ಲಕ್ಷ್ಮಣ ಝೂಲಾ 450 ಅಡಿ ಎತ್ತರದ ಸಸ್ಪೆನ್ಶನ್ ಸೇತುವೆಯಾಗಿದ್ದು ನದಿಗಳು, ದೇವಸ್ಥಾನಗಳು ಮತ್ತು ಆಶ್ರಮಗಳ ಮೋಹಕ ನೋಟ ಇಲ್ಲಿ ಸಿಗುತ್ತದೆ. ಮೂಲತಃ ಇದು ನಾರಿನ ಸೇತುವೆಯಾಗಿದ್ದು 1939 ರಲ್ಲಿ ಇದನ್ನು ತೂಗಾಡುವ ಕಬ್ಬಿಣದ ಸೇತುವೆಯಾಗಿ ಮಾರ್ಪಡಿಸಿ ಕಟ್ಟಲಾಗಿದೆ. ಶ್ರೀರಾಮನ ತಮ್ಮ ಲಕ್ಷ್ಮಣ ಒಮ್ಮೆ ಈ ಸೇತುವೆಯ ಮೂಲಕ ಗಂಗಾ...
ರಾಮಝೂಲಾ ರಿಷಿಕೇಶಿನ ಒಂದು ಪ್ರಸಿದ್ಧ ಗುರುತರವಾದ ತಾಣ. ರಿಷಿಕೇಶದಿಂದ 3 ಕಿ.ಮೀ ದೂರದಲ್ಲಿದ್ದು, ಮುನಿ - ಕಿ - ರೇತಿ ಎಂಬ ಸ್ಥಳದ ಹತ್ತಿರದಲ್ಲಿ ನೆಲೆಸಿದೆ. ಇದೊಂದು ಕಬ್ಬಿಣದ ತೂಗು ಸೇತುವೆಯಾಗಿದ್ದು ಪವಿತ್ರ ಗಂಗಾ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇಲ್ಲಿರುವ ಮತ್ತೊಂದು ಸೇತುವೆ ಲಕ್ಷ್ಮಣ ಝೂಲಾಗಿಂತಲೂ ದೊದ್ಡದಾಗಿರುವ ಇದು...
ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಪವಿತ್ರ ನದಿಗಳು ಸಂಗಮಗೊಳ್ಳುತ್ತವೆ. ರಿಷಿಕೇಶದ ದೇವಸ್ಥಾನಗಳಿಗೆ ಭೇಟಿ ನೀಡುವ ಮುನ್ನ ಯಾತ್ರಾರ್ಥಿಗಳು ಈ ಘಾಟಿನಲ್ಲಿ ಮುಳುಗಿ ಸ್ನಾನ ಮಾಡಿ ತೆರಳುತ್ತಾರೆ. ನಂಬಿಕೆಯ ಪ್ರಕಾರ, ಈ ನದಿಯಲ್ಲಿ ಮುಳುಗೆದ್ದರೆ ಮಾನವನ ಪಾಪಗಳೆಲ್ಲವೂ ನಾಶವಾಗುತ್ತವೆ ಎನ್ನಲಾಗುತ್ತದೆ. ಸಂಜೆಯ...
ರಾಜಾಜಿ ರಾಷ್ಟ್ರೀಯ ಉದ್ಯಾನವನ ರಿಷಿಕೇಶದಿಂದ 6 ಕಿಲೋ ಮೀಟರ್ ದೂರದಲ್ಲಿದೆ. 820.42 ಸ್ಕೇ.ಕಿ.ಮೀ ವಿಸ್ತಾರದಲ್ಲಿ ಈ ಉದ್ಯಾನ ಹರಡಿದೆ. ಮೋತಿಚೂರ್ ಉದ್ಯಾನ, ಚಿಲ್ಲಾ ಉದ್ಯಾನ ಮತ್ತು ರಾಜಾಜಿ ಉದ್ಯಾನಗಳೆಂಬ ಮೂರು ಉದ್ಯಾನವನಗಳು ಈ ರಾಷ್ಟ್ರೀಯ ಉದ್ಯಾನದಲ್ಲಿದೆ. ಉದ್ಯಾನವನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿಯವರ...
ನೀಲಕಂಠ ಮಹಾದೇವ ದೇವಸ್ಥಾನ ಪಂಕಜ ಮತ್ತು ಮಧುಮತಿ ನದಿ ದಂಡೆಯ ಮೇಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರ. ಸಮುದ್ರ ಮಟ್ಟದಿಂದ 1330 ಮೀಟರ್ ಎತ್ತರದಲ್ಲಿರುವ ದೇವಸ್ಥಾನವು ವಿಷ್ಣುಕೂಟ, ಬ್ರಹ್ಮಕೂಟ ಮತ್ತು ಮಣಿಕೂಟ ಬೆಟ್ಟಗಳ ಮನಮೋಹಕ ದೃಶ್ಯವನ್ನು ತೆರೆದಿಡುತ್ತದೆ. ಪರಮಾತ್ಮ ಶಿವ ವಿಷವನ್ನು ಕುಡಿದು ತನ್ನ ಗಂಟಲಿನಲ್ಲಿಯೇ...
ಗೀತಾ ಭವನ ಪುರಾತನ ಸಂಕೀರ್ಣವಾಗಿದ್ದು ಗಂಗಾ ನದಿ ತೀರದಲ್ಲಿದೆ. ಮಹಾಭಾರತ ಮತ್ತು ರಾಮಾಯಣದ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ನದಿಯಲ್ಲಿ ಮುಳುಗೇಳುತ್ತಾರೆ.
ಗೀತಾ ಭವನದಲ್ಲಿ ಸುಮಾರು 1000 ರೂಮುಗಳಿದ್ದು ಉಚಿತವಾಗಿ ಭಕ್ತರು ಇಲ್ಲಿ ಉಳಿಯಬಹುದು....
ರಿಷಿಕೇಶದಿಂದ 16 ಕಿ.ಮೀ ದೂರದಲ್ಲಿರುವ ವಸಿಷ್ಠ ಗುಹೆಯು ಗಂಗಾ ನದಿಯ ದಡದ ಮೇಲೆ ಸ್ಥಿತಗೊಂಡಿದೆ. ಈ ಸ್ಥಳವು ಧ್ಯಾನ ಮಾಡಲು ಅತ್ಯಂತ ಸೂಕ್ತವಾಗಿದ್ದು, ಫಿಕಸ್ (ಗುಲಾರ್)ಮರಗಳಿಂದ ಸುತ್ತುವರೆದಿದೆ. ಗುಹೆಯ ಹತ್ತಿರದಲ್ಲಿ ಒಂದು ಶಿವಲಿಂಗವಿದ್ದು ಹಿಂದು ಸಮುದಾಯದ ಭಕ್ತರ ಪಾಲಿಗೆ ಅದು ಪವಿತ್ರವಾಗಿದೆ.
ಪ್ರಖ್ಯಾತ ಹಿಂದು...
ತೇರಾ ಮಂಜಿಲ್ ದೇವಸ್ಥಾನ, ಲಕ್ಷ್ಮಣ ಝೂಲಾದ ಬಳಿಯಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರ. ತ್ರಯಂಬಕೇಶ್ವರ ದೇವಸ್ಥಾನವೆಂದೂ ಇದನ್ನು ಕೆರಯಲಾಗುತ್ತಿದ್ದು 13 ಅಂತಸ್ತುಗಳನ್ನು ಹೊಂದಿರುವ ವಿಭಿನ್ನ ಪವಿತ್ರ ಸ್ಥಳ.
ಕುಂಜಪುರಿ ದೇವಸ್ಥಾನ ರಿಷಿಕೇಶದಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಶಿವಾಲಿಕದ 13 ಮುಖ್ಯ ದೇವತೆಗಳಲ್ಲಿ ಒಂದಾದ ಕುಂಜಾಪುರಿಗೆ ಇಲ್ಲಿ ಪೂಜೆ ನಡೆಯುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳನ್ನು ಈ ಪ್ರದೇಶದಿಂದ ಕಾಣಬಹುದಾಗಿದೆ. ಹಿಮಾಲಯ ಪರ್ವತ ಶ್ರೇಣಿಗಳ ನೋಟ, ಚೌಕಂಬ, ಸ್ವರ್ಗ ರೋಹಿಣಿ, ಗಂಗೋತ್ರಿಗಳೂ...
ಕೌಡಿಯಾಲಾ ಸುಮದ್ರ ಮಟ್ಟದಿಂದ 380 ಮೀಟರ್ ಎತ್ತರದಲ್ಲಿದ್ದು ರಿಷಿಕೇಶ ಬದ್ರಿನಾಥ ಹೈವೇಯಲ್ಲಿ ಸ್ಥಿತಗೊಂಡಿದೆ. ಗಂಗಾ ನದಿಯ ತಟದಲ್ಲಿರುವ ಕೌಡಿಯಾಲಾ, ದಟ್ಟವಾದ ಅರಣ್ಯದಿಂದ ಸುತ್ತವರೆದಿದೆ. ಹತ್ತಾರು ಬಗೆಯ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಸಾಹಸ ಪ್ರಿಯರು ಇಲ್ಲಿ ಕ್ಯಾಂಪ್ ಹೂಡಿ ರಾಫ್ಟಿಂಗ್ ನ ಮಜಾ ಅನುಭವಿಸಬಹುದು.
ಸ್ವರ್ಗ್ ನಿವಾಸ್ ದೇವಸ್ಥಾನ ಕಿತ್ತಳೆ ಬಣ್ಣದ 13 ಅಂತಸ್ತುಗಳ ದೇವಸ್ಥಾನ. ಅಮೇರಿಕದಲ್ಲಿ ಯೋಗವನ್ನು ಪರಿಚಯಿಸಿದ ಗುರು ಕೈಲಾಶ್ ಆನಂದರ ಮುಂದಾಳತ್ವದಲ್ಲಿ ದೇವಸ್ಥಾನ ನಡೆಸಲಾಗುತ್ತಿದೆ. 13 ಅಂತಸ್ತುಗಳಲ್ಲಿ ಸಣ್ಣ ಸಣ್ಣ ಹಲವಾರು ಮಂದಿರಗಳಿವೆ. ಗಂಗಾ ನದಿ ಮತ್ತು ರಿಷಿಕೇಶದ ಮೋಹಕ ದೃಶ್ಯಾವಳಿಗಳು ಇಲ್ಲಿ ಕಾಣ ಸಿಗುತ್ತವೆ.
ಶಿವಪುರಿ ಸಣ್ಣ ಗ್ರಾಮವಾಗಿದ್ದು, ರಿಷಿಕೇಶದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಬಹುತೇಕ ಮಂದಿರಗಳಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಇದಕ್ಕೆ ಶಿವಪುರಿ ಎಂಬ ಹೆಸರು ಬಂದಿದೆ. ಗಂಗಾ ನದಿಯ ದಡದ ಮೇಲೆ ನೆಲೆಸಿರುವ ಈ ಪಟ್ಟಣವು ರಿವರ್ ರಾಫ್ಟಿಂಗ್ ಗೆ ಹೇಳಿ ಮಾಡಿಸಿದ ತಾಣವಾಗಿದೆ. ಹಲವಾರು ಬೀಚ್ (ದಡ) ಕ್ಯಾಂಪ್ ಗಳು...
ರಿಷಿಕೇಶದಲ್ಲಿ ಚಾರಣವೂ ಮನಸ್ಸಿಗೆ ಮುದ ನೀಡುತ್ತದೆ. ತಲಿಶಿಯನ್ ನಿಂದ ಪೌರಿಯನ್ನು ಹಾದುಹೋಗುವ ಗಡ್ವಾಲ್ ಹಿಮಾಲಯನ್ ರೇಂಜಸ್ ಇಲ್ಲಿನ ಪ್ರಸಿದ್ದ ಚಾರಣದ ದಾರಿ. ವಾರಾಂತ್ಯದ ಸಮಯದಲ್ಲಿ ಸಾಹಸಪ್ರಿಯರು ಬುವನಿ ನೀರ್ಗುಡ್ ನಲ್ಲಿ ತುದಿಗಾಲಿನಿಂದ ಚಾರಣ ನಡೆಸಬಹುದು. ಈ ಪ್ರದೇಶದಲ್ಲಿನ ಚಾರಣ ಸ್ವಲ್ಪ ಸುಲಭವಾಗಿರುವುದರಿಂದ ಸಾಮಾನ್ಯ...
ಬಿಳಿ ನೀರಿನ ರಾಫ್ಟಿಂಗ್, ರಿಷಿಕೇಶದ ಒಂದು ಪ್ರಸಿದ್ದ ಸಾಹಸ ಚಟುವಟಿಕೆಯಾಗಿದ್ದು ನಗರಕ್ಕೆ ಭೇಟಿ ನೀಡುವ ಸಾಹಸಪ್ರಿಯ ಪ್ರವಾಸಿಗರೆಲ್ಲರಿಗೂ ಇದು ಇಷ್ಟ. ಇಲ್ಲಿನ ಗಂಗಾನದಿಯು ಮಧ್ಯಮ ಮತ್ತು ಅಬ್ಬರದ ಅಲೆಗಳೆರಡನ್ನೂ ಹೊಂದಿದ್ದು ತರಬೇತಿ ಹೊಂದಿದ ಹಾಗು ತರಬೇತಿ ಇಲ್ಲದ ಎಲ್ಲರಿಗೂ ರಾಫ್ಟಿಂಗ್ ಉತ್ತಮ ಅನುಭವ ನೀಡುತ್ತದೆ....
ಶಾಪಿಂಗ್ ಮಾಡುವುದನ್ನೂ ಕೂಡ ರಿಷಿಕೇಶದಲ್ಲಿ ಪ್ರವಾಸಿಗರು ಆಸ್ವಾದಿಸುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ರುದ್ರಾಕ್ಷಿ, ಹಿಂದೂ ದೇವತೆಗಳ ಮೂರ್ತಿಗಳು, ನಟರಾಜ ಶಿಲ್ಪ ಮತ್ತು ಧಾರ್ಮಿಕ ಪುಸ್ತಕಗಳನ್ನು ಖರೀದಿಸುತ್ತಾರೆ. ಚಳಿಗಾಲದ ವಸ್ತ್ರಗಳು, ಕುರ್ತಾ, ನಾಜೂಕು ನೇಯ್ಗೆಯ ಸಲ್ವಾರ್ ಕಮೀಜ್ ಗಳನ್ನು ಕೊಂಡುಕೊಳ್ಳುವುದಕ್ಕೆ ಜನ...