ರೊಹ್ತಾಸ್ಗಡ್ ಕೋಟೆಯು ದೆಹ್ರಿಯ ದಕ್ಷಿಣ ಭಾಗದಲ್ಲಿದೆ ಇದು ಕೈಮುರ್ ಪ್ರದೇಶದಿಂದ 40 ಕಿಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ. ಈ ಪಟ್ಟಣವನ್ನು ಕಟ್ಟಿದ ರೊಹಿತಾಶ್ವನು ಪ್ರಸಿದ್ಧ ದೊರೆ ಹರಿಶ್ಚಂದ್ರನ ಮಗ. ರೊಹ್ತಾಸ್ಗಡ್ ಕೋಟೆ ಭಾರತದ ಪುರಾತನ ಕೋಟೆಗಳಲ್ಲೊಂದು. ಇದು ಸೋನೆ...
ಶೇರಗಡ್ ಕೋಟೆಯು ಸಸಾರಾಮ್ನಿಂದ 10 ಕಿಮೀ ದೂರದ ಚೆನಾರಿ ಪ್ರದೇಶದಲ್ಲಿದೆ. ಈ ಕೋಟೆಯನ್ನು ರೊಹ್ತಾಸ್ ಅನ್ನು ಶೇರ್ ಷಾ ಸೂರಿಯು ಆಕ್ರಮಿಸಿದ ಸಂದರ್ಭದಲ್ಲಿ ಕಟ್ಟಿಸಿದನಂತೆ. ಈ ಕೋಟೆಯನ್ನು ಸುರಕ್ಷತೆಗಾಗಿ ಕಟ್ಟಲಾಗಿದೆ. ಹಸನ್ ಖಾನ್ ಸು ಶೇರ್ ಷಾ ಸುರ್ನ ತಂದೆ ತನ್ನ ಜಾಗೀರು ಕೋಟೆ ಕಟ್ಟುವ ಮೂಲಕ ಸಂರಕ್ಷಿಸಿದ್ದನು. ಈ ಕೋಟೆಯು...
ತಾರಾಚಾಂದಿ ಬೆಟ್ಟಗಳು ಚಂದನ್ ಷಾಹಿದ್ ಬೆಟ್ಟದಿಂದ 1 ಕಿಮೀ ದೂರದಲ್ಲಿದೆ. ಇಲ್ಲಿ ತಾರಾಚಾಂದಿ ಎನ್ನುವ ದೇವಿಯ ದೇವಾಲಯವಿದೆ. ಇಲ್ಲಿನ ಚಂಡಿ ದೇವಾಲಯದ ಸಮೀಪ ಪ್ರತಾಪ್ ಧವಲ್ನ ಸಣ್ಣ ಶಿಲಾ ಶಾಸನವಿದೆ. ಹಿಂದೂಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಆರಾಧನೆಗಾಗಿ ಬರುತ್ತಾರೆ.
ಈ ಎರಡೂ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳು ಸುಂದರ ಪ್ರಾಕೃತಿಕ ಪ್ರವಾಸಿ ತಾಣಗಳಾಗಿವೆ. ಇವು ಈ ಜಿಲ್ಲೆಯ ಚೆನಾರಿ ಭಾಗದಲ್ಲಿದೆ.
ಇಲ್ಲಿ ಪ್ರಸಿದ್ಧ ದುರ್ಗಾ ಮಾತೆಯ ದೇವಾಲಯವಿದೆ. ಇದನ್ನು “ಯಕ್ಷಿಣಿ ಭಗವತಿ” ಎಂದು ಕರೆಯುತ್ತಾರೆ. ಇಲ್ಲಿ “ಶಿರಾಕ್ ಬಹನ್ಖಾಂಡಿ ಮಹದೇವನ್” ಎನ್ನುವ ಪುರಾತನ ದೇಗುಲವಿದೆ. ಇದು ಬಿಕರಂಗಂಜ್ನ ಉಪ ವಿಭಾಗದ ದಿನಾರ ಲ್ಲಾಕ್ನಿಂದ 7ಕಿಮೀ ದೂರದಲ್ಲಿದೆ. ಇಲ್ಲಿಗೆ ದೇವಿಯನ್ನು ಆರಾಧಿಸಲು ಭಕ್ತಾದಿಗಳು...
ದೇವ ಮಾರ್ಕಂಡೇಯ ಎನ್ನುವುದು ಸಣ್ಣ ಹಳ್ಳಿ ಇಲ್ಲಿ ವಿಷ್ಣು ಮತ್ತು ಸೂರ್ಯನ ದೇವಾಸ್ಥಾನವಿದೆ. ಇಲ್ಲಿ ಎಲ್ಲ ಸಮಯಗಳಲ್ಲೂ ಭಕ್ತಾದಿಗಳನ್ನು ಕಾಣಬಹುದು. ಇದು ಅಸಂಖ್ಯ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮತ್ತು ಭಕ್ತಾದಿಗಳನ್ನು ಸೆಳೆಯುತ್ತದೆ. ಈ ಹಳ್ಳಿಯು ನಸಿರ್ಗಂಜ್ನ ಉತ್ತರ ಭಾಗದಲ್ಲಿದೆ.
ಚಾಚಾ ಫಗುಮಲ್ ಸಾಹಿಬ್ಜಿ ಕಾ ಗುರುದ್ವಾರವು ಸಸಾರಾಂನಲ್ಲಿದೆ. ಇದು ಸಿಖ್ ಸಮುದಾಯದ ಧಾರ್ಮಿಕ ಸ್ಥಳ. ಇಲ್ಲಿನ ಧರ್ಮಸಹಿಷ್ಣುತಾ ವಾತಾವರಣವನ್ನು ನೋಡುವ ಸಲುವಾಗಿ ಇಲ್ಲಿಗೆ ಭೇಟಿ ನೀಡಬೇಕು.
ಸಸಾರಾಮ್ ದೆಹ್ರಿಯಿಂದ ಪಶ್ಚಿಮಕ್ಕೆ 17ಕಿಮೀ ದೂರದಲ್ಲಿದೆ. ಇಲ್ಲಿ ಭಾರತದ ಎರಡನೇ ಅತಿದೊಡ್ಡ ಗುಮ್ಮಟ ಶೇರ್ ಷಾ ಸುರಿ ಗುಮ್ಮಟವಿದೆ. ಮೊಗಲರ ಕಾಲದ ವಾಸ್ತುಶಿಲ್ಪ ಶೈಲಿಯ ಅತ್ಯತ್ತಮ ಉದಾಹರಣೆ ಈ ಗುಮ್ಮಟ. ಇದು ಪಠಾಣ್ ವಾಸ್ತುಶೈಲಿಯನ್ನು ಪ್ರದರ್ಶಿಸುತ್ತದೆ. ಇದನ್ನು ಕಲ್ಲುಗಳಿಂದ ಕಟ್ಟಲಾಗಿದೆ. ಇದು ಪ್ರಮುಖ ಪ್ರವಾಸಿ...
ಅಖೋರಿಗೋಲ, ರೊಹ್ತಾಸನಲ್ಲಿನ ಕೈಮಗ್ಗದ ಕಾರ್ಖಾನೆಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುಂದರ ಕಂಬಳಿಗಳನ್ನು ನೇಯಲಾಗುತ್ತದೆ. ಇವುಗಳನ್ನು ನೋಡಿದಾಗ ಇದನ್ನು ಕೊಳ್ಳದೆ ಇರಲು ಸಾಧ್ಯವಿಲ್ಲ. ಈ ಸ್ಥಳವು ದನಗಳ ಮೇಳಕ್ಕೆ ಪ್ರಸಿದ್ಧಿ ಪಡೆದಿದೆ.
ಧರ್ಕಾಲಂಧವು ಸಂತ ದರಿಯಾದಾಸನಿಗೆ ಸೇರಿದ್ದು. ಇದೊಂದು ಪ್ರಸಿದ್ಧ ಮಠ. ಈ ಸಂತನನ್ನು ಈತನ ಕೊಡುಗೆಗಾಗಿ ಗೌರವಿಸಲಾಗುತ್ತದೆ ಮತ್ತು ಕಾಸಿರ್ ಮತ್ತು ದಡುರ ಸಾಲಿನಲ್ಲಿ ಗುರುತಿಸಲಾಗುತ್ತದೆ. ಬಹುಶಃ ಈತ ಈ ಜಿಲ್ಲೆಯ ಮೊದಲ ಸಂತ ಸಾಹಿತಿ. ಈತನು ಹಲವು ಧಾರ್ಮಿಕ ಪುಸ್ತಕಗಳು ಮತ್ತು ಇತರ ಪುಸ್ತಕಗಳಿಗಾಗಿ ನೆನಪಿಸಿಕೊಳ್ಳಲಾಗುತ್ತದೆ.
ಅಕ್ಬರಪುರವು ಮಧ್ಯಕಾಲೀನ ಇತಿಹಾಸ ಪ್ರಿಯರಿಗೆ ಪ್ರಿಯವಾದ ಸ್ಥಳ. ಇದು ಕೈಮುರ್ ಬೆಟ್ಟಗಳ ತಪ್ಪಲಿನಲ್ಲಿದೆ. ಇದು ರೊಹ್ತಾಸ್ಗರ್ನಿಂದ 5 ಕಿಮೀ ದೂರದಲ್ಲಿದೆ. ಮೊಗಲರ ದೊರೆ ಅಕ್ಬರನ ನೆನಪಿಗೆ ಈ ಊರಿಗೆ ಅಕ್ಬರಪುರವೆಂದು ಹೆಸರಿಡಲಾಗಿದೆ. ಇದು ರೊಹ್ತಾಸ್ ಕೇಂದ್ರಕಛೇರಿಯ ಸಮೀಪದಲ್ಲಿದೆ. ಇಲ್ಲಿ ಮಲಿಕ್ ವಿಶಾಲ್ ಖಾನನ ಗುಮ್ಮಟವಿದೆ....
ದೆಹ್ರಿ ಸೊನೆ ನದಿಯ ದಂಡೆಯಲ್ಲಿ 99 ಮೀಟರ್ಗಳಷ್ಟಿದೆ. ಐತಿಹಾಸಿಕವಾಗಿ ದೆಹ್ರಿಯು ಬ್ರಿಟೀಷರ ಕಾಲದಲ್ಲಿ ಸೈನಿಕರು ಕೊಲ್ಕತ್ತಾದಿಂದ ದೆಹಲಿಗೆ ಹೋಗುವಾಗ ಸೋನೆ ನದಿಯನ್ನು ದಾಟುವ ಹಾದಿಯಲ್ಲಿ ವಿಶ್ರಾಂತಿ ಪಡೆಯಲು ಕ್ಯಾಂಪ್ ಹಾಕುತ್ತಿದ್ದ ಸ್ಥಳವಾಗಿತ್ತು. ಈ ಕ್ಯಾಂಪನ್ನು ಪರಾಒ ಎಂದು ಕರೆಯಲಾಗುತ್ತಿತ್ತು. ದೆಹ್ರಿ ಎಂದರೆ ಕೆಳಗಿನ...