ಕಲ್ಯಾಣಸುಂದರೇಶ್ವರ ಸ್ವಾಮಿ ದೇವಾಲಯ ತಿರುಮನಂಚೇರಿ ಸಮೀಪದಲ್ಲಿರುವ ಒಂದು ಪ್ರಸಿದ್ಧವಾದ ಶಿವ ದೇವಾಲಯವಾಗಿದೆ. ಇಲ್ಲಿನ ಸ್ಥಳೀಯ ಪ್ರತೀತಿಯ ಪ್ರಕಾರ, ಪಾರ್ವತಿ ದೇವಿ ಶಿವನನ್ನು ಮದುವೆಯಾಗಲು ಇಲ್ಲಿಯೆ ಪುನರ್ಜನ್ಮವನ್ನು ತಾಳಿದ್ದಳು. ದೇವಾಲಯದ ಆವರಣವು ಬಹಳ ವಿಸ್ತಾರವಾಗಿದ್ದು ಸುಮಾರು 3.5 ಎಕರೆ ಪ್ರದೇಶದಲ್ಲಿ ಹರಡಿದೆ. ಇಲ್ಲಿ ಪೂಜೆಯ ಅವಧಿ ಮುಂಜಾನೆ 6 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 3 ರಿಂದ ರಾತ್ರಿ 8. ಇದು ಕೂಡ ಬಾಳ ಸಂಗಾತಿಗಳನ್ನು ಪಡೆಯದವರು ಹೆಚ್ಚಾಗಿ ಭೇಟಿ ನೀಡುವ ದೇವಾಲಯವಾಗಿದೆ.
ಇಲ್ಲಿ ಶಿವನ ನಟರಾಜ ಎಂಬ ಮೂರ್ತಿಯೂ ಇದೆ. ದಕ್ಷಿಣಾಮೂರ್ತಿ, ಬ್ರಹ್ಮ, ಲಿಂಗೋದ್ಭವರ್ ಹಾಗೂ ದುರ್ಗಾ ಮಾತೆಯ ಮುರ್ತಿಗಳೂ ಇಲ್ಲಿವೆ. ವರದರಾಜ ದೇವರ ಮೂರ್ತಿಯೂ ಇದೇ ದೇವಾಲಯದಲ್ಲಿದೆ. ವರದರಾಜ ದೇವರ ಸಂಗಾತಿಗಳಾದ ಭೂ ದೇವಿ ಹಾಗೂ ಶ್ರೀ ದೇವಿಯರನ್ನೂ ಸಹ ವರದರಾಜ ದೇವರ ಜೊತೆಯಲ್ಲಿ ಪೂಜಿಸಲಾಗುತ್ತದೆ. ಹಬ್ಬಗಳ ಸಂದರ್ಭವು ಇಲಿನ ದೇವಸ್ಥಾನಕ್ಕೆ ಭೇಟಿ ನೀಡಲು ಸರಿಯಾದ ಸಮಯವಾಗಿದೆ. ಇಲ್ಲಿ ಕಾರ್ತಿಗೈ ದೀಪಂ, ನವರಾತ್ರಿ, ಆರುದಾ ದರಿಸಿನಂ ಮತ್ತು ತಿರುಕ್ಕಲಯನಂ ಹಬ್ಬಗಳನ್ನು ಆಚರಿಸಲಾಗುತ್ತದೆ.


Click it and Unblock the Notifications