ನಮ್ಮ ಭಾರತ ದೇಶದಲ್ಲಿ ಅನೇಕ ದೇವಿಯ ದೇವಾಲಯಗಳಿವೆ. ಅನೇಕ ದೇವಿಯ ದೇವಾಲಯಗಳು ತನ್ನದೇ ಮಹತ್ವವನ್ನು ಹಾಗು ಶಕ್ತಿಯನ್ನು ಹೊಂದಿದೆ. ಬೇಡಿದ ವರವನ್ನು ಕರುಣಿಸುವ ತಾಯಿಗೆ ದೇಶದಾದ್ಯಂತ ಪೂಜಿಸುತ್ತಾರೆ. ಆ ತಾಯಿಯ ದಯೆ ಇದ್ದಾರೆ ಎಲ್ಲಾ ಕಾರ್ಯಗಳು ಸುಗಮವಾಗಿ ನೆರವೇರುತ್ತದೆ ಎಂದು ನಂಬಲಾಗಿದೆ. 108 ಶಕ್ತಿ ಪೀಠಗಳು ನಮ್ಮ ಭಾರತ ದೇಶದಲ್ಲಿದೆ. ಒಂದೊಂದು ದೇವಾಲಯವು ಪಾರ್ವತಿ ದೇವಿ (ಸತಿ ದೇವಿ)ಯ ಅನೇಕ ಭಾಗಗಳು ಭೂಮಿಯ ಮೇಲೆ ಬಿದ್ದು ಪುಣ್ಯ ಕ್ಷೇತ್ರಗಳಾಗಿವೆ.
ಮಹಿಳೆಯು ಒಂದು ಶಕ್ತಿ. ಆ ಶಕ್ತಿಯನ್ನು ಬೇಡಿಕೊಂಡರೆ ಸಲಕವು ಸಿದ್ಧಿಯಾಗುತ್ತದೆ. ಬೇಡಿದ ವರವನ್ನು ಶೀಘ್ರವಾಗಿ ನೀಡುವ ತಾಯಿಯ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಿಯ ದೇವಾಲಯವಿದೆ. ಇದು ತುಸು ವಿಭಿನ್ನವಾದ ದೇವಾಲಯ ಎಂದೇ ಹೇಳಬಹುದು. ಈ ದೇವಿಯ ದೇವಾಲಯವು ಉತ್ತರ ಭಾರತದ ರಾಜ್ಯವೊಂದರಲ್ಲಿದೆ. ಈ ದೇವಿಯನ್ನು ಪರಹುಲ್ ದೇವಿ ಎಂದು ಕರೆಯುತ್ತಾರೆ. ಶಕ್ತಿಯ ಅವತಾರವೆಂದೇ ಈ ತಾಯಿಯನ್ನು ಪೂಜಿಸಲಾಗುತ್ತಿದೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಈಕೆಯು ಅತ್ಯಂತ ಪ್ರಭಾವ ಶಾಲಿ ದೇವಿ ಎಂದೂ ಸಹ ಕೊಂಡಾಡಲಾಗುತ್ತಿದೆ. ದೇಶದ ಮೂಲೆ-ಮೂಲೆಗಳಿಂದ ಅನೇಕ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಕೋರಿಕೆಗಳನ್ನು ಕೋರಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಅಥವಾ ಜೀವನದಲ್ಲಿ ಎಡೆ ಬಿಡದೆ ತೊಂದರೆಯನ್ನು ಅನುಭವಿಸುತ್ತಿರುವವರು ಈ ದೇವಿಯನ್ನು ಕುರಿತು ಹರಕೆ ಹೊತ್ತಿಕೊಳ್ಳುತ್ತಾರೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಆ ತಾಯಿಯ ಮೇಲೆ ಇಟ್ಟ ನಂಬಿಕೆ ನಿಜವೇ ಆದರೆ ಅದು ಖಚಿತವಾಗಿಯೂ ನೆರವೇರುತ್ತದೆ. ಸ್ಥಳೀಯರ ಪ್ರಕಾರ "ಹೀಗೆ ಹರಕೆ ಹೊತ್ತಿಕೊಂಡವರು ದೇವಿಯನ್ನು ಸಂಪೂರ್ಣವಾಗಿ ನಂಬಿದ್ದೇ ಆದಲ್ಲಿ ಅವರ ಬಯಕೆ ತಪ್ಪದೇ ಈಡೇರುತ್ತದೆ".
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಈ ಮಹಿಮಾನ್ವಿತವಾದ ದೇವಾಲಯವು ಉತ್ತರ ಪ್ರದೇಶ ರಾಜ್ಯದ ಕಾನಪುರ ದೇಹಾತ್ ಜಿಲ್ಲೆಯಲ್ಲಿ ಈ ಪುರಾತನವಾದ ದೇವಾಲಯವಿದೆ. ರೂರಾ-ಶಿವಲಿ ರಸ್ತೆಯಿಂದ ಸುಮಾರು 3 ಕಿ.ಮೀ ಗಳಷ್ಟು ದೂರದಲ್ಲಿರುವ ಲಮಹರಾ ಎಂಬ ಗ್ರಾಮದ ಸರಹದ್ದಿನಲ್ಲಿರುವುರಿಂದ ಒಂದು ನದಿ ತಟದ ಮೇಲೆ ತಾಯಿ ಪರಹುಲ್ ದೇವಿಯ ದೇವಾಲಯವಿದೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಇಲ್ಲಿ ಮಹಾದೇವನ ದೇವಾಲಯವು ಕೂಡ ಇದೆ. ಪರಹುಲ್ ದೇವಿಯು ಸಾಕಷ್ಟು ಶಕ್ತಿವಂತ ದೇವಿಯಾಗಿದ್ದು, ಉತ್ತರ ಪ್ರದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ದೇಶದಾದ್ಯಂತ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ತಾಯಿಯನ್ನು ದರ್ಶಿಸಲು ಭೇಟಿ ನೀಡುತ್ತಾರೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಈ ಪ್ರದೇಶವು ಐತಿಹಾಸಿಕ ನಾಯಕರಾದ ಅಲಾಹ್ ಮತ್ತು ಉದ್ಧಳ ಎಂಬುವವರ ಕಥೆಗೆ ಈ ದೇವಾಲಯದೊಂದಿಗೆ ಬಲು ರೋಚಕವಾಗಿ ತಳುಕು ಹಾಕಿಕೊಂಡಿದೆ. ಆ ಕಥೆ ಏನೆಂದರೆ ಅಲಾಹ್ ಎಂಬ ಯೋಧನು ಈ ದೇವಿಯ ಪರಮ ಭಕ್ತನಾಗಿದ್ದನು. ಆತನು ಈ ತಾಯಿಯ ಮುಂದೆ ನಿಂತು ಯುದ್ಧದಲ್ಲಿ ವಿಜಯಿಯಾಗಬೇಕು ಎಂದು ಬೇಡಿಕೊಳ್ಳುತ್ತಾನೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಹಾಗೆಯೇ ಯುದ್ಧದಲ್ಲಿ ಆ ಯೋಧನು ಜಯಿಸುತ್ತಾನೆ. ಇದರಿಂದ ಸಂತಸಗೊಂಡ ಆತ ಕೆ.ಜಿ ಗಟ್ಟಲೆ ಬಂಗಾರವಿರುವ ದೀಪ ಉರಿಸುವ ಕುಂಡವೊಂದನ್ನು ದೇವಿಗೆ ಕಾಣಿಕೆಯಾಗಿ ಅರ್ಪಿಸುತ್ತಾನೆ. ಆ ಸುವರ್ಣವು ಸಾಕಷ್ಟು ಹೊಳೆಯುತ್ತಿರುತ್ತದೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಅದರ ಹೊಳಪು ಹೇಗಿತ್ತೆಂದರೆ ಅದರಿಂದ ಪ್ರತಿಫಲಿತವಾದ ಬೆಳಕು ದೂರದ ಕನ್ನೌಜ್ ಅರಮನೆಗೆ ತಲುಪಿ ಅಲ್ಲಿ ರಾಣಿ ಪದ್ಮಾವತಿ ಮಲಗಲು ಅದು ಅಡ್ಡಿಪಡಿಸುತ್ತಿತ್ತು. ಅಲ್ಲಿನ ದೊರೆಯಾದ ಉದ್ಧಳ ಎಂಬವವನು ಇದನ್ನು ಕಂಡು ಆ ಕುಂಡವನ್ನು ರಿಂದ್ ಎಂಬ ನದಿಯ ಮಧ್ಯಭಾಗದಲ್ಲಿ ಎಸೆಯುತ್ತಾನೆ.
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತದೆ ಎಂತೆ...!
ಅಷ್ಟಕ್ಕೂ ಇಲ್ಲಿನ ಹಿರಿಯರು ಹೇಳುವ ಪ್ರಕಾರ ಇಂದಿಗೂ ಮಧ್ಯ ರಾತ್ರಿಯ ಸಮಯದಲ್ಲಿ ಆ ಸುವರ್ಣಕುಂಡದಿಂದ ದೇವಿಯ ಸನ್ನಿಧಿಯಲ್ಲಿ ದೀಪ ಬೆಳಗುತ್ತಾ ಇರುತ್ತದೆ ಎಂತೆ. ಹಾಗೆಯೇ ಪ್ರತಿ ದಿನ ಮುಂಜಾನೆಯ ಸಂದರ್ಭದಲ್ಲಿ ಅರ್ಚಕರು ಸನ್ನಿಧಿಗೆ ಬಂದಾಗ ತಾಜಾ ಗುಲಾಬಿ ಹೂವು ದೇವಿಗೆ ಏರಿಸಲ್ಪಟ್ಟಿರುತ್ತವಂತೆ.