ರಾಯ್ ಕಾ ಬಾಗ್ ಅರಮನೆಯು ರಾಯ್ ಕಾ ಬಾಗ್ ರೈಲ್ವೇ ಸ್ಟೇಷನ್ ಸಮೀಪವಿದೆ. ಇದು 1663 ರಲ್ಲಿ ಒಂದನೇ ಜಸ್ವಂತ್ ಸಿಂಗ್ರ ರಾಣಿ ಹಾದಿಜಿಯವರಿಂದ ನಿರ್ಮಿಸಲ್ಪಟ್ಟಿತು. ಈ ಅರಮನೆಯು ರಾಜ ಎರಡನೇ ಜಸ್ವಂತ್ ಸಿಂಗ್ಗೆ ಅತ್ಯಂತ ಪ್ರಿಯವಾದದ್ದಾಗಿತ್ತು. ಅರಮನೆಯ ಸಾರ್ವಜನಿಕ ಮೈದಾನವು 1883 ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರು ಜೋಧ್ಪುರಕ್ಕೆ ಬಂದಾಗ ಬಳಸಲಾಗಿತ್ತು. ಐತಿಹ್ಯಗಳ ಪ್ರಕಾರ, ಈ ಪ್ರದೇಶದಲ್ಲೇ ರಾಜನು ಸಂತರಿಂದ ವಚನಗಳನ್ನು ಆಲಿಸುತ್ತಿದ್ದರಂತೆ. ಸದ್ಯ ಈ ಅರಮನೆಯು ಜೋಧ್ಪುರದ ಇನ್ಕಮ್ ಟ್ಯಾಕ್ಸ್ ಕಚೇರಿಯಾಗಿದೆ.