ನೀವೇನಾದರು ತೇಜ್ಪುರಕ್ಕೆ ಹೋದರೆ ಅಗ್ನಿಗಡ್ ನೋಡದೆ ಬಂದಲ್ಲಿ ನಿಮ್ಮ ಪ್ರವಾಸ ಅಪೂರ್ಣವಾಯಿತು ಎಂದೇ ಅರ್ಥ. ಈ ಸ್ಥಳವು ಯುವರಾಜ ಅನಿರುದ್ಧ ಮತ್ತು ಯುವರಾಣಿ ಉಷಾರ ಪ್ರೇಮ ಪ್ರಸಂಗ ಹಾಗು ಅದರಿಂದ ಉಂಟಾದ ಕೃಷ್ಣ - ಬಾಣಾಸುರರ ಯುದ್ಧದ ಕುರಿತು ಸ್ಥಳ ಪುರಾಣವನ್ನು ಸಾರಿ ಹೇಳುತ್ತಿದೆ. ಈ ಕಥೆಯನ್ನು ಜೀವಂತವಾಗಿ ಕಾಣುವ...
ಮಹಾಭೈರವ್ ದೇವಾಲಯವು ತೇಜ್ಪುರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿವನಿಗಾಗಿ ನಿರ್ಮಿಸಲಾಗಿರುವ ಈ ಮಹಾಭೈರವ್ ದೇವಾಲಯವು ನಗರದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ. ದಂತ ಕತೆಗಳ ಪ್ರಕಾರ ರಾಕ್ಷಸರ ಮಹಾರಾಜನಾದ ಬಾಣಾಸುರನು ಈ ದೇವಾಲಯವನ್ನು ನಿರ್ಮಿಸಿದನಂತೆ. ಮೊದಲು ಕಲ್ಲುಗಳಿಂದ ರಚನೆಗೊಂಡಿದ್ದ ಹಳೆಯ...
ಪಡುಮ್ ಪುಖುರಿಯನ್ನು ತೇಜ್ಪುರಕ್ಕೆ ಭೇಟಿ ನೀಡಿದ ಯಾವೊಬ್ಬ ಪ್ರವಾಸಿಗನು ನೋಡಲು ತಪ್ಪಿಸಿಕೊಳ್ಳಬಾರದು. ಇದು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದ್ದು, ತನ್ನ ನಡುವೆ ಒಂದು ದ್ವೀಪವನ್ನು ಹೊಂದಿದೆ. ಈ ದ್ವೀಪಕ್ಕೆ ಒಂದು ಕಬ್ಬಿಣದ ಸೇತುವೆಯ ಮೂಲಕ ನಾವು ತಲುಪಬಹುದು. ಪಡುಮ್ ಪುಖುರಿಯು ಮಕ್ಕಳ ಪಾಲಿಗೆ ಅತ್ಯಂತ ಪ್ರಸಿದ್ಧ...
ಕೋಲ್ ಪಾರ್ಕ್ ಚಿತ್ರಲೇಖ ಉದ್ಯಾನವನವೆಂದು ಸಹ ಗುರುತಿಸಲ್ಪಡುತ್ತದೆ (ಇತ್ತೀಚೆಗೆ ಇದನ್ನು ಕೋಲ್ ಪಾರ್ಕ್ ಎಂದೆ ಮರು ನಾಮಕರಣ ಮಾಡಿ ಕರೆಯುತ್ತಿದ್ದಾರೆ). ಈ ಉದ್ಯಾನವನವನ್ನು ಇಲ್ಲಿನ ಪುರಾಣದೊಂದಿಗೆ ಗುರುತಿಸಲ್ಪಟ್ಟಿರುವ ಚಿತ್ರಲೇಖ ಎಂಬ ಪಾತ್ರದಿಂದ ಗುರುತಿಸಲಾಗುತ್ತದೆ. ಈಕೆಯು ಉಷಾಳ ಸಖಿಯಾಗಿದ್ದಳು, ಅಲ್ಲದೆ ಆಕೆ ಪ್ರಸಿದ್ಧ...
ಭೈರಾಬಿ ದೇವಾಲಯವು ದುರ್ಗಾದೇವಿಗಾಗಿ ನಿರ್ಮಿಸಲಾಗಿರುವ ಸ್ಥಳವಾಗಿದೆ. ಇದು ತೇಜ್ಪುರ ಪಟ್ಟಣದ ಹೊರಭಾಗದಲ್ಲಿ ನೆಲೆಗೊಂಡಿದೆ. ಈ ದೇವಾಲಯದಿಂದ ನಾವು ಬ್ರಹ್ಮ ಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭವ್ಯವಾದ ಕೊಲಿಯ ಭೊಮೊರಾ ಸೇತುವೆಯನ್ನು ನೋಡಬಹುದು. ಭೈರಾಬಿ ದೇವಾಲಯವು ಬಮುನಿ ಬೆಟ್ಟಗಳ ಅವಶೇಷಗಳಿಗೆ ಸಮೀಪದಲ್ಲಿ...
ಕೆಟಕೇಶ್ವರ್ ದೇವಾಲ್ ಶಿವನಿಗಾಗಿ ನಿರ್ಮಿಸಲಾಗಿರುವ ಒಂದು ದೇವಾಲಯವಾಗಿದೆ. ಇದು ಈ ನಗರದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದರಲ್ಲಿ ವಿಶ್ವದ ಅತ್ಯಂತ ದೊಡ್ಡ ಶಿವಲಿಂಗವನ್ನು ನಾವು ಕಾಣಬಹುದು. ವೈಚಿತ್ರ್ಯವೇನೆಂದರೆ ಇಲ್ಲಿ ಶಿವಲಿಂಗದ ಮೇಲ್ಭಾಗ ದೇವಾಲಯದ ಒಂದು ಭಾಗದಲ್ಲಿದ್ದರೆ, ಅದರ ಅಡಿಪಾಯ ಅಥವಾ ಕೆಳಭಾಗ...
ತೇಜ್ಪುರದಲ್ಲಿ ಯಾವುದಾದರು ಅತ್ಯಂತ ಮನಮೋಹಕವಾದ ತಾಣವಿದೆ ಎಂದರೆ ಅದು ಖಂಡಿತವಾಗಿ ಕೊಲಿಯ ಭೊಮೊರ ಸೆಟು ಆಗಿರುತ್ತದೆ. ಇದು ನಾಗಾಂವ್ ಮತ್ತು ಸೊನಿಟ್ಪುರ್ ಜಿಲ್ಲೆಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಸುಮಾರು 3,015 ಮೀಟರ್ ಉದ್ದವಿರುವ ಈ ಸೇತುವೆಯು ವಾಸ್ತುಶಿಲ್ಪದ ಅದ್ಭುತವೆಂದೆ ಪರಿಗಣಿಸಲ್ಪಟ್ಟಿದೆ. ಈ...
ಹಜಾರ ಪುಖುರಿಯು ತೇಜ್ಪುರದಲ್ಲಿರುವ ಮೂರನೆಯ ಅತ್ಯಂತ ದೊಡ್ಡ ಕೆರೆ ಅಥವಾ ಜಲಾಶಯವಾಗಿದೆ. ಇದು ಸುಮಾರು 70 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿದೆ. ಹಾಗಾಗಿ ಇದು ತೇಜ್ಪುರದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.
ಹಜಾರ ಪುಖುರಿಯು ಹಜಾರ ವರ್ಮನ್ನಿಂದಾಗಿ ಈ ಹೆಸರು ಪಡೆದಿದೆ. ಇದನ್ನು 19ನೇ...
ರುದ್ರಪಾದ ದೇವಾಲಯವು ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ದೇವಾಲಯವಾಗಿದ್ದು, ಇಲ್ಲಿಗೆ ಶಿವನು ಆಗಮಿಸಿದ್ದನ್ನು ಸಾರುವ ಶಿವನ ಎಡಗಾಲಿನ ಹೆಜ್ಜೆ ಗುರುತು ಇಂದಿಗು ಈ ದೇವಾಲಯದ ಆವರಣದಲ್ಲಿದೆ. ಇಲ್ಲಿನ ಹೆಸರೇ ಸೂಚಿಸುವಂತೆ ’ರುದ್ರ’ ಎಂದರೆ ಶಿವ ಮತ್ತು ’ ಪಾದ’...
ಬಮುನಿ ಪಹಾರ್ ಅಥವಾ ಬಮುನಿ ಬೆಟ್ಟಗಳು ತೇಜ್ಪುರದಿಂದ ಕೆಲವೇ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಗೊಂಡಿವೆ. ಈ ಸ್ಥಳವು ಇಲ್ಲಿರುವ 9-10ನೇ ಶತಮಾನದ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಈ ಶಿಲ್ಪಗಳು ಇಡೀ ಬೆಟ್ಟದಲ್ಲಿ ಎಲ್ಲಾ ಕಡೆ ಕಂಡು ಬರುತ್ತದೆ. ಇಲ್ಲಿನ ಶಿಲ್ಪಗಳನ್ನು ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವುಗಳು...
ಡ ಪರ್ಬಟಿಯವು 6ನೇ ಶತಮಾನದ ಶಿವನ ದೇವಾಲಯವಾಗಿದ್ದು, ಭಾರತೀಯ ಸರ್ವೇಕ್ಷಣಾ ವಿಭಾಗದವರಿಂದ ಸಂರಕ್ಷಿಸಲ್ಪಟ್ಟಿದೆ. ತನ್ನ ಪ್ರಾಚೀನತೆ ಮತ್ತು ಪರಂಪರೆಯಿಂದಾಗಿ ಈ ಸ್ಥಳಕ್ಕೆ ತನ್ನದೇ ಆದ ಮಹತ್ವ ಬಂದಿದೆ. ಅಸ್ಸಾಂನ ಪ್ರಾಚೀನ ಶಿಲ್ಪಗಳಲ್ಲಿ ಒಂದಾಗಿರುವ ಇದು, ಇಡೀ ರಾಜ್ಯದಲ್ಲಿಯೇ ಉನ್ನತವಾದ ಆದರಕ್ಕೆ ಪಾತ್ರವಾಗಿದೆ. ಈ ದೇವಾಲಯದ...
ತೇಜ್ಪುರ್ ನಗರಕ್ಕೆ ಸಮೀಪದಲ್ಲಿ ನೆಲೆಗೊಂಡಿರುವ ಜಮುಗುರಿಯಲ್ಲಿರುವ ನಾಗ್ ಶಂಕರ್ ದೇವಾಲಯವು 4ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ದೇವಾಲಯವಾಗಿದೆ. ಇದನ್ನು ನಗಾಖದ ರಾಜ ನರಶಂಕರ್ ನಿರ್ಮಿಸಿದನು. 15 ( 1480ರಲ್ಲಿ) ನೇ ಶತಮಾನದಲ್ಲಿ ಅಹೊಮ್ ರಾಜ ಸು-ಸೆನ್-ಫಾ ಇದನ್ನು ರಿಪೇರಿ ಮಾಡಿದನು.
ಈ ದೇವಾಲಯದ...