ಭೈರಾಬಿ ದೇವಾಲಯವು ದುರ್ಗಾದೇವಿಗಾಗಿ ನಿರ್ಮಿಸಲಾಗಿರುವ ಸ್ಥಳವಾಗಿದೆ. ಇದು ತೇಜ್ಪುರ ಪಟ್ಟಣದ ಹೊರಭಾಗದಲ್ಲಿ ನೆಲೆಗೊಂಡಿದೆ. ಈ ದೇವಾಲಯದಿಂದ ನಾವು ಬ್ರಹ್ಮ ಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭವ್ಯವಾದ ಕೊಲಿಯ ಭೊಮೊರಾ ಸೇತುವೆಯನ್ನು ನೋಡಬಹುದು. ಭೈರಾಬಿ ದೇವಾಲಯವು ಬಮುನಿ ಬೆಟ್ಟಗಳ ಅವಶೇಷಗಳಿಗೆ ಸಮೀಪದಲ್ಲಿ ನೆಲೆಗೊಂಡಿದೆ.
ನಂಬಿಕೆಗಳ ಪ್ರಕಾರ ಬಾಣಾಸುರನ ಮಗಳಾದ ಯುವರಾಣಿ ಉಷಾಳು ಪ್ರತಿದಿನ ಇಲ್ಲಿಗೆ ದುರ್ಗಾದೇವಿಗೆ ಪೂಜೆ ಸಲ್ಲಿಸುವ ಸಲುವಾಗಿ ಆಗಮಿಸುತ್ತಿದ್ದಳಂತೆ. ಇದರಿಂದಾಗಿ ಈ ದೇವಾಲಯವು ತುಂಬಾ ಹಳೆಯದು ಎಂದು ಹೇಳಬಹುದಾಗಿದೆ. ಈ ದೇವಾಲಯದಲ್ಲಿ ಪ್ರಾಣಿ ಬಲಿಯು ಇಂದಿಗು ಚಾಲ್ತಿಯಲ್ಲಿದೆ. ಈ ದೇವಾಲಯವು ಒಂದು ಸಣ್ಣ ದಿಬ್ಬದ ಮೇಲೆ ಇದೆ, ಇಲ್ಲಿಗೆ ತಲುಪಲು ಪ್ರವಾಸಿಗರು ಮೆಟ್ಟಿಲುಗಳನ್ನು ಏರಿ ಹೋಗಬೇಕು.ಪ್ರಸ್ತುತ ಈ ದೇವಾಲಯವನ್ನು ಜಿಲ್ಲಾಧಿಕಾರಿಗಳ ಕಚೇರಿಯವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಭೈರಾಬಿ ದೇವಾಲಯಕ್ಕೆ ತಲುಪುವುದು ಅಷ್ಟೇನು ಕಷ್ಟವಲ್ಲ. ಪ್ರವಾಸಿಗರು ಇಲ್ಲಿಗೆ ತಲುಪಲು ಬಸ್ ಅಥವಾ ಪ್ರವಾಸಿ ವಾಹನಗಳನ್ನು ಬುಕ್ ಮಾಡಿಕೊಂಡು ಬರಬಹುದು. ಈ ದೇವಾಲಯವು ನಗರದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ.