ಮುಂಗೇರಿನ ಪ್ರಮುಖ ಆಕರ್ಷಣೆ ಈ ಕೋಟೆ. ಇದನ್ನು ಸ್ಲವೆ ವಂಶಸ್ಥರ ಕಾಲದಲ್ಲಿ ಕಟ್ಟಲಾಗಿದೆ. ಇದನ್ನು ನಿರ್ಮಿಸಲಾದ ಕಾಲದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಈ ಕೋಟೆಯು ಕರ್ಣಚೌರ ಎನ್ನುವ ಎರಡು ಬೆಟ್ಟಗಳನ್ನು ಹೊಂದಿದೆ. ಆಯತಾಕಾರದಲ್ಲಿರುವ ಈ ದಿಬ್ಬವು ಒಂದು ಕಾಲದಲ್ಲಿ ನಗರದ ಮುಖ್ಯ ಕೇಂದ್ರಸ್ಥಾನವಾಗಿತ್ತು. ಈ ಕೋಟೆಯು ತುಘಲಕರು,...
ಕಸ್ತಾರನಿ ಘಾಟ್ನ ಉಲ್ಲೇಖವನ್ನು ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಇದರ ಪ್ರಕಾರ ರಾಮ ಲಕ್ಷ್ಮಣರು ರಾಕ್ಷಸನಾದ ತಾರಕನನ್ನು ಕೊಂದ ನಂತರ ಹಿಂತಿರುಗುವ ಹಾದಿಯಲ್ಲಿ ಈ ಪ್ರದೇಶದಲ್ಲಿ ವಿಶ್ರಮಿಸಿದ್ದರಂತೆ. ರಾಮ ಸೀತೆಯನ್ನು ವಿವಾಹವಾದ ನಂತರ ಮಿಥಿಲೆಯಿಂದ ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಈ ಘಾಟಿನ ಮೂಲಕ ಹಾದು ಹೋಗುವಾಗ...
ಸೀತಾ ಕುಂಡ ಒಂದು ಬಿಸಿನೀರಿನ ಬುಗ್ಗೆ. ವರ್ಷಪೂರಾ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವರಾದರೂ ಮಾಘ ಪೌರ್ಣಿಮೆ ಇಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಜಾನಪದ ಕತೆಯ ಪ್ರಕಾಋ ಸೀತೆ ಅಗ್ನಿಕುಂಡದಿಂದ ಹೊರಬಂದ ನಂತರ ದೇಹದ ಬಿಸಿಯನ್ನು ಕಳೆದುಕೊಳ್ಳಲು ಈ ಕುಂಡದಲ್ಲಿ ಸ್ನಾನ ಮಾಡಿದ್ದಳಂತೆ. ಈ ಜಾಗದ ಮತ್ತೊಂದು ವಿಶೇಷತೆಯೆಂದರೆ ಈ...
ಇದು ಕಸ್ತಾರಿಣಿ ಘಾಟಿನ ಸಮೀಪದಲ್ಲಿದೆ. ಇಲ್ಲಿನ ಬಂಡೆಯೊಂದರಲ್ಲಿ ಎರಡು ಪಾದದ ಗುರುತುಗಳನ್ನು ಕಾಣಬಹುದು. ಇವು ಸೀತೆ ಯ ಹೆಜ್ಜೆಗುರುತುಗಳು ಎಂದು ಹೇಳಲಾಗುತ್ತದೆ. ಗಂಗೆಯನ್ನು ದಾಟುವಾಗ ಆಕೆ ಈ ಕಲ್ಲಿನ ಮೇಲೆ ಕಾಲಿಟ್ಟದ್ದಳಂತೆ. ಈ ಬಂಡೆಯು 250 ಮೀಟರ್ ಎತ್ತರ ಮತ್ತು 30 ಮೀಟರ್ ಅಗಲವಿದೆ. ಇಲ್ಲೊಂದು ಸಣ್ಣ ದೇವಾಲಯ ಕೂಡ ಇದೆ.
ಕಾಳಿ ಮಾತೆಯ ಈ ಬೆಟ್ಟ ಪ್ರಸಿದ್ಧವಾದದ್ದು. ಸ್ಥಳ ಪುರಾಣಗಳ ಪ್ರಕಾರ ಈ ಬೆಟ್ಟವು ಆಕೆಯ ದೈವಿಕ ಶಕ್ತಿಯ ಪ್ರತೀಕ. ಇದೊಂದು ಒಳ್ಳೆಯ ಪಿಕ್ನಿಕ್ ತಾಣ.
ಶ್ರೀ ಕೃಷ್ಣ ವಾಟಿಕವನ್ನು ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿನ್ಹಾರ ನೆನಪಿಗೆ ಅರ್ಪಿಸಲಾಗಿದೆ. ಇದು ಕ್ಷತತಾರಿಣಿ ಘಾಟಿನ ಎದುರಿನಲ್ಲಿದೆ. ಇಲ್ಲಿಂದ ದೇವನದಿ ಗಂಗೆಯ ನರ್ತನ ಮತ್ತು ಸುತ್ತಲ ಹಸಿರು ಸೌಂದರ್ಯವನ್ನು ಸವಿಯಬಹುದು.
ಬಿಹಾರದ ಯೋಗಶಾಲೆಯನ್ನು 1964ರಲ್ಲಿ ಸ್ವಾಮಿ ಸತ್ಯಾನಂದರು ಸ್ಥಾಪಿಸಿದರು. ಪ್ರಪಂಚದಾದ್ಯಂತ ಈ ಯೋಗ ತರಬೇತಿ ಶಾಲೆ ಪ್ರಸಿದ್ಧವಾಗಿದೆ. ಈ ಶಾಲೆ ಯೋಗ ಮತ್ತು ಅದರಿಂದುಂಟಾಗುವ ವ್ಯಕ್ತಿತ್ವ ವಿಕಸನದ ಪರಿಯನ್ನು ಭೋದಿಸುತ್ತದೆ. ಈ ಸುಂದರ ಶಾಲೆಯು ಗಂಗಾ ನದಿಯ ತೀರದಲ್ಲಿದ್ದು ಪ್ರಪಂಚದ ಎಲ್ಲ ಮೂಲೆಗಳಿಂದ ವಿದ್ಯಾರ್ಥಿಗಳನ್ನು...
ಋಷಿಕುಂಡವು ಒಂದು ಬಿಸಿನೀರಿನ ಬುಗ್ಗೆ. ಇದು ಸೀತಾ ಕುಂಡದಿಂದ 6 ಕಿಮೀ ದೂರದಲ್ಲಿ ಖರ್ಗಾಪುರ ಬೆಟ್ಟಗಳ ಎರಡು ಸೇತುವೆಗಳ ನಡುವಿನಲ್ಲಿದೆ. ಈ ಸ್ಥಳವು ಜಲಾಶಯದ ನೀರಿನಿಂದ ನೆರವು ಪಡೆದುಕೊಳ್ಳುತ್ತದೆ. ಪಶ್ಚಿಮ ಭಾಗದಲ್ಲಿನ ಸೇತುವೆಯಿಂದ ಈ ಕುಂಡದಿಂದ ಏಳುವ ಬುಗ್ಗೆಗಳನ್ನು ಕಾಣಬಹುದು. ಇವು ಅನಿಲ ಗುಳ್ಳೆಗಳ ಹಾಗೆ ತೋರುತ್ತವೆ.
ಮುಂಗೇರಿನ ಸುಂದರವಾದ ಸರೋವರಗಳಲ್ಲಿ ಇದು ಕೂಡ ಒಂದು. ಇಲ್ಲಿದ್ದ ಸರೋವರನ್ನು ಮಹಾರಾಜ ದರ್ಭಾಂಗರು ಜಲಾಶಯವನ್ನು ಕಟ್ಟಿಸಿ ಇನ್ನಷ್ಟು ಸುಂದರಗೊಳಿಸಿದರು.
ಮುಲ್ಲಾ ಮೊಹಮದ್ ಸಯ್ಯದ್ ಸಮಾಧಿಯು ಔರಂಗಜೇಬನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ಮುಲ್ಲಾ ಮೊಹಮದ್ ಸಯ್ಯದ್ನದು. ಈತನ ಕಾವ್ಯ ನಾಮ ‘ಅಶ್ರಫ್’. ಈತ ಮೆಕ್ಕಾಗೆ ಹೋಗುವ ದಾರಿಯಲ್ಲಿ 1672ರಲ್ಲಿ ಮರಣ ಹೊಂದಿದ.
ಮುಂಗೇರದ ಭೀಮ್ಬಂದ್ ವನ್ಯಜೀವಿಧಾಮವು ದೇಶಾದ್ಯಂತ ತನ್ನ ಸಸ್ಯ ಮತ್ತು ಜೀವ ವೈವಿಧ್ಯಕ್ಕಾಗಿ ಹೆಸರುವಾಸಿಯಾಗಿದೆ. ಇದು ಮುಂಗೇರದ ನೈಋತ್ಯ ಭಾಗದಲ್ಲಿರುವ ಖರ್ಗಾಪುರ ಬೆಟ್ಟದ ಮೇಲಿದೆ. ಇಲ್ಲಿ ಹುಲಿ, ಕರಡಿ, ನಿಲಗೈ, ಕತ್ತೆಕಿರುಬ, ಪೈತಾನ್ ಮತ್ತು ಜಿಂಕೆಗಳಿವೆ. ಇದರೊಂದಿಗೆ ಇಲ್ಲಿ ಹುಲ್ಲುಗಾವಲಿನ ಬಯೋಮಿ ಮತ್ತು ಕಾಡಿನ...
ಮುಂಗೇರದಿಂದ ಪೂರ್ವಕ್ಕೆ 3 ಮೈಲಿ ದೂರದಲ್ಲಿ ಪೀರ್ಪಹಾರ್ ಬೆಟ್ಟಗಳಿವೆ. ಬೆಟ್ಟದ ಮೇಲೆ ನಿಂತು ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಬೆಟ್ಟದ ಮೇಲೆ ಒಬ್ಬ ಅಜ್ಞಾತ ಮೊಹಮದಿಯ ಸಂತನ ಸಮಾಧಿಯಿದೆ. ಜನ ಇಲ್ಲಿಗೆ ತಮ್ಮ ಭಕ್ತಿಗೌರವಗಳನ್ನು ಸಲ್ಲಿಸಲು ಬರುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಎರಡು...
ಪೀರ್ ಷಾ ನಫ ಗೋಪುರವು 1177ರಲ್ಲಿ ಮುಂಗೇರ್ ಕೋಟೆಯ ದಕ್ಷಿಣ ದ್ವಾರದಲ್ಲಿ ಕಟ್ಟಲಾಗಿದೆ. ಇದು ಸೂಫಿ ಸಂತನ ನೆನಪಿಗಾಗಿ ಕಟ್ಟಿದ್ದು. ಈತನನ್ನು ಪರ್ಷಿಯಾದಿಂದ ಅಜಮೇರದ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯು ಮುಂಗೇರ್ಗೆ ಕಳಿಸಿದನು. ಈ ಗೋಪುರವು 16 ಅಡಿ ಎತ್ತರವಿದ್ದು ವೃತ್ತಾಕಾರದ ಗೋಪುರಗಳನ್ನು ಹೊಂದಿದೆ. ಇದರಲ್ಲಿ ವಿಶ್ರಾಂತಿ...
ಉಚೇಶ್ವರನಾಥ ದೇವಾಲಯವು ಖರ್ಗಾಪುರ ಪ್ರದೇಶದಲ್ಲಿನ ಶಿವನಿಗೆ ಮೀಸಲಾದ ಸ್ಥಳ. ಇಲ್ಲಿನ ಸಂತಾಲ್ ಬುಡಕಟ್ಟಿನವರಿಗೆ ಈ ಸ್ಥಳವು ಮಹತ್ವವಾದದ್ದು. ಇಲ್ಲಿ ಜಾತ್ರೆಗಳು ನಡೆಯುತ್ತವೆ ಮತ್ತು ಇದರಲ್ಲಿ ಸಂತಾಲ್ ಹುಡುಗರು ಮತ್ತು ಹುಡುಗಿಯರು ತಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಗುತ್ತಾರೆ.
ಗೊಯೆಂಕ ಶಿವಾಲಯವು ಶಿವನ ದೇವಾಲಯಗಳಲೆಲ್ಲ ಹೆಸರುವಾಸಿಯಾದದ್ದು. ಇದೊಂದು ಪುರಾತನ ಹಿಂದೂ ಯಾತ್ರಾಸ್ಥಳ. ಈ ದೇವಾಲಯವನ್ನು ದೊಡ್ಡ ನೀರಿನ ಕೊಳದ ನಡುವೆ ಕಟ್ಟಲಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ಕಾಣಬಹುದು. ಅವುಗಳು ಆಟವಾಡುತ್ತಿರುವುದನ್ನು ನೋಡುವುದೇ ಚೆಂದ. ಇದರ ಸುತ್ತಲೂ ಹಸಿರು ತುಂಬಿದ ಸುಂದರ ಉದ್ಯಾನವನಗಳಿವೆ....