ಭಾರತದಲ್ಲಿ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಸ್ಥಳಗಳಲ್ಲಿ ಹಿಮಾಚಲ ಪ್ರದೇಶವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಸ್ಥಳವು ಎಲ್ಲಾ ರೀತಿಯ ಪ್ರಯಾಣಿಕರಿಗೆ ಅಂದರೆ ಪ್ರಕೃತಿ ಪ್ರಿಯರಿಂದ ಸಾಹಸ ಪ್ರಿಯರಿಗೆ, ವಾರಾಂತ್ಯದಲ್ಲಿ ವಿಶ್ರಾಂತಿ ಆನಂದಿಸುವವರಿಗೆ ಮತ್ತು ಧಾರ್ಮಿಕ ಪ್ರವಾಸಗಳನ್ನು ಇಷ್ಟಪಡುವವರಿಗೆ ಪರ್ಫೆಕ್ಟ್ ಪ್ಲೇಸ್ ಆಗಿದೆ. ದೆಹಲಿ ಮತ್ತು ಸುತ್ತಮುತ್ತ ವಾಸಿಸುವ ಜನರಿಗಂತೂ ಹಿಮಾಚಲ ಪ್ರದೇಶವು ಅತ್ಯುತ್ತಮ ವಾರಾಂತ್ಯದ ವಿಹಾರ ತಾಣವಾಗಿದೆ. ನೀವು ಮಾನ್ಸೂನ್ ಹೊರತುಪಡಿಸಿ ಯಾವುದೇ ಸಮಯದಲ್ಲಿ ಇಲ್ಲಿಗೆ ಬರಲು ಯೋಜಿಸಬಹುದಾದರೂ, ಜನ್ಮಾಷ್ಟಮಿಯಿಂದ ರಾಧಾ ಅಷ್ಟಮಿಯವರೆಗೆ ಭೇಟಿ ನೀಡಲು ಉತ್ತಮವಾದ ಸ್ಥಳವಿದೆ. ಅದೇ ಮಣಿಮಹೇಶ ಸರೋವರ.
ಆಗಸ್ಟ್ 26 ರಿಂದ ಪ್ರಾರಂಭ
ಮಣಿಮಹೇಶ್ ಸರೋವರವನ್ನು ದಾಲ್ ಲೇಕ್ ಎಂದೂ ಕರೆಯುತ್ತಾರೆ. ಇಲ್ಲಿಗೆ ಬಂದ ನಂತರವೇ ಈ ಸರೋವರದ ಸೊಬಗು ನಿಮಗೆ ಅರಿವಾಗುತ್ತದೆ. ಪ್ರತಿ ವರ್ಷ ಜನ್ಮಾಷ್ಟಮಿಯಂದು ಮಣಿಮಹೇಶ ಲೇಕ್ಗೆ ಪ್ರವಾಸವನ್ನು ಆಯೋಜಿಸಲಾಗುತ್ತದೆ, ಇದು ಈ ವರ್ಷ ಆಗಸ್ಟ್ 26 ರಿಂದ ಪ್ರಾರಂಭವಾಗಿದೆ.
ಸೆ. 11ರವರೆಗೆ ಮುಂದುವರಿಯಲಿದೆ
ಹಿಮಾಚಲ ಪ್ರದೇಶದಲ್ಲಿರುವ ಮಣಿಮಹೇಶ್ಗೆ ಪಯಣ ಆಗಸ್ಟ್ 26ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 11ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ನೀವು ಅದನ್ನು ಯಾವಾಗ ಬೇಕಾದರೂ ಯೋಜಿಸಬಹುದು.

ಶಿವನ ನೆಲೆಯಾಗಿದೆ ಮಣಿಮಹೇಶ
ಈ ಸರೋವರದಿಂದ ಸ್ಪಷ್ಟವಾಗಿ ಗೋಚರಿಸುವ ಮಣಿಮಹೇಶ ಕೈಲಾಸ ಶಿಖರದಲ್ಲಿ ಶಿವನು ನೆಲೆಸಿದ್ದಾನೆ ಎಂದು ನಂಬಲಾಗಿದೆ. ಮಣಿಮಹೇಶ ಯಾತ್ರೆಯು ಪ್ರತಿ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಹಿಂದೂ ಹಬ್ಬ ಜನ್ಮಾಷ್ಟಮಿಯ ಸಂದರ್ಭದಲ್ಲಿ ನಡೆಯುತ್ತದೆ. 9 ನೇ ಶತಮಾನದಲ್ಲಿ ಸ್ಥಳೀಯ ರಾಜ ಸಾಹಿಲ್ ವರ್ಮನ್ ಶಿವನ ದರ್ಶನ ಪಡೆದಾಗ ಈ ಪ್ರಯಾಣವು ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಮಣಿಮಹೇಶ ಸರೋವರದ ಮೇಲೆ ದೇವಾಲಯವನ್ನು ಸ್ಥಾಪಿಸಲು ಸೂಚನೆ ನೀಡಿದರು.
ಜನ್ಮಾಷ್ಟಮಿಯಂದು ಸ್ನಾನ
ಈ ಧಾರ್ಮಿಕ ಯಾತ್ರೆಯಲ್ಲಿ, ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸಣ್ಣ ರಾಜ ಸ್ನಾನವನ್ನು (ಛೋಟಾ ಶಾಹಿ ನಹೋನ್) ಆಯೋಜಿಸಲಾಗಿದೆ, ಆದರೆ ರಾಧಾ ಅಷ್ಟಮಿಯಂದು ಅಂದರೆ ಸೆಪ್ಟೆಂಬರ್ 11 ರಂದು ದೊಡ್ಡ ರಾಜ ಸ್ನಾನವನ್ನು ಆಯೋಜಿಸಲಾಗುತ್ತದೆ. ಇದು ಸೆಪ್ಟೆಂಬರ್ 10 ರಂದು ರಾತ್ರಿ 11.15 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2.20 ರವರೆಗೆ ನಡೆಯಲಿದೆ.
ಚಾಪರ್ ಸೌಲಭ್ಯ
ಭರ್ಮೂರ್ನಿಂದ ಗೌರಿಕುಂಡ್ಗೆ ಆಗಸ್ಟ್ 22 ರಿಂದ ಚಾಪರ್ ವಿಮಾನಗಳು ಪ್ರಾರಂಭವಾಗಲಿವೆ. ಮಣಿಮಹೇಶ ಯಾತ್ರೆಯ ವೇಳೆ ನಡೆದಾಡಲು ಸಾಧ್ಯವಾಗದ ಶಿವಭಕ್ತರು ವಿಮಾನ ಪ್ರಯಾಣದ ಲಾಭ ಪಡೆದು ಪ್ರಯೋಜನ ಪಡೆಯಬಹುದು.

ಪ್ರಯಾಣಕ್ಕಾಗಿ ಪ್ರಮುಖ ಸಲಹೆಗಳು
· ಪ್ರಯಾಣದ ಸಮಯದಲ್ಲಿ ಭಕ್ತರು ತಮ್ಮ ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿರಬೇಕು.
· ಆರೋಹಣವನ್ನು ನಿಧಾನವಾಗಿ ಮಾಡಬೇಕು, ನೀವು ಉಸಿರಾಟದ ಸಮಸ್ಯೆ ಅನುಭಿಸಿದರೆ ನಿಲ್ಲಿಸಿ ಮತ್ತು ವಿಶ್ರಾಂತಿ ಪಡೆದು ಮುಂದೆ ಸಾಗಬೇಕು.
· ಛತ್ರಿ, ಬೆಚ್ಚಗಿನ ಬಟ್ಟೆ, ಗಟ್ಟಿಮುಟ್ಟಾದ ಬೂಟುಗಳು, ಟಾರ್ಚ್ ಮತ್ತು ಸ್ಟಿಕ್ ಅನ್ನು ಒಯ್ಯಿರಿ.
· ಆಡಳಿತ ಸೂಚಿಸಿದ ಮಾರ್ಗದಲ್ಲಿ ಮಾತ್ರ ನಡೆಯಿರಿ.
· ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ, ಹತ್ತಿರದ ಶಿಬಿರವನ್ನು ಸಂಪರ್ಕಿಸಿ.
· ಅಪರೂಪದ ಗಿಡಮೂಲಿಕೆಗಳು ಮತ್ತು ಸಸ್ಯಗಳನ್ನು ಮುಟ್ಟಬೇಡಿ, ಆದರೆ ಅವುಗಳ ಸಂರಕ್ಷಣೆಯಲ್ಲಿ ಸಹಕರಿಸಿ.
· ಪ್ರಯಾಣದ ಸಮಯದಲ್ಲಿ ನಿಮ್ಮ ಕೆಲವು ಗುರುತಿನ ಚೀಟಿಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.
· ಬೆಳಗ್ಗೆ 4 ಗಂಟೆಯ ಮೊದಲು ಮತ್ತು ಸಂಜೆ 5 ಗಂಟೆಯ ನಂತರ ಪ್ರಯಾಣಿಸಬೇಡಿ.


Click it and Unblock the Notifications
















