ದೇಶದಲ್ಲಿ ಕುತೂಹಲಕಾರಿಯಾದ ಹಲವಾರು ಪ್ರದೇಶಗಳು ಇವೆ. ಅವುಗಳು ತಮ್ಮಲ್ಲಿಯೇ ಇಂದಿಗೂ ರಹಸ್ಯಗಳನ್ನು ಅಡಗಿಸಿಕೊಂಡಿವೆ. ನಮಗೆ ತಿಳಿದ ಇಂಥಹ ಹಲವಾರು ರಹಸ್ಯಗಳು ಭೂಮಿಯ ಮೇಲೆ ಹಾಗು ಭೂಮಿಯ ಒಳಗೆ ಎಷ್ಟೊ ಇದೆ. ಆದರೆ ಇಂದಿಗೂ ರಹಸ್ಯವಾಗಿಯೇ ಉಳಿದಿರುವ ಒಂದು ಗುಹೆಯ ಬಗ್ಗೆ ತಿಳಿಯೋಣ.
ಬಿಹಾರ ರಾಜ್ಯದಲ್ಲಿನ ರಾಜ್ ಗಿರಿ ನಗರದಲ್ಲಿ ಸೋನಾ ಭಂಡಾರ್ ಗುಹೆ ಇದೆ. ಈ ಗುಹೆಯಲ್ಲಿ ನಿಧಿಯು ಅಡಗಿದೆ ಎಂತೆ. ಈ ಗುಹೆಯಲ್ಲಿ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ದೊರೆಯ ನಿಧಿಗಿಂತ ದುಪ್ಪಟ್ಟು ನಿಧಿ ಇಲ್ಲಿ ಇದೆ ಎಂದು ಲೆಕ್ಕಚಾರ ಹಾಕಿದ್ದಾರೆ. ಅಮೂಲ್ಯವಾದ ನಿಧಿಯ ಬಗ್ಗೆ ಆ ಗುಹೆಯ ಶಾಸನದ ಮೂಖಾಂತರ ತಿಳಿದುಕೊಳ್ಳಬಹುದಾಗಿದೆ.
ಗುಹೆಯಲ್ಲಿ ಅಡಗಿರುವ ನಿಧಿಯ ರಹಸ್ಯದ ಬಗ್ಗೆ ತಿಳಿಯೋಣ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಭಾರತ ದೇಶದಲ್ಲಿ ಇಂದಿಗೂ ರಹಸ್ಯವಾಗಿಯೇ ಉಳಿದಿರುವ ನೂರಾರು ನಿಗೂಢಗಳು ಇವೆ. ಅವುಗಳಲ್ಲಿ ಸೋನಾ ಭಂಡಾರ್ ಗುಹೆಯಲ್ಲಿರುವ ನಿಧಿಯ ರಹಸ್ಯ ಕೂಡ ಒಂದಾಗಿದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಸೋನಾ ಭಂಡಾರ ಗುಹೆಯಲ್ಲಿರುವ ನಿಧಿಯು ಲೆಕ್ಕ ಹಾಕಲಾಗದಷ್ಟು ಹೆಚ್ಚಾಗಿದೆಯಂತೆ. ಕೇರಳದಲ್ಲಿ ದೊರೆತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ದೊರೆತ ಬೆಲೆಕಟ್ಟಲಾಗದ ನಿಧಿಗಿಂತ ದುಪ್ಪಟ್ಟು ಹೆಚ್ಚಾಗಿದೆ ಎಂತೆ. ಈ ಗುಹೆಯ ನಿಧಿಯ ಬಗ್ಗೆ ಅಲ್ಲಿನ ಶಾಸನದ ಮೂಖಾಂತರ ತಿಳಿದುಕೊಳ್ಳಬಹುದಾಗಿದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಈ ಸಂಪತ್ತನ್ನು ಕೊಳ್ಳೆ ಹೊಡೆಯಲು ಕೆಲವು ಸಾವಿರ ವರ್ಷಗಳ ಹಿಂದೆಯಿಂದಲೂ ಹಲವಾರು ಮಂದಿ ಪ್ರಯತ್ನಿಸಿದರೂ ಯಾರಿಗೂ ಕೂಡ ಸಾಧ್ಯವಾಗಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಕೂಡ ಈ ನಿಧಿಯನ್ನು ವಶಪಡಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಪ್ರಯತ್ನ ಮಾಡಿದರಂತೆ. ಆದರೆ ಅವರ ಪ್ರಯತ್ನವು ಕೂಡ ವಿಫಲವಾಯಿತಂತೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಸುಮಾರು 100 ವರ್ಷಗಳಿಂದಲೂ ಪ್ರಪಂಚ ಪ್ರಸಿದ್ಧಿ ಪಡೆದ ಸೈಂಟಿಸ್ಟ್ಗಳು ಸಹ ಇಲ್ಲಿ ಸಂಶೋಧನೆ ನಡೆಸಿದರು. ಕೊನೆಗೆ ಸರ್ಕಾರದಿಂದ ಕೆಲವು ಸಂಶೋಧಕರು ಇಲ್ಲಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಆದರೂ ಕೂಡ ಫಲಿತಾಂಶ ಮಾತ್ರ ಶೂನ್ಯ...ಇಷ್ಟಕ್ಕೂ ಬಗೆಹರಿಸಲಾಗದ ಆ ರಹಸ್ಯ ನಿಧಿ ಎಲ್ಲಿದೆ ಗೊತ್ತ? ಈ ನಿಧಿಯ ರಹಸ್ಯವಾದರೂ ಏನು? ಈ ನಿಧಿಯ ರಹಸ್ಯವನ್ನು ಭೇಧಿಸುವುದು ಹೇಗೆ? ಆ ನಿಧಿಯ ಯಾರುದು? ಎಂಬ ಹಲವಾರು ಪ್ರಶ್ನೆಗೆ ಉತ್ತರ ಇಲ್ಲಿದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಬಿಂಬಸಾರನಿಗೆ ವಯಸ್ಸಾಗುತ್ತಿದ್ದಂತೆ ಮಗಧಸಿಂಹಾಸನಕ್ಕಾಗಿ ಆತನ ಮಕ್ಕಳಲ್ಲಿ ಯುದ್ಧಗಳು ಮೊದಲಾದವು. ಇವರಲ್ಲಿ ಅಜಾತಶತ್ರುವು ತನ್ನ ತಂದೆ ಬಿಂಬಸಾರನನ್ನು ಸೋನಾ ಭಂಡಾರ್ ಗುಹೆಯಲ್ಲಿ ಬಂಧಿಸಿ ಸಿಂಹಾಸನವನ್ನು ಏರಿದನು.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಅಜಾತಶತ್ರುವು ಇಂಥಹ ಕೆಲಸ ಮಾಡೇ ಮಾಡುತ್ತಾನೆ ಎಂದು ಮೊದಲೇ ತಿಳಿದಿದ್ದ ಬಿಂಬಸಾರನು ತನ್ನ ಬೆಲೆಬಾಳುವ ಸಂಪತ್ತನ್ನು ಈ ಗುಹೆಯಲ್ಲಿ ಬಚ್ಚಿಟ್ಟಿದ್ದನಂತೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಆ ಸಂಪತ್ತನ್ನು ವಶಪಡಿಸಿಕೊಳ್ಳಲು ಹೇಗೆ ಹೋಗಬೇಕು ಎಂದು ಮಾರ್ಗವನ್ನು ಕೇಳಿದನಂತೆ. ಆದರೆ ಹೇಳದ ತನ್ನ ತಂದೆಗೆ ದಂಡಗಳು ವಿಧಿಸಿದನಂತೆ. ಆ ನಿಧಿಗಾಗಿ ಹಲವಾರು ಪ್ರಯತ್ನ ಮಾಡಿದರೂ ಕೂಡ ದೊರೆಯಲಿಲ್ಲ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಕೆಲವು ದಿನಗಳ ನಂತರ ಬಿಂಬಸಾರ ಸಾವನ್ನಪ್ಪುತ್ತಾನೆ. ಅಜಾತ ಶತ್ರುವಿಗೆ ಹಿಡಿದಿದ್ದ ಹುಚ್ಚನ್ನು ಬೌದ್ಧಧರ್ಮದ ಕೆಲವು ಗುರುಗಳು ನಯ ಮಾಡುತ್ತಾರೆ. ಬೌದ್ಧರ ಪ್ರಭಾವದಿಂದ ಅಹಿಂಸ ಮಾರ್ಗದಲ್ಲಿ ಪ್ರಯಾಣಿಸಿದ ಅಜಾತಶತ್ರುವು ಆ ನಿಧಿಯ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿದನಂತೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಆದರೆ ಬಿಂಬಸಾರ ಮರಣ ಹೊಂದುವುದಕ್ಕಿಂತ ಮುಂಚೆ ಆ ನಿಧಿ ರಹಸ್ಯವನ್ನು ಅರ್ಥವಾಗದ ಲಿಪಿಯಲ್ಲಿ ಈ ಗುಹೆಯಲ್ಲಿಯೇ ಕೆತ್ತಿದ್ದಾನಂತೆ. ಆ ಲಿಪಿಯನ್ನು ಅರ್ಥ ಮಾಡಿಕೊಂಡು ನಿಧಿಯನ್ನು ಸ್ವಂತ ಮಾಡಿಕೊಳ್ಳಲು 2500 ವರ್ಷಗಳಿಂದಲೂ ಎಷ್ಟೋ ಪ್ರಯತ್ನಗಳು ನಡೆದಿವೆ, ನಡೆಯುತ್ತಿದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಬ್ರಿಟಿಷರು ಕೂಡ ತಮ್ಮ ಫಿರಂಗಿಗಳಿಂದ ಆ ಗುಹೆಯ ದ್ವಾರವನ್ನು ಒಡೆದುಹಾಕಲು ಸಕಲ ಪ್ರಯತ್ನವನ್ನು ಮಾಡಿದರಂತೆ ಎಂಬುದಕ್ಕೆ ಸಾಕ್ಷ್ಯಿಗಳು ಇಲ್ಲಿ ಲಭ್ಯವಿದೆ. ಒಂದು ದೊಡ್ಡ ಬಂಡೆಯನ್ನು ತಳ್ಳಿ ಈ ಗುಹೆಯ ಒಳಭಾಗದಲ್ಲಿ ಪ್ರವೇಶಿಸುತ್ತಿದ್ದಂತೆ 10.4 ಮೀ ಎತ್ತರ, 5.2 ಮೀಟರ್ ಅಗಲವಿರುವ ಒಂದು ದ್ವಾರವು ಕಾಣಿಸುತ್ತದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಈ ಕೊಠಡಿಯ ಖಜಾನೆಯನ್ನು ರಕ್ಷಿಸುವ ಸೈನಿಕರಿಗಾಗಿ ನಿರ್ಮಾಣ ಮಾಡಿರುವುದಾಗಿದೆ. ಈ ಕೊಠಡಿಯ ಹಿಂದಿನ ದಾರಿಯಿಂದ ಕಜಾನೆಗೆ ದಾರಿ ಇದೆಯಂತೆ. ಈ ಕೊಠಡಿಯನ್ನು ದೊಡ್ಡದಾದ ಕಲ್ಲಿನ ಬಂಡೆಯಿಂದ ತಯಾರು ಮಾಡಿರುವ ದ್ವಾರವನ್ನು ಅಡ್ಡಲಾಗಿ ಇಟ್ಟು ಮುಚ್ಚಿದ್ದಾರಂತೆ. ಇದನ್ನೇ ಇಂದಿಗೂ ಯಾರು ಕೂಡ ತೆಗೆಯಲು ಸಾಧ್ಯವಾಗುತ್ತಿಲ್ಲ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಈ ಕೊಠಡಿಯ ಗೋಡೆಯ ಮೇಲೆ ಅರ್ಥವಾಗದ ಲಿಪಿಯಲ್ಲಿ ಪದಗಳನ್ನು ಕೆತ್ತಿದ್ದಾರೆ. ಆ ಪದಗಳ ಅರ್ಥ ಮಾಡಿಕೊಂಡರೆ ಎಷ್ಟೋ ಕೋಟಿ ಬೆಲೆಬಾಳುವ ಸಂಪತ್ತನ್ನು ಸ್ವಂತ ಮಾಡಿಕೊಳ್ಳಬುಹುದಾಗಿದೆ.
ಗುಹೆಯಲ್ಲಿ ಅಡಗಿರುವ ಗುಪ್ತ ನಿಧಿಗಳು
ಈ ರಾಜಗಿರಿಗೆ ಒಂದು ರೈಲ್ವೆ ಸ್ಟೇಷನ್ ಇದೆ. ಸ್ವತಂ ವಿಮಾನ ನಿಲ್ದಾಣವು ರಾಜಧಾನಿಗೆ ಇದೆ. ಈ ಕೋಟೆಗೆ ತಲುಪಲು 2 ರಸ್ತೆ ಮಾರ್ಗ ಕೂಡ ಇದೆ.