ಮೀನಾಕ್ಷಿ ಆಮ್ಮನ್ ದೇವಸ್ಥಾನ ಅಥವಾ ಮೀನಾಕ್ಷಿ ದೇವಸ್ಥಾನವು ಮಹಾದೇವನಾದ ಶಿವ ಮತ್ತು ಮಹಾದೇವಿಯಾದ ಪಾರ್ವತಿಗೆ ಮೀಸಲಾಗಿರುವ ದೇವಸ್ಥಾನವಾಗಿದೆ.ಪಾರ್ವತಿಗೆ ಮೀನಾಕ್ಷಿ ಎಂಬ ಹೆಸರು ಇದೆ. ಈ ದೇವಸ್ಥಾನವು ಭಾರತದ ಮತ್ತು ಮಧುರೈ ನಗರದ ಅತ್ಯಂತ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇದು ಧಾರ್ಮಿಕ ತಾಣವಾಗಿಯು ನಗರ ಮತ್ತು ದೇಶದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.
ಪುರಾಣಗಳ ಪ್ರಕಾರ, ಶಿವನು ವಿವಾಹವಾಗುವ ಇಚ್ಚೆಯನ್ನು ತಳೆದನು. ಆಗ ವಧುವಾದ ದೇವತೆಯ ನಗರವು ಮಧುರೈ ಆಗಿತ್ತು. ಪಾರ್ವತಿಯನ್ನು ಮದುವೆಯಾಗುವ ಉದ್ದೇಶದಿಂದ ಶಿವನು ಮಧರೈ ನಗರಕ್ಕೆ ಭೇಟಿ ನೀಡಿದನು ಎಂಬ ನಂಬಿಕೆ ಇದೆ. ವೈಗೈ ನದಿಯ ದಕ್ಷಿಣ ತೀರದಲ್ಲಿ ಈ ಪ್ರಸಿದ್ಧ ದೇವಾಲಯವನ್ನು ಕಾಣಬಹುದು. ಇದನ್ನು ಕ್ರಿಸ್ತ ಶಕ 1600 ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು. ಆದರೆ ದೇವಸ್ಥಾನದ ಇಂದಿನ ರೂಪವನ್ನು ಪುನರ್ ನಿರ್ಮಿಸಿದ್ದು ನಾಯಕ್ ರಾಜವಂಶದವರು.
ಈ ದೇವಸ್ಥಾನವನ್ನು ಆರು ಹೇಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು , ಹನ್ನೆರಡು ಪ್ರಮುಖ ದ್ವಾರಗಳನ್ನು ಹೊಂದಿದೆ. ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಕಲೆಯಿಂದಾಗಿ ಈ ದೇವಸ್ಥಾನವು ವಿಶ್ವಖ್ಯಾತಿಯನ್ನು ಗಳಿಸಿದೆ. ಇಲ್ಲಿನ ಪ್ರಮುಖ ದ್ವಾರಗಳು 45 -50 ಮೀಟರಗಷ್ಟು ಎತ್ತರವಿದ್ದು ಅದರ ಮೇಲೆ ದೇವ ಮತ್ತು ದೇವತೆಗಳ ಕೆತ್ತಿರುವ ಚಿತ್ರಗಳಿವೆ.ಈ ದೇವಸ್ಥಾನದಲ್ಲಿ 985 ಕಂಬಗಳು ಮತ್ತು 14 ಗೋಪುರಗಳಿವೆ.