ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್ ಈ ದೊಡ್ಡದಾದ ಸರೋವರವನ್ನು 1646 ರಲ್ಲಿ ನಿರ್ಮಿಸಲಾಯಿತು. ಹದಿನಾರು ಏಕರೆ ವ್ಯಾಪ್ತಿಯುಳ್ಳ ಈ ಸರೋವರವನ್ನು ತಿರುಮಲೈ ನಾಯಕ್ ಅವರು ಬಹುಕಾಳಜಿಯಿಂದ ನಿರ್ಮಿಸಿದರು. ಮೀನಾಕ್ಷಿ ದೇವಸ್ಥಾನದ ಪೂರ್ವದಿಂದ ಐದು ಕೀ.ಮಿ ದೂರದಲ್ಲಿ ಈ ಸರೋವರ ಇದೆ.
ಈ ಸರೋವರದ ಮಧ್ಯಭಾಗದಲ್ಲಿ ಗಣೇಶ ಅಥವಾ ವಿನಾಯಕ ದೇವರ ಸುಂದರವಾದ ವಿಗ್ರಹವಿದೆ. ಈ ವಿಗ್ರಹವನ್ನು ಸುಂದರವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ತಿರುಮಲೈ ನಾಯಕರ್ ಅರಮನೆಯನ್ನು ನಿರ್ಮಿಸುವಾಗ ಇಟ್ಟಿಗೆಗಳ ಅವಶ್ಯಕತೆ ಇತ್ತು. ಅದಕ್ಕಾಗಿ ಈ ಸರೋವರ ಇರುವ ಸ್ಥಳವನ್ನು ಉತ್ಖನನ ಮಾಡಿದಾಗ ಇಲ್ಲಿ ಇಟ್ಟಿಗೆಗಳ ಬದಲಾಗಿ ನೀರಿನ ಸೆಲೆ ಗೋಚರವಾಯಿತಂತೆ. ಹೀಗಾಗಿ ಇಲ್ಲಿ ತಿರುಮಲೈ ನಾಯಕ್ ಅವರು ತುಂಬಾ ವ್ಯವಸ್ಥಿತವಾಗಿ ಈ ಸರೋವರವನ್ನು ನಿರ್ಮಿಸಿ, ಗಣೇಶನಿಗೆ ಅರ್ಪಿಸಿದರು ಎಂಬ ನಂಬಿಕೆ ಇದೆ.
ಇಲ್ಲಿ ಬಹು ಪ್ರಸಿದ್ದವಾದ ತೆಪ್ಪಾಕುಲಮ ತೆಪ್ಪದ ಉತ್ಸವವನ್ನು ಪ್ರತಿ ವರ್ಷದ ಜನೇವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಈ ಸರೋವರದಲ್ಲಿ ಆಚರಿಸಲಾಗತ್ತದೆ. ಈ ಸರೋವರಕ್ಕೆ ನೀರು ವೈಗೈ ನದಿಯಿಂದ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ಈ ಸುಂದರವಾದ ದೊಡ್ಡದಾದ ಸರೋವರವು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.