ಉತ್ತರ ಖಂಡ ರಾಜ್ಯದ ಹಿಮಾಚಲ ಪರ್ವತದ ಮಧ್ಯೆಯ ಅಲಕನಂದಾ ನದಿ ತೀರದಲ್ಲಿರುವ ಧಾರಿ ದೇವಿ ಅತ್ಯಂತ ಶಕ್ತಿಯುತವಾದವಳು ಎಂದು ಖ್ಯಾತಿ ಪಡೆದಿದ್ದಾಳೆ. ಧಾರಿ ದೇವಿಗೆ ಧಾರ ಮಾತಾ ಎಂದು ಸಹ ಕರೆಯುತ್ತಾರೆ. ಈ ಮಹಿಮೆಯುಳ್ಳ ದೇವತೆ ಧಾರಿ ನೆಲೆಸಿರುವ ದೇವಾಲಯದಲ್ಲಿ ಮೇಲ್ಛಾವಣಿ ಇಲ್ಲ. ಹೀಗೆ ಮೇಲ್ಛಾವಣಿಯಿಲ್ಲದ ದೇವಾಲಯವೇ ಈ ತಾಯಿಗೆ ಪ್ರೀಯ ಎಂಬುದು ಸ್ಥಳೀಯ ಭಕ್ತರ ನಂಬಿಕೆಯಾಗಿದೆ. ಈ ದೇವಾಲಯದ ಇನ್ನೊಂದು ಪಕ್ಕ ಪ್ರದೇಶದಲ್ಲಿ ಒಂದು ಗ್ರಾಮವಿದೆ. ಈ ಗ್ರಾಮ ಹಾಗೂ ದೇವಾಲಯಕ್ಕೆ ಸುಲಭವಾಗಿ ತಲುಪಲು ಒಂದು ಬ್ರಿಡ್ಜ್ ನಿರ್ಮಿಸಲಾಗಿದೆ.
ಮುಖ್ಯ ನಗರಗಳಾದ ಶ್ರೀನಗರ, ಬದರಿನಾಥ್ಗೆ ತಲುಪಲು ಇರುವ ರಹದಾರಿಯ ಮಾರ್ಗದಲ್ಲಿ ಕಲ್ಯಾಸರ್ ಎಂಬ ಪ್ರಾಂತ್ಯವಿದೆ. ಈ ಪ್ರಾಂತ್ಯದಲ್ಲಿ ಈ ಧಾರಿ ದೇವಿ ದೇವಾಲಯವಿದೆ. ಧಾರಿ ದೇವಿಯ ದರ್ಶನವನ್ನು ಪಡೆಯಲು ನವದೆಹಲಿಯಿಂದ ಸುಮಾರು 360 ಕಿ,ಮೀ ದೂರ ಹಾಗೂ ರುದ್ರಪ್ರಯೋಗನಿಂದ ಸುಮಾರು 20 ಕಿ,ಮೀ ಅಂತರದಲ್ಲಿದೆ. ಈ ದೇವಿಯನ್ನು ಪೂಜಿಸಿದವರಿಗೆ ಎಷ್ಟು ಒಳ್ಳೆಯ ಭಾಗ್ಯವನ್ನು ಕರುಣೀಸುತ್ತಾಳೂ, ಧಿಕ್ಕರಿಸಿದರೆ ಅಷ್ಟೇ ಶಿಕ್ಷೀಸುತ್ತಾಳೆ. ಈ ಧಾರಿ ದೇವಿಯ ಅದ್ಭುತ ಶಕ್ತಿಯನ್ನು ಸೂಚಿಸುವ ಒಂದು ಆಶ್ಚರ್ಯಕರವಾದ ಸಂಘಟನೆ 2013, ಜೂನ್ 16 ನೇ ದಿನಾಂಕದಲ್ಲಿ ನಡೆಯಿತು.
1.ಧಾರಿ ದೇವಿ ದೇವಾಲಯ
ಉತ್ತರಖಂಡ ರಾಜ್ಯದ ಶೀನಗರ ಪ್ರದೇಶದಲ್ಲಿ ಪ್ರವಹಿಸುತ್ತಿರುವ ಅಲಕನಂದಾ ನದಿಯ ಸಮೀಪದಲ್ಲಿ ಅತ್ಯಂತ ಪ್ರಾಚೀನವಾದ ಧಾರಿದೇವಿಯ ದೇವಾಲಯವಿದೆ. ಈ ತಾಯಿಯು ಅಲಕನಂದಾ ನದಿಯನ್ನು ನಿಯಂತ್ರಿಸುತ್ತಿರುತ್ತಾಳೆ ಎಂದು ಸ್ಥಳೀಯರು ತಿಳಿಸುತ್ತಿರುತ್ತಾರೆ.
2.ಅಲಕಾನಂದ ನದಿ
ಈ ದೇವಿಯ ಪ್ರಭಾವದ ಕಾರಣದಿಂದ ಅಲಕನಂದಾ ನದಿ ಅತ್ಯಂತ ಶಾಂತಿಯುತವಾಗಿ ಪ್ರವಹಿಸುತ್ತಿದ್ದು ಭಕ್ತರಿಗೆ ಆನಂದವನ್ನು ಉಂಟುಮಾಡುತ್ತಾ ಇರುತ್ತದೆ. ಈ ದೇವಿಯ ದೇವಾಲಯವು ಸುಮಾರು 8 ನೇ ಶತಮಾನದಿಂದಲೂ ಇದೆ ಎಂದು ಹಲವಾರು ಜನರು ಭಾವಿಸುತ್ತಾರೆ.
PC:YOUTUBE
3.ಸಿದ್ಧ ಪೀಠ
ವಿಶಿಷ್ಟವೆನೆಂದರೆ ಧಾರಿ ದೇವಿಯ ದೇವಾಲಯವು ಎಷ್ಟೋ ಸಾವಿರ ವರ್ಷಗಳ ಹಳೆಯದು ಎಂದು ಮಹಾಭಾರತದ ಸಮಯದ ವರ್ಷದಿಂದ ತಿಳಿಯುತ್ತದೆ. ಈ ದೇವಾಲಯವಿರುವ ಪ್ರದೇಶವನ್ನು ಸಿದ್ದಪೀಠ ಎಂದು ಕರೆಯುತ್ತಿದ್ದರು ಎಂದು ಭಾಗವತದಲ್ಲಿ ರಚಿಸಲಾಗಿದೆ.
PC:YOUTUBE
4.108 ಶಕ್ತಿ ಪೀಠ
ಈ ಪ್ರದೇಶದಲ್ಲಿ ಮಹಾಕಾಳಿಯ ಅವತಾರದಲ್ಲಿ ನೆಲೆಸಿರುವ ಧಾರಿದೇವಿ ನೆಲೆಸಿರುವ ಕಾರಣ ಈ ಪ್ರದೇಶವನ್ನು ಅಮೋಘ ಮಹತ್ವವಿರುವ ತಾಣ ಎಂದು ಮಹಾಭಾಗವತದಲ್ಲಿ ರಚಿಸಲಾಗಿದೆ. 108 ಶಕ್ತಿ ಪೀಠಗಳಲ್ಲಿ ಈ ಧಾರಿ ದೇವಿಯ ದೇವಾಲಯವು ಒಂದು ಎಂದು ಶ್ರೀ ಮತಾ ದೇವಿ ಭಾಗವತದಲ್ಲಿ ರಚಿಸಲಾಗಿದೆ.
PC:YOUTUBE
5.ಉಗ್ರ ಸ್ವರೂಪಿ
ಈ ಧಾರಿ ದೇವಿಯನ್ನು ಉಗ್ರ ಸ್ವರೂಪಿ ಎಂದು ಹೇಳುತ್ತಾರೆ. ಈ ದೇವಿಯನ್ನು ಪೂಜಿಸಿದವರಿಗೆ ಎಷ್ಟು ಒಳ್ಳೆಯ ಭಾಗ್ಯವನ್ನು ಕರುಣೀಸುತ್ತಾಳೂ, ಧಿಕ್ಕರಿಸಿದರೆ ಅಷ್ಟೇ ಶಿಕ್ಷೀಸುತ್ತಾಳೆ ಎಂದು ಭಕ್ತರ ನಂಬಿಕೆಯಾಗಿದೆ.
6.ಕೇದಾರನಾಥ ಪ್ರದೇಶ
ಕ್ರಿ,ಶ 1882ರಲ್ಲಿ ಇಸ್ಲಾಂ ದೊರೆ ಈ ಪ್ರಾಂತ್ಯವನ್ನು ನಾಶಮಾಡಿ ಒಂದು ಮಸೀದಿಯನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡಿದನು. ಇಸ್ಲಾಂ ದೊರೆ ಮಾಡಿದ ಈ ಅಪಚಾರದ ಕಾರಣದಿಂದ ಆ ಸಮಯದಲ್ಲಿ ಬೆಟ್ಟ ಗುಡ್ಡಗಳು ಒಡೆದು ಪ್ರಕೃತಿ ಉಗ್ರ ಸ್ವರೂಪ ಪಡೆದು ಕೇದಾರನಾಥದಲ್ಲಿ ದ್ವಂಸ ಮಾಡಿದವು. ಈ ಭಯಂಕರವಾದ ವಿಪತ್ತಿನಿಂದ ನೂರಾರು ಮಂದಿಯನ್ನು ಪ್ರಕೃತಿ ವಿಕೋಪ ಬಲಿ ತೆಗೆದುಕೊಂಡಿತು.
PC:YOUTUBE
7.ವಿಶ್ವಾಸ
ಈ ದೇವಿಯ ಒಂದು ಮಹಾತ್ಮೆಯನ್ನು ಪ್ರತ್ಯಕ್ಷವಾಗಿ ನೋಡಿದ ಆ ಇಸ್ಲಾಂ ದೊರೆ ಭಯದಿಂದ ಸುಮ್ಮನಾದನು. ಅಂದಿನಿಂದ ಈ ದೇವಾಲಯದ ಬಗ್ಗೆ ಯಾರೂ ಉಸಿರು ಎತ್ತವುದಿಲ್ಲ ಎಂದು ಸ್ಥಳೀಯ ಭಕ್ತರು ತಿಳಿಸುತ್ತಾರೆ.
PC:YOUTUBE
8.ಗರ್ಭಗುಡಿ
ಉತ್ತರ ಖಂಡದಲ್ಲಿರುವ ಗರ್ವಾಲ್ ಪ್ರದೇಶದಲ್ಲಿ ಪ್ರವಹಿಸುತ್ತಿರುವ ಅಲಕನಂದಾ ನದಿಯ ತೀರದಲ್ಲಿ ಈ ಧಾರಿ ದೇವಿಯ ದೇವಾಲಯವಿದೆ. ಈ ದೇವಿಗೆ ಯಾವುದೇ ರೀತಿ ಮೇಲ್ಛಾವಣಿಯಿಲ್ಲದ ಗರ್ಭಗುಡಿಯಂತೆ ಇದೆ.
PC:YOUTUBE
9ವಿಶಿಷ್ಟತೆ
ಈ ಕ್ಷೇತ್ರದ ಒಂದು ವಿಶಿಷ್ಟತೆ ಎಂದರೆ ಧಾರಿ ದೇವಿ ಉದಯದ ಸಮಯದಲ್ಲಿ ಬಾಲಿಕೆಯಾಗಿ, ಸಂಜೆ ವೃದ್ಧೆ ರೂಪದಲ್ಲಿ ದರ್ಶನ ನೀಡುತ್ತಾಳೆ. ಹೀಗೆ ಈ ತಾಯಿಯು ಸಮಯಕ್ಕೆ ಸರಿಯಾಗಿ ಬದಲಾವಣೆಗೊಳ್ಳುತ್ತಿರುತ್ತಾಳೆ.
PC:YOUTUBE
10.ಶ್ರೀನಗರ
ಈ ಮಠದಲ್ಲಿ ಕಾಳಿಮಾತಾ ಎಂಬ ದೇವತೆ ಇದ್ದಾಳೆ. ಶ್ರೀ ನಗರದ ಏಲೆಕ್ಟ್ರೀಕ್ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಧಾರಿ ದೇವಿ ವಿಗ್ರಹವನ್ನು ತೆಗೆದು ಅಲ್ಲಿಂದ ಸ್ವಲ್ಪ ಎತ್ತರ ಸ್ಥಳದಲ್ಲಿ ಇಡುವ ಪ್ರಯತ್ನ ನಡೆಯಿತು.
PC:YOUTUBE
11.ಧಾರಿ ದೇವಿ
ವಿದ್ಯುತ್ ತಯಾರಿಕೆ ಮಾಡುವ ಸಲುವಾಗಿ ಈ ಡ್ಯಾಂ ನಿರ್ಮಾಣ ಮಾಡಲು ಸಿದ್ದವಾಯಿತು. 330 ಎಮ್,ಡ ವಿದ್ಯುತ್ ಉತ್ಪತ್ತಿ ಮಾಡಲು ಉತ್ತರ ಖಂಡ ಸರ್ಕಾರವು ಧಾರಿ ದೇವಿಯ ದೇವಾಲಯವನ್ನು ನಾಶಪಡಿಸಲು ಮುಂದಾಗಲು ಹಿಂದೆ ಮುಂದೆ ಯೋಚಿಸಲಿಲ್ಲ.
PC:YOUTUBE
12.ಭಕ್ತರ ವಿಶ್ವಾಸ
ಅಲಕನಂದ ನದಿ ಮೇಲೆ ಡ್ಯಾಂ ನಿರ್ಮಾಣ ಮಾಡುವುದಕ್ಕೊಸ್ಕರ ಧಾರಿ ದೇವಿ ದೇವಾಲಯವನ್ನು ನಾಶ ಮಾಡಿದರು. ಸರ್ಕಾರ ಮಾಡಿದ ಈ ಅನಾಹುತದಿಂದಾಗಿ ಹಲವಾರು ಮಂದಿ ಭಕ್ತರು ಪರಿಹಾರ ನೀಡಬೇಕಾಯಿತು. ಅದು ಹೇಗೆ ಎಂದರೆ ಚಾರ್ ಧಾಂ ಎಂಬ ಯಾತ್ರೆಗೆ ಹೋಗುವ ಭಕ್ತರಿಗೆ ಧಾರಿ ದೇವಿ ರಕ್ಷಣೆ ಮಾಡುತ್ತಾ ಇರುತ್ತಾಳೆ ಎಂದು ಭಕ್ತರು ವಿಶ್ವಾಸ ಹೊಂದಿದ್ದಾರೆ.
PC:YOUTUBE
13.ಉತ್ತರ ಖಂಡ ಸರ್ಕಾರ
ಇಂತಹ ಶಕ್ತಿ ದೇವತೆ ದೇವಾಲಯವನ್ನು ಉತ್ತರ ಖಂಡ ಸರ್ಕಾರ ನಾಶ ಮಾಡಿತು. ವಿದ್ಯುತ್ ಉತ್ಪತ್ತಿ ಮಾಡುವ ಸಲುವಾಗಿ ಉತ್ತರ ಖಂಡ ಸರ್ಕಾರ 2013 ರ ಜೂನ್ 16 ಸಂಜೆ 6 ಗಂಟೆಗೆ ಈ ದೇವಾಲಯವನ್ನು ಕೆಲವು ಕೂಲಿ ಕಾರ್ಮಿಕರಿಂದ ದೇವಾಲಯವನ್ನು ನಾಶ ಮಾಡಿದರು.
PC:YOUTUBE
14. ಮಹಾ ಮಳೆ
ನಂತರ ಧಾರಿ ದೇವಿಯನ್ನು ಅಲ್ಲಿಂದ ತೆಗೆಯಲಾಯಿತು. ಈ ಘಟನೆ ನಡೆದು ಸ್ವಲ್ಪ ಸಮಯದಲ್ಲಿಯೇ ಕೇದರನಾಥ್ ಪ್ರದೇಶದಲ್ಲಿ ಮಳೆಯು ಧಾರಕಾರವಾಗಿ ಸುರಿಯ ತೊಡಗಿತು. ಸತತ 2 ಗಂಟೆಗಳ ಕಾಲ ಭಯಂಕರವಾದ ಮಳೆಯು ಸುರಿಯಿತು.
PC:YOUTUBE
15.ಭಯಕಂರ ರೂಪ
ಈ ತಾಯಿಯ ಭಯಂಕರ ರೂಪದಿಂದಾಗಿ ಹಲವಾರು ಮಂದಿಗೆ ಕೆಲವು ತೊಂದರೆಗೊಳಗಾದರೂ ,ಅದೆಷ್ಟೊ ಮಂದಿ ಭಕ್ತರು ಅಲ್ಲಿಯೇ ಉಳಿದುಕೊಂಡರು. ಹಲವಾರು ಬೆಟ್ಟಗಳು ನೋಡುತ್ತಿದ್ದಂತೆ ಉರುಳಿ ಬಿದ್ದವು.
PC:YOUTUBE
16.ಭಕ್ತರು
ಈ ಅನಾಹುತ ನಡೆದ ನಂತರ ಹಲವಾರು ಭಕ್ತರನ್ನು ಈಚೆ ತೆಗೆಯುವುದು ಅಸಾಧ್ಯವಾಯಿತು. ಹೀಗೆ ಇದ್ದಕ್ಕಿದ್ದ ಹಾಗೆ ಇಂತಹ ಭಾರಿ ಮಳೆ ಯ ಜಲಪ್ರಳಯವಾಗಲು ಕಾರಣ ತಿಳಿಯಬೇಕು ಎಂದು ಅನ್ವೇಷಣೆಯನ್ನು ಮಾಡಲು ಪ್ರಾರಂಭ ಮಾಡಿದರು.
PC:YOUTUBE
17.ಜ್ಯೋತಿಷ್ಯ ಶಾಸ್ತ್ರ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಧಾರಿ ದೇವಿಯ ದೇವಾಲಯವನ್ನು ನಾಶ ಮಾಡಿದ್ದರಿಂದಲೇ ಪ್ರಳಯ ರೀತಿಯ ಧಾರಕಾರ ಮಳೆಯಾಗಿದೆ ಎಂದು ತಿಳಿಸಿದರು.
PC:YOUTUBE