ಅದೃಷ್ಟವಂತರಾಗಬೇಕು ಎಂಬುದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆಗಿರುತ್ತದೆ. ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟವು ಹಿಂದೆಯೇ ಇದ್ದು, ಯಾವುದೇ ರೀತಿಯಲ್ಲಿಯೂ ಅದೃಷ್ಟ ಒಲಿದು ಬರಲು ತೊಡಕಾಗಬಹುದು. ಹೀಗಿರುವಾಗ ದುರಾದೃಷ್ಟವನ್ನು ದೂರವಾಗಿಸಿಕೊಂಡು ಅದೃಷ್ಟವನ್ನು ಒಲಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಕರ್ನಾಟಕದಲ್ಲಿಯೇ ಇರುವ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.
ಕರ್ನಾಟಕದಲ್ಲಿ ಅದೃಷ್ಟ ದೇವತೆಯೊಬ್ಬಳು ನೆಲೆಸಿದ್ದಾಳೆ. ಈ ದೇವಿಯು ದಾರಿದ್ರ್ಯವನ್ನು ದೂರಮಾಡಿ ಅದೃಷ್ಟವನ್ನು ವರವಾಗಿ ಕರುಣಿಸುವ ದೇವತೆ. ಈಕೆಗೆ ಒಂದು ರೋಚಕವಾದ ಸ್ಥಳ ಪುರಾಣವು ಕೂಡ ಇದೆ. ಹಾಗಾದರೆ ಈ ದೇವಿ ಯಾರು? ಆಕೆ ಎಲ್ಲಿ ನೆಲೆಸಿದ್ದಾಳೆ ಎಂಬ ವಿವರವನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಅದೃಷ್ಟ ಒಲಿಯಬೇಕಾದರೆ ಮೊದಲು ದೇವರ ಕೃಪೆ ಇರಬೇಕು. ಆ ದೇವರ ಕೃಪೆ ಇದ್ದರೆ ಮಾತ್ರ ಸಿರಿವಂತರಾಗಲು ಸಾಧ್ಯ ಎಂದು ಜನರು ನಂಬಲಾಗಿದೆ. ಹಾಗಾದರೆ ನೀವು ಕೂಡ ಅದೃಷ್ಟವಂತರಾಗಬೇಕಾದರೆ ನೀವು ನಂಬಿದರೂ ಇಲ್ಲದೇ ಇದ್ದರೂ ಕೂಡ ಒಮ್ಮೆ ಈ ದೇವಿಯ ದರ್ಶನ ಮಾಡಿ ಬನ್ನಿ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಮುಖ್ಯವಾಗಿ ದೇವಾಲಯದ ಚರಿತ್ರೆ ಬಗ್ಗೆ ತಿಳಿಯೋಣ. ಕೃಷ್ಣ ದೇವರಾಯ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯರ ಪೂರ್ವಿಕರಿಂದಲೂ ಕೂಡ ಭುವನೇಶ್ವರಿ ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಿದ್ದರು. ಆ ತಾಯಿಯು ಈ ರಾಜವಂಶಿಕರನ್ನು ರಕ್ಷಿಸುತ್ತಾ ಬರುತ್ತಿದ್ದಳು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಹೀಗೆ ಈ ತಾಯಿಯನ್ನು ಶ್ರೀ ಕೃಷ್ಣ ದೇವರಾಯ ಕಾಲದ ರಾಜರು ಭಕ್ತಿ-ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಆ ರಾಜರ ಕೊನೆಯ ರಾಜನಾದ ರಾಮರಾಯ ಈ ದೇವಿಯನ್ನು ನಿರ್ಲಕ್ಷಿಸಿ ಪೂಜಿಸುವುದನ್ನು ನಿಲ್ಲಿಸಿಬಿಟ್ಟಿದನಂತೆ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ತನ್ನನ್ನು ಪೂಜಿಸುತ್ತಿಲ್ಲವೆಂದೂ ಆಗ್ರಹಿಸಿದ ದೇವಿಯು ತುಂಗಭದ್ರ ನದಿಯಲ್ಲಿ ಬಿದ್ದು, ತುಂಗಭದ್ರ ಹಾಗು ಕೃಷ್ಣನದಿಯಲ್ಲಿ ಈಜಿಕೊಂಡು ಭೀಮಾನದಿ ಸಂಗಮಕ್ಕೆ ದೇವಿಯು ಸೇರುತ್ತಾಳೆ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಭೀಮಾನದಿ ಸಂಗಮದಲ್ಲಿ ಕೆಲವು ಕಾಲ ನೀರಿನಲ್ಲಿ ಇದ್ದು ಬಿಡುತ್ತಾಳೆ. ಆಗ ರಾಮರಾಯನ ರಾಜ್ಯವು ಪತನವಾಗಿ ಮುಸ್ಲಿಂ ರಾಜರ ಕೈಯಲ್ಲಿ ವಶವಾಯಿತು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ತದನಂತರ ಕೆಲವು ಕಾಲದ ನಂತರ ನೀರಿನಲ್ಲಿ ಇದ್ದ ದೇವಿಯನ್ನು ಒಬ್ಬ ಭಕ್ತನು ಭೀಮಾನದಿ ಸಂಗಮದಲ್ಲಿ ಈ ದೇವಿ ಯಾರು ಎಂದು ಗುರುತಿಸಿದನು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ದೇವಿಯು ಆತನಿಗೆ ಕಾಣಿಸಿಕೊಂಡು ಆ ನದಿಯಲ್ಲಿ ಇದ್ದೇನೆ ಎಂದೂ, ತನಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದರೆ ಗ್ರಾಮದ ಎಲ್ಲಾ ಪ್ರಜೆಗಳನ್ನು ಸಲುಹುತ್ತೇನೆ ಎಂದು ಹೇಳುತ್ತಾಳೆ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ನಡೆದ ವೃತ್ತಾಂತವೆಲ್ಲಾ ಆ ಭಕ್ತನು ಗ್ರಾಮಸ್ಥರಿಗೆ ಹೇಳುತ್ತಾನೆ. ಆಗ ಆ ದೇವಿಯು ಗಾಜಿನ ರೂಪದಲ್ಲಿದ್ದ ಸ್ತೂಪವನ್ನು ಈಚೆಗೆ ತೆಗೆದಾಗ, ಆ ಸ್ತೂಪವು ಕಪ್ಪು ಬಣ್ಣದ ಸ್ತೂಪವಾಗಿತ್ತು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಒಂದು ಹಾವು ಕೂಡ ಆ ದೇವಿಗೆ ಕಾವಲು ಕಾಯುತ್ತಿತ್ತು. ಆಗ ಪ್ರಜೆಗಳಲ್ಲೆರೂ ಸೇರಿ ದೇವಾಲಯವನ್ನು ನಿರ್ಮಾಣ ಮಾಡಿದರು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ನಂತರ ಕಾಲದಲ್ಲಿ ಆ ಗ್ರಾಮದಲ್ಲಿನ ಜನರು ಸುಭೀಕ್ಷೆಯಿಂದ ಹಾಗು ಉತ್ತಮವಾದ ಬೆಳೆಗಳನ್ನು ಬೆಳೆದರು. ಹಾಗೆಯೇ ಎಲ್ಲರೂ ಅದೃಷ್ಟವಂತರಾದರು. ಇದೆಲ್ಲಾ ಆ ತಾಯಿಯ ಮಹಿಮೆ ಎಂದೇ ಜನರು ಆ ತಾಯಿಯನ್ನು ಕೊಂಡಾಡಿದರು. ಹಾಗಾಗಿಯೇ ಈ ದೇವಿಯನ್ನು ಶ್ರೀ ಭಾಗ್ಯವಂತಿ ದೇವಿ ಎಂದು ಕರೆದು ಆರಾಧಿಸಿದರು.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಈ ತಾಯಿಯನ್ನು ಆರಾಧಿಸಿದರೆ ಭಾಗ್ಯವಂತರಾಗುತ್ತಾರೆ ಎಂದು ನಂಬಲಾಗಿದೆ. ಈ ಮಹಿಮಾನ್ವಿತವಾದ ದೇವಾಲಯವು ಕರ್ನಾಟಕದಲ್ಲಿನ ದತ್ತ ಕ್ಷೇತ್ರವಾದ ಗಾಣಗಾಪುರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ, ಗುಲ್ಬರ್ಗದಿಂದ 50 ಕಿ.ಮೀ ದೂರದಲ್ಲಿದೆ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಈ ದೇವಿಯನ್ನು ಭಾಗ್ಯವಂತಿ ದೇವಿಯನ್ನು ಭಾಗ್ಯಮ್ಮ, ಕಾಮಧೇನು, ಕಲ್ಪತರು, ಭಾಗಮ್ಮ ಎಂದು ಇನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ದೇವಿಯನ್ನು ಆರಾಧಿಸಲು ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!
ಈ ಶಕ್ತಿವಂತ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಅಂದುಕೊಂಡಿರುವವರು ಅಬ್ಜಲ್ಪುರ ಜಿಲ್ಲೆಯ ಘಟ್ಟರಗಿ ಎಂಬ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿಯನ್ನು ದರ್ಶಿಸುವುದರಿಂದ ಅದೃಷ್ಟವಂತರಾಗಿ ಅಥವಾ ಭಾಗ್ಯವಂತರಾಗಿ ಮಾರ್ಪಟಾಗುತ್ತಾರೆ ಎಂದು ನಂಬಲಾಗಿದೆ.