ಆಹಾರ, ಬಟ್ಟೆ ಮಾತ್ರವಲ್ಲ, ಪ್ರವಾಸೋದ್ಯಮದ ವಿಷಯದಲ್ಲಿಯೂ ಭಾರತವನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಏಕೆಂದರೆ ವಿವಿಧ ರೀತಿಯ ಸಂಸ್ಕೃತಿ ಇನ್ನು ಇಲ್ಲಿ ಪ್ರಚಲಿತದಲ್ಲಿದೆ. ಇದನ್ನು ದೇಶ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ತಿಳಿದುಕೊಳ್ಳಲು ಬಯಸುತ್ತಾರೆ. ಇನ್ನೊಂದು ವಿಶೇಷತೆ ಏನೆಂದರೆ ನೀವು ಭಾರತದಲ್ಲಿ ಪ್ರತಿ ಸೀಸನ್ ಅನ್ನು ಆನಂದಿಸಬಹುದು. ಅಂದರೆ ಋತುಮಾನಕ್ಕನುಗುಣವಾಗಿ ಪ್ರವಾಸಿ ತಾಣದ ಸೌಂದರ್ಯ ಹೆಚ್ಚುತ್ತದೆ. ಈ ಕಾರಣಕ್ಕಾಗಿಯೇ ದೇಶದ ಪ್ರವಾಸಿ ತಾಣಗಳಲ್ಲಿ ಎಲ್ಲ ಕಾಲದಲ್ಲೂ ಪ್ರವಾಸಿಗರ ದಂಡೇ ಇರುತ್ತದೆ.
ಮಳೆಯ ನಂತರವಂತೂ ಬೆಟ್ಟ, ಗುಡ್ಡ, ಪರ್ವತಗಳ ಸೌಂದರ್ಯ ಮತ್ತಷ್ಟು ಹೆಚ್ಚಾಗುವುದನ್ನು ಕಾಣಬಹುದು. ಹಾಗೆಯೇ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆದರೆ ತಂಪಾದ ಸ್ಥಳಗಳಿಗೆ ಹೋಗುವುದು ಸುಲಭವಲ್ಲ. ಚಳಿಗಾಲದಲ್ಲಿ ಕೆಲವು ಸ್ಥಳಗಳಿಗೆ ಪ್ರಯಾಣಿಸಲು ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದಲೇ ಮುಂಗಾರು ಮಳೆ ಬಿಟ್ಟ ನಂತರ ಮತ್ತು ಚಳಿ ಬರುವ ಮುನ್ನವೇ ಕೆಲವು ಸ್ಥಳಗಳಿಗೆ ಭೇಟಿ ನೀಡುವುದು ಉತ್ತಮ ಎಂದು ಹೇಳಲಾಗುತ್ತದೆ. ಭಾರತದ ಬಹುತೇಕ ಪ್ರವಾಸಿ ಸ್ಥಳಗಳ ಸೌಂದರ್ಯ ಹೆಚ್ಚಾಗುವುದು ಅಕ್ಟೋಬರ್ ತಿಂಗಳಲ್ಲಿ. ಪೂರ್ವ ಚಳಿಗಾಲದ ರಜೆಯಲ್ಲಿ ಪ್ರವಾಸಕ್ಕೆ ಹೋಗುವ ಮೂಲಕ ಅತ್ಯುತ್ತಮ ನೆನಪುಗಳನ್ನು ನೆನೆಯಲು ಅನೇಕ ಸ್ಥಳಗಳು ಭಾರತದಲ್ಲಿವೆ. ಹಾಗಾಗಿ ಅಕ್ಟೋಬರ್ ತಿಂಗಳಲ್ಲಿ ನೀವು ಯಾವ ಸ್ಥಳವನ್ನು ನೋಡಬಹುದು ನೋಡೋಣ ಬನ್ನಿ...

ಹಂಪಿ, ಕರ್ನಾಟಕ
ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಇಲ್ಲಿನ ವಾಸ್ತುಶಿಲ್ಪವು ಬಹಳ ಅದ್ಭುತವಾಗಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಸುಮಾರು 500 ಪುರಾತನ ಸ್ಮಾರಕಗಳು, ಬೀದಿ ಮಾರುಕಟ್ಟೆಗಳು, ಸುಂದರವಾದ ದೇವಾಲಯಗಳು, ಕೋಟೆಗಳು ಮತ್ತು ಆಕರ್ಷಕ ಅವಶೇಷಗಳಿಂದ ಸುತ್ತುವರೆದಿರುವ ಹಂಪಿ ಪ್ರವಾಸಿಗರು ಮತ್ತೆ ಮತ್ತೆ ಭೇಟಿ ಕೊಡಲು ಆಹ್ವಾನಿಸುತ್ತದೆ. ಕ್ರಿ.ಶ 1500 ರ ಸಮಯದಲ್ಲಿ, ಹಂಪಿ ನಗರವು ಮಹಾನ್ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂದು ಇದು ವಿಶ್ವದ ಎರಡನೇ ಅತಿದೊಡ್ಡ ನಗರವಾಗಿತ್ತು. ಹಂಪಿ ಸುತ್ತಮುತ್ತಲಿನ ಪ್ರದೇಶವು ನಿಗೂಢ ಅವಶೇಷಗಳಿಂದಲೇ ತುಂಬಿದೆ. ಇಡೀ ಹಂಪಿ ನಗರವು ವಿವಿಧ ರೀತಿಯ ಮತ್ತು ಗಾತ್ರದ ಬಂಡೆಗಳಿಂದ ಆವೃತವಾಗಿದೆ, ಇದು ಈ ಸ್ಥಳವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಮುನ್ನಾರ್, ಕೇರಳ
ಕೇರಳ ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಚಹಾ ತೋಟಗಳು, ಕಡಲತೀರಗಳು ಮತ್ತು ಹಸಿರಿನಿಂದ ಆವೃತವಾಗಿರುವ ಕೇರಳವು ಮಳೆಗಾಲದಲ್ಲಿ ಸ್ವರ್ಗದಂತೆ ಭಾಸವಾಗುತ್ತದೆ. ಹಸಿರಿನ ಹೊದಿಕೆಯು ಪರ್ವತಗಳನ್ನು ಆವರಿಸುತ್ತದೆ ಮತ್ತು ಆಹ್ಲಾದಕರ ಹವಾಮಾನವು ಇಲ್ಲಿಗೆ ಪ್ರವಾಸ ಮಾಡುವವರಿಗೆ ಹೆಚ್ಚು ರೋಮಾಂಚನ ಉಂಟು ಮಾಡುತ್ತದೆ. ಕೇರಳದ ಅತ್ಯಂತ ಜನಪ್ರಿಯ ಸ್ಥಳವಾದ ಮುನ್ನಾರ್ಗೆ ಭೇಟಿ ನೀಡುವುದಕ್ಕೆ ಬಹುತೇಕರು ಹಾತೊರೆಯುತ್ತಾರೆ. ಏಕೆಂದರೆ ಇಲ್ಲಿನ ಹೌಸ್ಬೋಟ್, ಬೀಚ್ನ ಪ್ರಶಾಂತ ಮತ್ತು ನೈಸರ್ಗಿಕ ಸೌಂದರ್ಯವನ್ನು ನೋಡಲು ಅಕ್ಟೋಬರ್ ತಿಂಗಳು ಉತ್ತಮ ಸಮಯ.

ಜಮ್ಮು ಮತ್ತು ಕಾಶ್ಮೀರ
ಕವನಗಳು ಮತ್ತು ಲೇಖನಗಳಲ್ಲಿ ಕಾಶ್ಮೀರದ ಸೌಂದರ್ಯವನ್ನು ವಿವರಿಸಿರುವುದನ್ನು ನೀವು ನೋಡಿರಬಹುದು. ಇದು ಭಾರತದಲ್ಲಿ ಮನಮೋಹಕ ಸ್ಥಳವಾಗಿದ್ದು, ಒಮ್ಮೆ ಭೇಟಿ ನೀಡಿದ ನಂತರ ಮತ್ತೆ ಹಿಂತಿರುಗಬೇಕೆಂದು ಯಾರಿಗೂ ಅನಿಸುವುದಿಲ್ಲ. ಆದ್ದರಿಂದ ಇದು ಪ್ರವಾಸಿಗರ ಅತ್ಯಂತ ನೆಚ್ಚಿನ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ದಾಲ್ ಸರೋವರದ ಸೌಂದರ್ಯ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುವ ಅನುಭವ ವಿಭಿನ್ನವಾಗಿದೆ. ಅಕ್ಟೋಬರ್ನಲ್ಲಿ ಈ ಸ್ಥಳವು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಹಾಗಾಗಿ ಮುಂಬರುವ ತಿಂಗಳುಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ.

ರಿಷಿಕೇಶ, ಉತ್ತರಾಖಂಡ
ಗಂಗಾ ನದಿಯ ದಡದಲ್ಲಿರುವ ರಿಷಿಕೇಶವನ್ನು ಭಾರತದ ಯೋಗ ನಗರ ಎಂದೂ ಕರೆಯುತ್ತಾರೆ. ಇಲ್ಲಿ ಅನೇಕ ಧಾರ್ಮಿಕ ಸ್ಥಳಗಳಿವೆ. ಇದು ಪರ್ವತಗಳ ನಡುವೆ ಇರುವ ಆಕರ್ಷಕ ಪ್ರವಾಸಿ ತಾಣವಾಗಿದೆ. ನೀವು ದೆಹಲಿ, ನೋಯ್ಡಾ, ಗುರ್ಗಾಂವ್ ಅಂದರೆ ಎನ್ಸಿಆರ್ನಿಂದ ಸಣ್ಣ ಪ್ರವಾಸವನ್ನು ಯೋಜಿಸುತ್ತಿದ್ದರೆ, ನೀವು ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣವಾದ ರಿಷಿಕೇಶಕ್ಕೆ ಪ್ರವಾಸವನ್ನು ಯೋಜಿಸಬೇಕು. ಮಳೆಗಾಲದ ನಂತರ ಈ ಸ್ಥಳವು ಒಂದು ರೀತಿಯ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿ ತಿರುಗಾಟದ ಹೊರತಾಗಿ, ನೀವು ರಿವರ್ ರಾಫ್ಟಿಂಗ್ನಂತಹ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.


Click it and Unblock the Notifications



















