ಯಾವುದಾದರೂ ಖಾಯಿಲೆ ಬಂದಾಗ ವೈದ್ಯರ ಬಳಿ ಹೋಗುವುದು ಸಾಮಾನ್ಯ, ಆದರೆ ಆ ಖಾಯಿಲೆ ವಾಸಿಯಾಗುವುದಿಲ್ಲ ಎಂದು ತಿಳಿದಾಗ ದೇವರ ಮೊರೆ ಹೋಗುತ್ತೇವೆ. ನಮ್ಮ ಭಾರತ ದೇಶದಲ್ಲಿ ದೇವತೆಗಳನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ನಮ್ಮ ದೇಶದಲ್ಲಿ ಪವಾಡಗಳು ನಡೆಯುವುದು. ಅದು ಮುಖ್ಯವಾಗಿ ದೇವತೆಗಳಲ್ಲಿಯು ಹಾಗು ದೇವ ಮಾನವರಲ್ಲಿಕಾಣಬಹುದು. ಈ ಲೇಖನವು ಕೆಲವು ರೋಗಿಗಳಿಗೆ ಪಾಶ್ವವಾಯುವಿನಂತಹ ಭಯಂಕರವಾದ ರೋಗವನ್ನು ಗುಣಪಡಿಸುವ ಒಂದು ಮಾಹಿಮಾನ್ವಿತವಾದ ದೇವಾಲಯದ ಬಗ್ಗೆ ತಿಳಿದುಕೊಳ್ಳಿ.
ಸಾಮಾನ್ಯವಾಗಿ ವೈದ್ಯರ ಕೈಯಲ್ಲಿಯೇ ಸಾಧ್ಯವಾಗದಂತಹುದು, ದೇವಾಲಯಕ್ಕೆ ತೆರಳಿದರೆ ಆಗುತ್ತದೆ ಎಂದು ಭಾವಿಸುವುದು ಸಹಜವಾದುದು. ಆದರೆ ನಂಬಿಕೆ ಇದ್ದರೆ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ದೇವರು ನಮ್ಮ ಜೊತೆಯೇ ಇದ್ದಾನೆ ಎಂದು ದೃಢ ಪಡಿಸಲು ಈ ದೇವಾಲಯ ಒಂದು ನಿರ್ದಶನವಾಗಿದೆ. ಈ ದೇವಾಲಯದಲ್ಲಿ ಪಾಶ್ಚವಾಯಿವಿನಂತಹ ಭಯಾನಕವಾದ ಖಾಯಿಲೆಯನ್ನು ಗುಣ ಪಡಿಸುತ್ತಾರೆ. ಅಸಲಿಗೆ ಆ ದೇವಾಲಯ ಎಲ್ಲಿದೆ? ಆ ದೇವಾಲಯಕ್ಕೆ ಭೇಟಿ ನೀಡುವ ಪಾಶ್ವವಾಯು ರೋಗಿಗಳು ನಿಜವಾಗಿಯೂ ಗುಣ ಹೊಂದುತ್ತಾರೆಯೇ ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆದುಕೊಳ್ಳಿ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಈ ಮಾಹಿಮಾನ್ವಿತವಾದ ದೇವಾಲಯದಲ್ಲಿ ಮುಖ್ಯವಾಗಿ ಪಾಶ್ವವಾಯುವಿನಂತಹ ಕಾಯಿಲೆಯಿಂದ ಬಳಲುತ್ತಿದ್ದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಅಂತಹವರು ಈ ದೇವಾಲಯದಲ್ಲಿ 7 ದಿನಗಳ ಕಾಲ ಉಳಿದುಕೊಳ್ಳಬೇಕು. ಭಕ್ತಾದಿಗಳು ಈ ಸ್ಥಳದಲ್ಲಿಯೇ ಇರುವುದಕ್ಕೆ ವಸತಿ ವ್ಯವಸ್ಥೆಗಳು ಕೂಡ ಇಲ್ಲಿ ಇವೆ. ಇಲ್ಲಿ ಉಚಿತವಾದ ಭೋಜನ, ವಸತಿಗಳನ್ನು ನೀಡಲಾಗುತ್ತದೆ

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಆದರೆ ಇಲ್ಲಿನ ಕೊಠಡಿಗಳು ಕೆಲವೇ ಕೆಲವು ಇದ್ದು, ಒಂದು ದೊಡ್ಡ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿಯೇ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ತಮ್ಮ ಪಾಶ್ವವಾಯು ರೋಗವನ್ನು ಗುಣ ಪಡಿಸಿಕೊಳ್ಳುತ್ತಾರೆ. ಇಲ್ಲಿ ಕೇವಲ ಪಾಶ್ವವಾಯು ರೋಗಿಗಳೇ ಅಲ್ಲದೇ ಆನೇಕ ವ್ಯಾಧಿಗಳಿಂದ ಬಳಲುತ್ತಿರುವವರು ಕೂಡ ಸ್ವಾಮಿಯ ದರ್ಶನ ಭಾಗ್ಯ ಪಡೆದು ಗುಣಪಡಿಸಿಕೊಂಡಿದ್ದಾರೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಇದು ಒಂದು ಮೂಢನಂಬಿಕೆಯೆಂದು ಭಾವಿಸಬಹುದು. ಆದರೆ ಹಲವಾರು ಚಿಕಿತ್ಸೆಗಳಿಂದ ಗುಣಪಡಿಸಲಾಗದಂತಹ ಹಲವಾರು ವ್ಯಾಧಿಗಳ ರೋಗಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ಗುಣಪಡಿಸಿಕೊಂಡಿರುವ ಉದಾಹರಣೆಗಳು ಇವೆ. ಇಲ್ಲಿ ಚಮತ್ಕಾರಕ್ಕಿಂತ ಹೆಚ್ಚಾಗಿ ನಂಬಿಕೆ ಹೆಚ್ಚು ಕಾರ್ಯ ನಿರ್ವಹಿಸುತ್ತದೆ ಎಂದೇ ಹೇಳಬಹುದು.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
500 ವರ್ಷಗಳ ಹಿಂದೆ ಒಬ್ಬ ಸನ್ಯಾಸಿ ಗುರುವು ಈ ಪ್ರದೇಶಕ್ಕೆ ಭೇಟಿ ನೀಡಿ ತನ್ನ ತಪಸ್ಸಿನಿಂದ ಹಾಗು ಧ್ಯಾನದಿಂದ ಆತನಲ್ಲಿ ಬರುತ್ತಿದ್ದ ರೋಗಿಗಳಿಗೆ ನಯ ಮಾಡುತ್ತಿದ್ದರಂತೆ. ಆ ಸನ್ಯಾಸಿಯ ಸಮಾಧಿಯನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ಸಮಾಧಿಯ ಸುತ್ತ 7 ದಿನಗಳ ಕಾಲ 7 ಪ್ರದಕ್ಷಿಣೆ ಹಾಕಿದವರಿಗೆ ಅನಾರೋಗ್ಯ ಎಂಬದು ದೂರವಾಗುತ್ತದೆ ಎಂಬುದು ಭಕ್ತರ ಪ್ರಬಲವಾದ ವಿಶ್ವಾಸವಾಗಿದೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಆ 7 ದಿನಗಳ ಕಾಲ ಪ್ರದಕ್ಷಿಣೆ ಮಾಡಿದ ನಂತರ ಅಲ್ಲಿ ಮಂಗಳ ಹಾರತಿಯನ್ನು ನೀಡುತ್ತಾರೆ. ಆ ಮಾಹಿಮಾನ್ವಿತವಾದ ಹಾರತಿ ತೆಗೆದುಕೊಂಡ ನಂತರ ಆನೇಕ ಮಂದಿ ರೋಗಿಗಳಿಗೆ ಕೈ, ಕಾಲುಗಳ ಚೇತರಿಕೆ ಕಂಡು ಬಂದಿವೆ ಎಂತೆ. ಹಾಗೆಯೇ ಪಾಶ್ವವಾಯುವಿನಿಂದಾಗಿ ಮಾತಗಳೇ ಆಡದೇ ಇರುವವರು ಕೂಡ ಸ್ವಲ್ಪ ಸ್ವಲ್ಪವಾಗಿ ಮಾತನಾಡುವುದು ಇವೆಲ್ಲವೂ ನಡೆದಿರುವ ಪುರಾವೆ ಇದೆಯಂತೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಈ ದೇವಾಲಯದ ಮುಖ್ಯ ವಿಶೇಷವೆನೆಂದರೆ ಭಕ್ತರಿಂದ ಯಾವುದೇ ಹಣವನ್ನು ಆಶಿಸುವುದಿಲ್ಲ. ಬದಲಾಗಿ ಭಕ್ತರೇ ತಮ್ಮ ಖಾಯಿಲೆ ಗುಣವಾದ್ದರಿಂದ ದೇವಾಲಯ ಅಭಿವೃದ್ಧಿಗೆ ಸಹಾಯಧನವನ್ನು ನೀಡುತ್ತಾರೆ. ಹೀಗೆ ಬರುವ ಸಹಾಯ ಧನದ ಮೂಲಕ ದೇವಾಲಯದ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ? ಈ ದೇವಾಲಯ ಇರುವುದು ರಾಜಸ್ಥಾನ ರಾಜ್ಯದ ನಾಗೂರ್ ಜಿಲ್ಲೆಯಲ್ಲಿದೆ. ಈ ದೇವಾಲಯವನ್ನು ಚರ್ತುರ್ ದಾಸ್ ಜೀ ಮಂದಿರ್ ಎಂದು ಕರೆಯುತ್ತಾರೆ. ಈ ದೇವಾಲಯವು ನಾಗೂರ್ ಜಿಲ್ಲೆಯ ದೇಗಾನ ಎಂಬ ಮಂಡಲದಲ್ಲಿ ಬುಡಾಟಿ ಎಂಬ ಪ್ರದೇಶದಲ್ಲಿದೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಈ ದೇವಾಲಯವು ಸುಮಾರು 200 ವರ್ಷಗಳಷ್ಟು ಹಳೆಯದಾದುದು ಎಂದು ಹೇಳಲಾಗುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೆ ದಿನನಿತ್ಯ 200 ರಿಂದ 250 ಪಾಶ್ವವಾಯು ಭಕ್ತರು ಭೇಟಿ ನೀಡುತ್ತಾರೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಪಾಶ್ವವಾಯುವಿನಿಂದ ಬಳಲುತ್ತಿರುವ ರೋಗಿಗಳು 7 ದಿನಗಳ ಕಾಲ ತಂಗಬೇಕಾಗುತ್ತದೆ. ಹಾಗೆಯೇ 1 ದಿನಕ್ಕೆ 2 ಬಾರಿ ಹಾರತಿಯನ್ನು ಬೆಳಗಲಾಗುತ್ತದೆ. ಆ ಹಾರತಿ ಸಮಯದಲ್ಲಿ ಪಾಶ್ವವಾಯು ಭಕ್ತರು ಇರಲೇಬೇಕು. ಹಲವಾರು ಭಕ್ತಾಧಿಗಳು ಚೇತರಿಸಿಕೊಂಡಿರುವ ಅದೆಷ್ಟೂ ನಿದರ್ಶನಗಳು ಇವೆ.

ಅಸಲಿಗೆ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?
ಚರ್ತುರ್ ದಾಸ್ ಜೀ ಮಹಾರಾಜ ಮಂದಿರಕ್ಕೆ ಯಾವುದೇ ಪ್ರವೇಶದ ಶುಲ್ಕವಿರುವುದಿಲ್ಲ. ಈ ದೇವಾಲಯವು ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಭಕ್ತಾಧಿಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ. ಪಾಶ್ವವಾಯುವಿನಿಂದ ಬಳಲುತ್ತಿರುವವರು ಯಾವುದೇ ಚಿಕಿತ್ಸೆಯಿಂದ ಗುಣವಾಗದೇ ಇರುವವರು ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ.

ಹೇಗೆ ತಲುಪಬೇಕು?
ಸಮೀಪದ ವಿಮಾನ ನಿಲ್ದಾಣ
ಸಮೀಪದ ವಿಮಾನ ನಿಲ್ದಾಣವೆಂದರೆ ಅದು ರಾಜಸ್ಥಾನ ರಾಜ್ಯದ ಜೈಪುರ. ಇಲ್ಲಿಂದ ನೇರವಾಗಿ ಬಸ್ಸುಗಳು ದೊರೆಯುತ್ತದೆ. ಇಲ್ಲಿಂದ ಚರ್ತುರ್ ದಾಸ್ ಜೀ ಮಂದಿರಕ್ಕೆ ತಲುಪಲು ಸುಮಾರು 5 ರಿಂದ 6 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ಹೇಗೆ ತಲುಪಬೇಕು?
ಸಮೀಪದ ರೈಲ್ವೆ ನಿಲ್ದಾಣ
ಈ ಮಾಹಿಮಾನ್ವಿತ ದೇವಾಲಯಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಬೂಟಾಟಿ ಮೆಟ್ರೋ ಸ್ಟೇಷನ್. ಇಲ್ಲಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.


Click it and Unblock the Notifications
















