Search
  • Follow NativePlanet
Share
» »ಕೇದಾರನಾಥನ ಬಾಗಿಲು ತೆರೆದಿದೆ... ಇನ್ನು 6 ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ

ಕೇದಾರನಾಥನ ಬಾಗಿಲು ತೆರೆದಿದೆ... ಇನ್ನು 6 ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ

ಚಾರ್‌ಧಾಮಗಳಲ್ಲಿ ಒಂದಾದ ಕೇದಾರನಾಥ ಕ್ಷೇತ್ರವು ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕೇದಾರನಾಥನ ದರ್ಶನಕ್ಕೆ ಹೋಗಬೇಕೆಂದಿರುವವರು ಈಗ ದರ್ಶನಕ್ಕೆ ಹೋಗುವ ಪ್ಲ್ಯಾನ್ ಮಾಡಬಹುದು. ಯಾಕೆಂದರೆ ಎಪ್ರಿಲ್ 29ರಿಂದ ದೇವಸ್ಥಾನವು ಭಕ್ತರ ದರ್ಶನಕ್ಕಾಗಿ ತೆರೆದಿದೆ. ಇನ್ನು 6ತಿಂಗಳುಗಳ ಕಾಲ ಭಕ್ತರಿಗೆ ದರ್ಶನ ದೊರೆಯುತ್ತದೆ. ಹಾಗಾಗಿ ಉತ್ತರಖಂಡದ ಕೇದಾರನಾಥನ ಸಾನಿಧ್ಯಕ್ಕೆ ಹೋಗಬೇಕೆಂದಿರುವವರು ಈಗಲೇ ಹೋಗೋದು ಒಳ್ಳೆಯದು.

 ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ! ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ 5ನೇ ಸ್ಥಾನದಲ್ಲಿದೆ. ಈ ಸ್ಥಳದಲ್ಲಿ ವಿಷ್ಣುವಿನ ಅವತಾರ ಮಹಾತಪಸ್ವಿ ನಾರಾಯಣ ಋಷಿ ತಪಸ್ಸು ಮಾಡುತ್ತಿದ್ದರು. ಅವರ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಯೂರಿದರು ಎನ್ನಲಾಗುತ್ತದೆ.

ಎಪ್ರಿಲ್‌ 29 ರಿಂದ ಭಕ್ತರಿಗೆ ದರ್ಶನ

ಎಪ್ರಿಲ್‌ 29 ರಿಂದ ಭಕ್ತರಿಗೆ ದರ್ಶನ

PC: Naresh Balakrishnan

ಈ ಜ್ಯೋತಿರ್ಲಿಂಗವು ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ ಇದೆ. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಎಪ್ರಿಲ್‌ನಿಂದ ನವಂಬರ್‌ವರೆಗೆ ದರ್ಶನಕ್ಕಾಗಿ ತೆರೆದಿರುತ್ತದೆ. ಈ ವರ್ಷ ಕೇದಾರನಾಥ ಮಂದಿರವು ಎಪ್ರಿಲ್‌ 29 ರಿಂದ ಭಕ್ತರಿಗೆ ದರ್ಶನಕ್ಕಾಗಿ ತೆರೆಯಲಾಗಿದೆ.

ಲೇಸರ್ ಲೈಟ್‌ ಶೋ

ಲೇಸರ್ ಲೈಟ್‌ ಶೋ

PC:Deepak Seth

ಕೇದಾರನಾಥ ಮಂದಿರದಲ್ಲಿ ಮೊದಲಬಾರಿಗೆ ಬಣ್ಣ ಬಣ್ಣದ ಲೇಸರ್‌ ಲೈಟ್‌ ಶೋ ನೋಡಲು ಸಿಗುತ್ತದೆ. ಈ ಶೋವನ್ನು ಪ್ರತಿದಿನ ರಾತ್ರಿ ಮಹಾ ಆರತಿಯ ನಂತರ ನಡೆಸಲಾಗುತ್ತದೆ. ಇದರಲ್ಲಿ ಭಕ್ತರಿಗೆ ಬಣ್ಣ ಬಣ್ಣದ ಲೈಟ್‌ನ ಟೆಕ್ನಿಕ್‌ ಜೊತೆ ವಿಭಿನ್ನ ಕಥೆ ನೋಡಲು ಸಿಗುತ್ತದೆ. ಭಕ್ತರಿಗೆ ಮಂದಿರದ ಇತಿಹಾಸದ ಬಗ್ಗೆ ಹೇಳಲಾಗುತ್ತದೆ.

ಮಂದಿರದ ಸ್ವರೂಪ ಹೀಗಿದೆ

ಮಂದಿರದ ಸ್ವರೂಪ ಹೀಗಿದೆ

PC: Shaq774

ಈ ಮಂದಿರದ ಮುಖ್ಯ ಮಂಟಪ ಹಾಗೂ ಗರ್ಭಗ್ರಹದ ಸುತ್ತಲೂ ಪ್ರದಕ್ಷಿಣೆ ಪಥ ಇದೆ. ಹೊರಗಿನ ಆವರಣದಲ್ಲಿ ನಂದಿಯ ವಿಗ್ರಹವಿದೆ. ಈ ಮಂದಿರದ ಸ್ಥಾಪನೆಯನ್ನು ಯಾರು ಮಾಡಿದ್ದು ಎನ್ನುವುದರ ಉಲ್ಲೇಖ ಇನ್ನೂ ಇಲ್ಲ. ಆದರೆ ಈ ಮಂದಿರವನ್ನು ಆದಿಗುರು ಶಂಕರಾಚಾರ್ಯರು ಮಾಡಿದ್ದು ಎನ್ನಲಾಗುತ್ತದೆ.

ದರ್ಶನದ ಸಮಯ

ದರ್ಶನದ ಸಮಯ

PC: Naresh Balakrishnan

ಕೇದಾರನಾಥ ಮಂದಿರವು ಭಕ್ತರಿಗಾಗಿ ಬೆಳಗ್ಗೆ 6 ಗಂಟೆಗೆ ತೆರೆಯುತ್ತದೆ. ಮಧ್ಯಾಹ್ನ 3 ರಿಂದ 5ಗಂಟೆಯ ವರೆಗೆ ಮಂದಿರವನ್ನು ಮುಚ್ಚಿ ವಿಶೇಷ ಪೂಜೆ ಮಾಡಲಾಗುತ್ತದೆ. ನಂತರ ಸಂಜೆ 5 ಗಂಟೆಗೆ ಮಂದಿರದ ಬಾಗಿಲು ತೆರೆಯಲಾಗುತ್ತದೆ. ರಾತ್ರಿ 8.30ಕ್ಕೆ ಮಂದಿರದ ದ್ವಾರವನ್ನು ಮುಚ್ಚಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Sutharsan Shekhar

ಭಾರತದ ಯಾವುದೇ ನಗರದಿಂದಲೂ ನೀವು ಕೇದಾರನಾಥವನ್ನು ತಲುಪಬಹುದು. ಋಷಿಕೇಶ್, ಹರಿದ್ವಾರ ಅಥವಾ ಡೆಹ್ರಡೂನ್ ತಲುಪಿದರೆ ಅಲ್ಲಿಂದ ಕಾರ್ ಅಥವಾ ಬಸ್ ದೊರೆಯುತ್ತದೆ.
ರೈಲು ಮಾರ್ಗ: ದೆಹಲಿಯಿಂದ ಹರಿದ್ವಾರ ಅಥವಾ ಋಷಿಕೇಶ್ ರೈಲು ಮಾರ್ಗದ ಮೂಲಕ 4 ರಿಂದ 5 ಗಂಟೆಯಲ್ಲಿ ತಲುಪಬಹುದು.
ವಿಮಾನ ಮಾರ್ಗ: ಕೇದಾರನಾಥದಿಂದ ಸುಮಾರು 239 ಕಿ.ಮೀ ದೂರದಲ್ಲಿ ಜಾಲಿ ಗ್ರಂಟ್ ಏರ್‌ಪೋರ್ಟ್ ಇದೆ. ಇದುವೇ ಕೇದಾರನಾಥ ಕ್ಷೇತ್ರಕ್ಕೆ ಸಮೀಪ ಇರುವ ಏರ್‌ಪೋರ್ಟ್ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X