ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗ ನಾರಾಯಣಪುರದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ನಾವು ನೋಡಬಹುದು. ಅವುಗಳಲ್ಲಿ ಒಂದು ಸವ್ಕುಚಿ ಹಳ್ಳಿಯಲ್ಲಿರುವ ರಾಧಾ ಪುಖುರಿ. ಪ್ರಸ್ತುತ ಇದನ್ನು ಅಸ್ಸಾಂ ಸರ್ಕಾರದ ಮೀನುಗಾರಿಕೆ ಅಭಿವೃದ್ಧಿ ನಿಗಮದವರು ಮೀನಿನ ಸಂತಾನೋತ್ಪತಿ ಕೇಂದ್ರವಾಗಿ ಬಳಸುತ್ತಿದ್ದಾರೆ.
ನಂಬಿಕೆಗಳ ಪ್ರಕಾರ ಇದನ್ನು 1400 ರಿಂದ 1500ರ ನಡುವೆ ನಿರ್ಮಿಸಿರಬಹುದೆಂದು ಭಾವಿಸಲಾಗಿದೆ. ಆದರೂ ಸಹ ನಿಖರವಾಗಿ ಇದೇ ವರ್ಷ ನಿರ್ಮಾಣ ಮಾಡಲಾಯಿತು ಎಂದು ಹೇಳಲು ಸಾಧ್ಯವಾಗಿಲ್ಲ. ರಾಧಾ ಪುಖುರಿಯನ್ನು ರಾಜ ಲಕ್ಷ್ಮೀ ನಾರಾಯಣನು ನಿರ್ಮಿಸಿ, ಇದಕ್ಕೆ ತನ್ನ ಮಡದಿ ’ರಾಧಾ’ಳ ಹೆಸರನ್ನು ಇಟ್ಟನೆಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಇದನ್ನು ರಾಣಿ ಸರ್ಬೇಶ್ವರಿ ನಿರ್ಮಿಸಿದಳೆಂದು ತಿಳಿಸುತ್ತಾರೆ.
ರಾಧಾ ಪುಖುರಿಯು ಸಂಕ್ಷಿಪ್ತವಾಗಿ ಆಧಾಪುಖುರಿ ಎಂದು ಕರೆಯಲ್ಪಡುತ್ತದೆ. ’ಆಧಾ’ ಎಂದರೆ ಅರ್ಧ ಎಂದರ್ಥ. ಏಕೆಂದರೆ ಇದರ ನಿರ್ಮಾಣವು ಅರ್ಧಕ್ಕೆ ಬಂದಕ್ಕೆ ನಿಲ್ಲಿಸಲಾಯಿತು. ನಂತರ ಇದನ್ನು ತಕ್ಷಣ ರಾಧಾಪುಖುರಿಗೆ ಬದಲಾಯಿಸಲಾಯಿತು.
ನಾರಾಯಣಪುರ್ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ರಾಧಾಪುಖುರಿಯನ್ನು ನೋಡಲು ಬಯಸುವವರು ನಾರಾಯಣಪುರಕ್ಕೆ ತಲುಪಿ ಅಲ್ಲಿಂದ ಸಾಗಬಹುದು. ನಾರಾಯಣಪುರಕ್ಕೆ ಉದ್ಯಾನವನದಿಂದ ಒಂದು ಗಂಟೆಯ ಅವಧಿಯ ಪ್ರಯಾಣಾವಧಿ ತಗುಲುತ್ತದೆ.