ಯಮರಾಜನ ಒಂದು ವಿಶೇಷ ಮಂದಿರ ಹಿಮಾಚಲದ ಚಂಬಾ ಜಿಲ್ಲೆಯಲ್ಲಿ ಬರ್ಮೋರ್ ಪ್ರದೇಶದಲ್ಲಿದೆ. ಈ ಮಂದಿರ ಮನೆಯ ರೀತಿ ಕಾಣುತ್ತದೆ. ಗ್ರಂಥಗಳ ಅನುಸಾರ ಮನುಷ್ಯರ ಕರ್ಮದ ಫಲವನ್ನು ದೇವರು ಬರೆಯುತ್ತಾನೆ. ಮನುಷ್ಯನ ಮರಣದ ನಂತರ ಯಮದೂತರು ಮನುಷ್ಯನ ಆತ್ಮವನ್ನು ಎಳೆದುಕೊಂಡು ಹೋಗುತ್ತಾರೆ. ಯಮರಾಜ ದಂಢವನ್ನು ನೀಡುತ್ತಾನೆ,
ಧರ್ಮೇಶ್ವರ ಮಹಾದೇವ ದೇವಾಲಯ
ಯಮರಾಜನ ಈ ದೇವಾಲಯವನ್ನು ಧರ್ಮೇಶ್ವರ ಮಹದೇವ ದೇವಾಲಯ ಎನ್ನುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಸಾವನ್ನಪ್ಪಿದ ನಂತರ ಆತ್ಮ ದೇಹದವನ್ನು ಬಿಡುವಾಗ ಅದು ನೇರವಾಗಿ ಧರ್ಮೇಶ್ವರ ಮಹಾದೇವ ದೇವಾಲಯಕ್ಕೆ ಬರುವುದು ಎನ್ನಲಾಗುತ್ತದೆ.
ಖಾಲಿ ಕೋಣೆಯಲ್ಲಿ ಕುಳಿತಿದ್ದಾನೆ ಯಮರಾಜ
ಇದೇ ಸ್ಥಳದಲ್ಲಿ ಯಮನು ವ್ಯಕ್ತಿಯ ಕರ್ಮದ ನಿರ್ಧಾರ ಮಾಡುತ್ತಾನೆ. ನೋಡಲು ಒಂದು ಮನೆಯಂತೆ ಕಾಣುತ್ತದೆ. ಇಲ್ಲೊಂದು ಖಾಲಿ ಕೋಣೆ ಇದೆ. ಈ ಕೋಣೆಯಲ್ಲೇ ಯಮರಾಜ ಆಸೀನನಾಗಿರುತ್ತಾನೆ ಎನ್ನಲಾಗುತ್ತದೆ.
ಇಲ್ಲಿ ಇನ್ನೊಂದು ಕೋಣೆ ಇದೆ ಅದನ್ನು ಚಿತ್ರಗುಪ್ತನ ಕೋಣೆ ಎನ್ನಲಾಗುತ್ತದೆ.
ಯಮರಾಜನ ನಿರ್ಧಾರ
ಯಾವುದೇ ವ್ಯಕ್ತಿ ಅಥವಾ ಪ್ರಾಣಿಯ ಮೃತ್ಯುವಾಗುತ್ತದೆಯೋ ಆಗ ಯಮರಾಜರ ಧೂತರು ಆ ವ್ಯಕ್ತಿಯ ಆತ್ಮವನ್ನು ಮೊದಲು ತೆಗೆದುಕೊಂಡು ಈ ದೇವಾಲಯಕ್ಕೆ ಬರುತ್ತಾರಂತೆ. ಮೊದಲಿಗೆ ಚಿತ್ರಗುಪ್ತ ಆ ವ್ಯಕ್ತಿಯ ಎಲ್ಲಾ ಪಾಪಗಳನ್ನು ಓದುತ್ತಾನಂತೆ. ನಂತರ ಮುಂದಿನ ಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಆ ಕೋಣೆಯನ್ನು ಯಮರಾಜನ ಕಚೇರಿ ಎನ್ನಲಾಗುತ್ತದೆ. ಅಲ್ಲಿ ಯಮರಾಜನು ಆ ವ್ಯಕ್ತಿಯ ಪಾಪಗಳಿಗನುಗುಣವಾಗಿ ಶಿಕ್ಷೆಯನ್ನು ಘೋಷಿಸುತ್ತಾನೆ.
ಈ ಮಂದಿರದಲ್ಲಿದೆ ನಾಲ್ಕು ಅದೃಶ್ಯ ಬಾಗಿಲು
ಈ ಮಂದಿರದಲ್ಲಿ ನಾಲ್ಕು ಅದೃಶ್ಯ ಬಾಗಿಲು ಇದೆ ಎನ್ನಲಾಗಿದೆ. ಅದು ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕಂಚಿನಿಂದ ಕೂಡಿದ್ದಾಗಿದೆ. ಯಮರಾಜನ ತೀರ್ಪು ಬಂದ ನಂತರ ಆ ವ್ಯಕ್ತಿಯನ್ನು ಅವರ ಕರ್ಮಗಳಿಗೆ ಅನುಸಾರ ಸ್ವರ್ಗ ಅಥವಾ ನರಕಕ್ಕೆ ಇದೇ ಬಾಗಿಲುಗಳ ಮೂಲಕ ಕಳುಹಿಸಲಾಗುವುದು. ಗರುಡಪುರಾಣದಲ್ಲೂ ಯಮರಾಜನ ಆಸ್ಥಾನದ ಬಗ್ಗೆ ನಾಲ್ಕು ದಿಕ್ಕುಗಳ ಉಲ್ಲೇಖ ಮಾಡಲಾಗಿದೆ.