Search
  • Follow NativePlanet
Share
» »ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಮೈಸೂರಿನಿಂದ ಕೇವಲ 35 ಕಿಮೀ ದೂರದಲ್ಲಿರುವ ಸೋಮನಾಥಪುರ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಚೆನ್ನಕೇಶವ ದೇವಾಲಯ. ಈ ದೇವಾಲಯದ ವೈಭವವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವಾರಾಂತ್ಯದಲ್ಲಿ ಪ್ರವಾಸ ಮಾಡುವವರು ಸೋಮನಾಥಪುರಕ್ಕೊಮ್ಮೆ ಭೇಟಿ ನೀಡಬಹುದು.

ಚೆನ್ನಕೇಶವ ದೇವಾಲಯ

ಇಲ್ಲಿನ ಪ್ರಸಿದ್ಧ ಚೆನ್ನಕೇಶವ ದೇವಸ್ಥಾನದಿಂದ ಸೋಮನಾಥಪುರದ ಪ್ರವಾಸವನ್ನು ನೀವು ಪ್ರಾರಂಭಿಸಬಹುದು. ಈ ದೇವಾಲಯವನ್ನು ಕೇಶವ ದೇವಾಲಯ ಎಂದೂ ಕರೆಯುತ್ತಾರೆ. ಇದು ಪುರಾತನವಾದ ವೈಷ್ಣವ ದೇವಾಲಯವಾಗಿದ್ದು, ಕಾವೇರಿ ನದಿಯ ದಡದಲ್ಲಿದೆ. ಮೈಸೂರಿನಿಂದ 35 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು 1268 ರಲ್ಲಿ ಹೊಯ್ಸಳ ರಾಜ ನರಸಿಂಹ III ಸೇನಾಪತಿ ಸೋಮನಾಥ ನಿರ್ಮಿಸಿದನು. ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯವನ್ನು ಇತರ ಹೊಯ್ಸಳ ದೇವಾಲಯಗಳಂತೆ ಎತ್ತರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ.

ಸಂಕೀರ್ಣದಲ್ಲಿ ಮೂರು ದೇವಾಲಯಗಳಿದ್ದು, ಅದ್ಭುತ ಕೆತ್ತನೆಗಳನ್ನು ನೋಡಬಹುದು. ಈ ಮೂರು ದೇವಾಲಯಗಳಲ್ಲಿ ಕೇಶವ, ಜನಾರ್ದನ ಮತ್ತು ವೇಣುಗೋಪಾಲ ವಿಗ್ರಹಗಳಿದ್ದವು. ಆದರೆ ಕೇಶವನ ವಿಗ್ರಹ ಕಣ್ಮರೆಯಾದ ನಂತರ, ಈಗ ಇಲ್ಲಿ ಕೇವಲ ಎರಡು ವಿಗ್ರಹಗಳು ಮಾತ್ರ ಉಳಿದಿವೆ. ದಕ್ಷಿಣ ದೇವಾಲಯದ ಶೈಲಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ನೀವು ಇಲ್ಲಿಗೆ ಬರಬಹುದು.

ಮೈಸೂರು

ಸೋಮನಾಥಪುರಕ್ಕೆ ಬಂದವರು ಹತ್ತಿರದಲ್ಲಿರುವ ಮೈಸೂರಿಗೆ ಪ್ರವಾಸವನ್ನು ಯೋಜಿಸಬಹುದು. ಮೈಸೂರು ಐತಿಹಾಸಿಕ ಸ್ಥಳವಾಗಿದ್ದು, ಪ್ರಾಚೀನ ಕಟ್ಟಡಗಳಿಗೆ ಬಹಳ ಹೆಸರುವಾಸಿಯಾಗಿದೆ. ಇನ್ನು ಮೈಸೂರು ಅರಮನೆಯು ದೇಶ ಮತ್ತು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಗರದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಈ ಅರಮನೆಯೇ. ಇದನ್ನು ಭಾರತದ ಅತ್ಯಂತ ಭವ್ಯವಾದ ಮತ್ತು ಬೃಹತ್ ಅರಮನೆಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಹಿಂದೆ ಅರಮನೆಯು ಮೈಸೂರು ಮಹಾರಾಜರ ನಿವಾಸವಾಗಿತ್ತು. ಮೈಸೂರು ಅರಮನೆಯ ಹೊರತಾಗಿ, ನೀವು ಜಗನ್ಮೋಹನ ಅರಮನೆ, ಚಾಮುಂಡೇಶ್ವರಿ ದೇವಸ್ಥಾನ, ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಮೃಗಾಲಯ, ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

shivanasamudra waterfalls

ಶಿವನಸಮುದ್ರ

ಮೈಸೂರಿನ ಹೊರತಾಗಿ ಸೋಮನಾಥಪುರದಿಂದ 27 ಕಿ.ಮೀ ದೂರದಲ್ಲಿರುವ ಶಿವನಸಮುದ್ರಕ್ಕೆ ನೀವು ಪ್ರವಾಸವನ್ನು ಯೋಜಿಸಬಹುದು. ಇದು ಜಲಪಾತಗಳಿಗೆ (ಭರಚುಕ್ಕಿ ಮತ್ತು ಗಗನಚುಕ್ಕಿ) ಹೆಸರುವಾಸಿಯಾದ ಸಣ್ಣ ಹಳ್ಳಿಯಾಗಿದೆ. ಈ ಜಲಪಾತಗಳು ಕಾವೇರಿ ನದಿಯಿಂದ ಧುಮ್ಮಿಕ್ಕುತ್ತವೆ. 75 ಮೀಟರ್ ಎತ್ತರವಿರುವ ಈ ಎರಡು ಜಲಪಾತಗಳು ಇಲ್ಲಿನ ನೈಸರ್ಗಿಕ ಆಕರ್ಷಣೆ. ಪ್ರವಾಸಿಗರು ವಾರಾಂತ್ಯದಲ್ಲಿ ಮೋಜಿಗಾಗಿ ಇಲ್ಲಿಗೆ ಬರುತ್ತಾರೆ. ಉತ್ತಮ ಅನುಭವಕ್ಕಾಗಿ ನೀವೂ ಇಲ್ಲಿಗೆ ಬರಬಹುದು.

talkadu

ತಲಕಾಡು

ಮೇಲಿನ ಸ್ಥಳಗಳಲ್ಲದೆ, ನೀವು ತಲಕಾಡಿಗೆ ಸಹ ಪ್ರವಾಸವನ್ನು ಯೋಜಿಸಬಹುದು. ಈ ಸ್ಥಳವು ಮೈಸೂರಿನಿಂದ ಕೇವಲ 50 ಕಿ.ಮೀ ಮತ್ತು ಬೆಂಗಳೂರಿನಿಂದ 130 ಕಿ.ಮೀ ದೂರದಲ್ಲಿದೆ. ತಲಕಾಡು ಕಾವೇರಿ ನದಿಯ ದಡದಲ್ಲಿದೆ. ಈ ಸ್ಥಳದಲ್ಲಿ ಮೊದಲು 30 ದೇವಾಲಯಗಳಿದ್ದವು ಎಂದು ನಂಬಲಾಗಿದೆ. ಪ್ರಸ್ತುತ ನೀವು ಇಲ್ಲಿ ಪಂಚಲಿಂಗೇಶ್ವರ ದೇವಾಲಯವನ್ನು ನೋಡಬಹುದು. ಇದು ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಪಾತಾಳೇಶ್ವರ ದೇವಾಲಯವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ. ಬೆಳಗ್ಗೆ ಕೆಂಪು, ಮಧ್ಯಾಹ್ನ ಕಪ್ಪು ಮತ್ತು ಸಂಜೆ ಬಿಳಿ. ಇಲ್ಲಿ 12 ವರ್ಷಗಳಿಗೊಮ್ಮೆ ಉತ್ಸವವನ್ನು ಆಯೋಜಿಸಲಾಗುತ್ತದೆ. ಇದು ಪಂಚಲಿಂಗ ದರ್ಶನ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ತೆರಳುವುದು ಹೇಗೆ?

ಸೋಮನಾಥಪುರವು ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾಗಿದೆ, ಇಲ್ಲಿ ನೀವು ಎಲ್ಲಾ ಮೂರು ಮಾರ್ಗಗಳ ಮೂಲಕ ತಲುಪಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ, ರೈಲು ಮಾರ್ಗಕ್ಕಾಗಿ ನೀವು ಮೈಸೂರು ರೈಲು ನಿಲ್ದಾಣಕ್ಕೆ ಬರಬೇಕು. ಬೇಕಾದರೆ ನೀವು ರಸ್ತೆಯ ಮೂಲಕವೂ ಇಲ್ಲಿಗೆ ತಲುಪಬಹುದು. ಸೋಮನಾಥಪುರವು ಉತ್ತಮ ರಸ್ತೆಮಾರ್ಗಗಳ ಮೂಲಕ ರಾಜ್ಯದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+