ವಿದ್ಯಾಪತಿ ನಗರವು ಬಿಹಾರದ ದೇವ್ ಗರ್ ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟಿದ್ದು, ಇದು ಶಿವ ಭಕ್ತರ ಕೇಂದ್ರ ಯಾತ್ರಾಸ್ಥಳವಾಗಿದೆ. ಇದು ಗಂಗಾ ನದಿ ದಂಡೆಯ ಪಕ್ಕದಲ್ಲಿರುವ Dalsinghsarai block ನ ಸಮೀಪದಲ್ಲಿದೆ. ಪ್ರಖ್ಯಾತ ಮೈಥಿಲಿ ಕವಿ ವಿದ್ಯಾಪತಿಯ ತರುವಾಯ ಈ ಸ್ಥಳಕ್ಕೆ ವಿದ್ಯಾಪತಿ ನಗರ ಎಂಬ...
ಈ ಗ್ರಾಮಕ್ಕಿರುವ ಮತ್ತೊಂದು ಹೆಸರು ಪೈಥಾನ್ ಕಬಾಯಿ (Paithan Kabai) ಎಂದಾಗಿದೆ. ಈ ಗ್ರಾಮವು ದರ್ಭಾಂಗ ಜಿಲ್ಲೆಯ ಮನಿಗಚ್ಚಿ ಬ್ಲಾಕ್ ನಲ್ಲಿದ್ದು, ಅತಿಯಾಗಿ ಸಂದರ್ಶಿಸಲ್ಪಡುವ ಸ್ಥಳಗಳಲ್ಲೊಂದಾಗಿದೆ.
ಮುಶ್ರೀಘರರಿಯು ಸ್ಥಳೀಯರ ನಡುವೆ ಮತ್ತು ಪ್ರವಾಸಿಗರ ನಡುವೆಯೂ ಕೂಡ ತನ್ನ ವೈಭವೋಪೇತವಾದ ದುರ್ಗಾ ಪೂಜಾ ಆಚರಣೆಗಳಿಗಾಗಿ ಜನಪ್ರಿಯವಾಗಿದೆ. ಈ ಪ್ರದೇಶವು ಮೊಹರಂ ಅನ್ನೂ ಕೂಡ ಬಹು ಆದರದಿಂದ ಇದಿರುಗೊಳ್ಳುತ್ತದೆ.
ಮೊರ್ವಾರವು ಒಂದು ಸಣ್ಣ ಹಳ್ಳಿಯಾಗಿದ್ದು, ದರ್ಭಾಂಗದಿಂದ 40 ಕಿ.ಮೀ. ದೂರದಲ್ಲಿ ಮತ್ತು ರೋಸೇರ ದಿಂದ 21 ಕಿ. ಮೀ. ದೂರದಲ್ಲಿದೆ. ಈ ಸ್ಥಳಕ್ಕೆ ಭೇಟಿ ಕೊಡುವ ಯಾವೊಬ್ಬ ಸಂದರ್ಶಕನೇ ಆಗಿರಲಿ, ಮೋಡಿಗೆ ಒಳಗಾಗುತ್ತಾನೆ. ಕಾರಣ, ಈ ಗ್ರಾಮದಲ್ಲಿ ಚಿಲ್ವಾರ ಚೌರ್ ಲೇಕ್ (Chilwara Chaur Lake) ಎಂಬ...
ಸಮಸ್ತಿಪುರದಲ್ಲಿ ರೋಸೇರ ಘಾಟ್ ರೈಲ್ವೆ ನಿಲ್ದಾಣದಿಂದ 9 ಕಿ.ಮೀ. ದೂರದಲ್ಲಿ ಖಾರಹಿಯ (Kharahia) ಗ್ರಾಮವಿದೆ. ಈ ಸ್ಥಳಕ್ಕೆ "ಮಿನಿ ಕೊಲ್ಕತ್ತಾ" ಎಂಬ ಅಡ್ಡ ಹೆಸರಿದ್ದು, ಇದಕ್ಕೆ ಕಾರಣವೇನೆಂದರೆ, ಇಲ್ಲಿನ ಜನರು ಮೆಣಸನ್ನು ವಾಣಿಜ್ಯ ಬೆಳೆಯನ್ನಾಗಿ ಉತ್ಪಾದಿಸುತ್ತಾರೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಆಧುನಿಕ...
ಪುಸಾವು ರಾಜೇಂದ್ರ ಕೃಷಿ ವಿಶ್ವವಿದ್ಯಾನಿಲಯಕ್ಕಾಗಿ ಜಗದ್ವಿಖ್ಯಾತವಾಗಿದೆ. ಈ ಸ್ಥಳವು ಭಾರತದ ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು ರೈತ ನಾಯಕ ಪಂಡಿತ್ ಯಮುನಾ ಕರ್ಜೀ ಅವರು ಒಂದಾನೊಂದು ಕಾಲದಲ್ಲಿ ಇಲ್ಲಿಯೇ ವಾಸವಾಗಿದ್ದರು. ಪುಸಾ...
ಪುಸಾ ಬ್ಲಾಕ್ ನಲ್ಲಿಯೇ ಮಹಮದ ಗ್ರಾಮವು ತನ್ನ ಅಭಿವೃದ್ಧಿಶೀಲತೆಗೆ ಹೆಸರುವಾಸಿಯಾಗಿದ್ದು, ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಈ ಗ್ರಾಮವು ತನ್ನಲ್ಲಿರುವ ರಸಭರಿತವಾದ ಲಿಚಿ ಮತ್ತು ಮಾವಿನ ಹಣ್ಣುಗಳಿಗೆ ಅಂಗೀಕಾರಾರ್ಹವಾಗಿದೆ. ಈ ಗ್ರಾಮವು ಬುಧಿ ಗಂಡಕ್ ನದಿಯ ದಂಡೆಯ ಮೇಲಿದೆ.
ಬಸುವಾರಿ ಗ್ರಾಮವು ಪುಸಾ ದಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಒಂದು ಪಟ್ಟಣದ ರೂಪದಲ್ಲಿ ಇದು ರೈಲು ಮತ್ತು ಹೆದ್ದಾರಿಗಳ ಮೂಲಕ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಹಾಗೂ ತನ್ಮೂಲಕ ಮುಜಫರ್ಪುರ್, ಧರ್ಭಾಂಗ, ಮಧುಬನಿ ಮತ್ತು ಬಿಗುಸರಾಯ್ ಗಳಿಗೆ ಮತ್ತಷ್ಟು ಉತ್ತಮ ಸಂವಹನವನ್ನು...
ಕರಿಯನ್ (Kariyan) ಇದು ರೋಸೇರ ಘಾಟ್ ರೈಲ್ವೆ ನಿಲ್ದಾಣದ ಈಶಾನ್ಯ ಭಾಗದಲ್ಲಿದೆ. ಈ ಸ್ಥಳದಲ್ಲಿ 2 ನೆಯ ಮತ್ತು 6 ನೆಯ ಶತಮಾನಗಳಿಗೆ ಸೇರಿದ ಪ್ರಾಚ್ಯ ವಸ್ತುಗಳು ಲಭ್ಯವಿವೆ. ಕರಿಯನ್ ಪ್ರದೇಶಕ್ಕೆ ಧಾರ್ಮಿಕ ಮೌಲ್ಯವೂ ಇದೆ. ಕಾರಣ, ಇದು ಉದಯನಾಚಾರ್ಯರ ಜನ್ಮಸ್ಥಳವಾಗಿದ್ದು, ಇವರು ಭಗವಾನ್ ಶ್ರೀ...
ಧರ್ಭಾಂಗ ಜಿಲ್ಲೆಗೆ ಸಮೀಪವಿರುವ ಮಾಲಿನಗರ್ ಗ್ರಾಮವು ಭಗವಾನ್ ಶಿವನ ಪ್ರಾಚೀನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇಲ್ಲಿರುವ ಶಿವಲಿಂಗವು 5 ಅಡಿಗಳಷ್ಟು ಎತ್ತರವಿದ್ದು, ನೋಡಲು ಅತ್ಯದ್ಭುತವಾಗಿದೆ. ಶಿವ ಭಕ್ತರು, ಆರಾಧನೆಗಾಗಿ ಈ ದೇವಸ್ಥಾನಕ್ಕೆ ಭೇಟಿ ಇತ್ತರೆ, ದೂರದೂರುಗಳಿಂದ ಪ್ರವಾಸಿಗರು ತಮ್ಮ...
ಮಂಗಲ್ ಗಡ್ ವು ಸಮಸ್ತಿಪುರದ ಹಸನ್ ಪುರ ಬ್ಲಾಕ್ ಗೆ ಸೇರಿದ್ದು, ಇದು ದುಧ್ ಪುರ ದ ಸಮೀಪದಲ್ಲಿದೆ. ಈ ಸ್ಥಳದಲ್ಲಿಯೇ ಭಗವಾನ್ ಬುದ್ಧನು ಬೌದ್ಧಧರ್ಮವನ್ನು ಬೋಧಿಸಿದ್ದು, ರಾಜಾ ಮಂಗಲ್ ದೇವ್ ನ ಕೋರಿಕೆಯ ಮೇರೆಗೆ ಇಲ್ಲಿಯೇ ಕೆಲ ಕಾಲ ತಂಗಿದ್ದರು. ಭೌದ್ಧಧರ್ಮ ಕುರಿತಾದ ತತ್ವ ವಿಚಾರಗಳು ಈ ಸ್ಥಳವನ್ನು ಅನೇಕ...
ದಲ್ಸಿಂಗ್ ಸರಾಯ್ ವು ಸಮಷ್ಟಿಪುರ ಜಿಲ್ಲೆಯ ಒಂದು ಉಪವಿಭಾಗವಾಗಿದೆ. ಇಲ್ಲಿನ ಕೃಷಿ ಭೂಮಿಯಲ್ಲಿ ಬೆಳೆಸಲಾಗುವ ತರಕಾರಿಯು ಪ್ರವಾಸೋದ್ಯಮದ ಬಹು ಮುಖ್ಯ ಆಕರ್ಷಣೆಯಾಗಿದೆ. ಈ ಪ್ರದೇಶದಲ್ಲಿ ಬೆಳೆಯಲಾಗುವ ಕಾಲಿಫ್ಲವರ್, ಆಲೂಗೆಡ್ಡೆ, ಟೊಮೇಟೊ, ಮತ್ತು ಹಸಿರು ಸಾಗ್ ಬಲು ಪ್ರಸಿದ್ಧವಾಗಿವೆ. ದಲ್ಸಿಂಗ್...
ಭಕ್ರಿ ಬುಜುರ್ಗ್ (Bakhri Buzurg) ಪ್ರದೇಶವು ತಂಬಾಕು, ಜೋಳ, ಅಕ್ಕಿ, ಮತ್ತು ಗೋಧಿಯ ಯಥೇಚ್ಚ ಉತ್ಪಾದನೆಯಿಂದ ಹರಸಲ್ಫಟ್ಟಿದೆ. ಕಾರಣವೆಂದರೆ, ಇಲ್ಲಿನ ಭೂಮಿಯು ಅತ್ಯಂತ ಫಲವತ್ತಾದ ಮಣ್ಣಿನಿoದ ಕೂಡಿದೆ. ಭಕ್ರಿ ಬುಜುರ್ಗ್ ಪ್ರದೇಶವು ಮುಶ್ರೀಘರರಿ ಮುಖ್ಯ ಮಾರುಕಟ್ಟೆಯಿಂದ ಕೇವಲ 150 ಮೀ. ದೂರದಲ್ಲಿದೆ.
ಮಿಥಿಲಾಂಚಲ ಪ್ರದೇಶದಲ್ಲಿರುವ ಈ ಗ್ರಾಮವು ಅತ್ಯಂತ ಪ್ರಾಚೀನ ಗ್ರಾಮವಾಗಿದ್ದು, ತನ್ನ ಮನಸೂರೆಗೊಳ್ಳುವ ಹಸಿರಿನ ಪ್ರಕೃತಿಗೆ ಮನೆಮಾತಾಗಿದೆ. ತಿಸ್ವಾರ್, ಯಾಮೌರಿ ನದಿಯ ದಂಡೆಯ ಮೇಲಿದೆ.
ಬಸಂತ್ ಪಂಚಮಿಯ ಸಂದರ್ಭದಲ್ಲಿ, ಸುರೌಲಿಯ ಜನತೆಯು ಸರಸ್ವತಿ ಪೂಜೆಯನ್ನು ಬಹು ಅದ್ಧೂರಿಯಿಂದ ಆಯೋಜಿಸುತ್ತಾರೆ. ಈ ಸಂಭ್ರಮಾಚರಣೆಗೆ ಮತ್ತಷ್ಟು ಮೆರುಗನ್ನು ನೀಡಲು, ಈ ಗ್ರಾಮವು 3 ದಿನಗಳ ಮೇಳವೊoದನ್ನೂ ಕೂಡ ಆಯೋಜಿಸುತ್ತದೆ. ಮಾತ್ರವಲ್ಲದೆ, ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿತವಾದ ವೇದಿಕೆಯ ಮೇಲಿನ ಪ್ರದರ್ಶನವೂ...