡಿದರು. 1992 ರಲ್ಲಿ ನಾರಾಯಣಿ ಪೀಠವನ್ನು ಸ್ಥಾಪಿಸಿದರು. ಆತನು ಒಂದು ದಿನ ಬಸ್ಸಿನಲ್ಲಿ ಹೋಗುತ್ತಿರುವ ಸಮಯದಲ್ಲಿ ಶ್ರೀಪುರಂನಿಂದ ಕಾಂತಿಗಳು ಕಾಣಿಸುತ್ತಿದ್ದವಂತೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಈ ಬೆಳಕಿನಲ್ಲಿ ನಾರಾಯಣಿಯ ರೂಪವನ್ನು ದರ್ಶನ ನೀಡಿದಳಂತೆ. ಆತನು ಅಂದಿನಿಂದ ನಾರಾಯಣಿಪೀಠವನ್ನು ಸ್ಥಾಪಿಸಿ ಅಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿದನಂತೆ. ಪೂಜೆಗಳು, ಆಧ್ಯಾತ್ಮಿಕವಾದ ಪ್ರವಚನಗಳು, ಸೇವಾ ಕಾರ್ಯಕ್ರಮಗಳು ಪ್ರಾರಂಭ ಮಾಡಿದರಂತೆ. ಪೀಠದ ಭಾಗದಿಂದ ಉಚಿತವಾದ ವೈದ್ಯಶಾಲೆ ಹಾಗು ಪಾಠಗಳನ್ನು ಕೂಡ ನಿರ್ಮಾಣ ಮಾಡಿದರಂತೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ಈ ಸ್ವರ್ಣ ದೇವಾಲಯಕ್ಕೆ ಕಾಣಿಕೆಯ ರೂಪದಲ್ಲಿ ಅಧಿಕವಾಗಿ ವಿದೇಶ ಭಕ್ತರಿಂದಲೇ ಬರುತ್ತದೆಯಂತೆ. ಶ್ರೀಪುರಂನಲ್ಲಿನ ಶ್ರೀ ಲಕ್ಷ್ಮೀನಾರಾಯಣಿ ದೇವಾಲಯವು ವಿಸ್ತೀರ್ಣದಲ್ಲಿ ಅಮೃತಸರ್ಗಿಂತ ದೊಡ್ಡದು. ದೇವಾಲಯದಲ್ಲಿನ ಶಿಲ್ಪಕಲೆಗಳ ಅನುಗುಣವಾಗಿ ಬಂಗಾರವನ್ನು ಶೀಟ್ ಹಾಕಿಸಲು ಹೆಚ್ಚು ಖರ್ಚು ಮಾಡಿದ್ದಾರೆ. ಈ ಖರ್ಚಿಗೆ ಹೋಲಿಸಿದರೆ ಬಂಗಾರವನ್ನು ಕೊಳ್ಳಲು ಇಟ್ಟ ಖರ್ಚು ಕಡಿಮೆ ಎಂದೇ ಹೇಳುತ್ತಾರೆ.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ರಸ್ತೆ ಮಾರ್ಗದ ಮೂಲಕ
ವೆಲ್ಲೂರ್, ತಮಿಳು ನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿನ ದೊಡ್ಡ ನಗರಗಳಿಗೆ ಸಂಪರ್ಕ ಸಾಧಿಸುತ್ತದೆ. ಈ ನಗರವು 2 ಬಸ್ ಟೆರ್ಮಿನಲ್ಸ್ ಇವೆ. ಅವುಗಳೆಂದರೆ ಟೌನ್ ಬಸ್ ಟೆರ್ಮನಸ್ ಮತ್ತು ಸೆಂಟ್ರಲ್ ಬಸ್ ಟೆರ್ಮಿನಸ್.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ರೈಲ್ವೆ ಮಾರ್ಗದ ಮೂಲಕ
ವೆಲ್ಲೂರು ಮೂರು ರೈಲ್ವೆ ನಿಲ್ದಾಣವನ್ನು ಹೊಂದಿದೆ. ವೆಲ್ಲೂರು-ಕಟ್ಪಡಿ ಜಂಕ್ಷನ್, ವೆಲ್ಲೂರು ಕಂಟೋನ್ಮೆಂಟ್. ಇದು ಕಟ್ಪಡಿ ಜಂಕ್ಷನ್ನಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಕೊನೆಯದು ವೆಲ್ಲೂರು ಟೌನ್ ಸ್ಟೇಷನ್.
ಶ್ರೀ ಸ್ವರ್ಣ ದೇವಾಲಯ ಕಟ್ಟಡದ ಹಿಂದೆ ಇರುವ ಆ ಅದ್ಭುತವಾದ ಶಕ್ತಿ ಯಾರು ಗೊತ್ತ?
ವಿಮಾನ ಮಾರ್ಗದ ಮೂಲಕ
ವೆಲ್ಲೂರಿನಿಂದ 120 ಕಿ.ಮೀ ದೂರದಲ್ಲಿ ದೇಶಿಯ ವಿಮಾನ ನಿಲ್ದಾಣವಾದ ತಿರುಪತಿ ವಿಮಾನ ನಿಲ್ದಾಣವಿದೆ. ಹಾಗೆಯೇ 130 ಕಿ.ಮೀ ದೂರದಲ್ಲಿದೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. 224 ಕಿ.ಮೀ ದೂರದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.