ದೇವಿ ಚೌಡೇಶ್ವರಿ ದೇವಾಲಯದ ನೆಲೆಯಾಗಿದೆ ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಇದಾಗಿದೆ. ಈ ದೇವಾಲಯದಿಂದಾಗಿಯೇ ಸಿಗಂಧೂರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲದೆಯೂ ಈ ಸ್ಥಳವು ಅತ್ಯಂತ ಪ್ರಸಿದ್ಧವೆನಿಸಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ದೇವಿ ಚೌಡೇಶ್ವರಿಯು ಈ ಸ್ಥಳದಲ್ಲಿ ಯಾವುದೇ ಕಳ್ಳತನ ಸುಲಿಗೆಗಳಂತಹ ಅಪರಾಧಗಳಾಗದಂತೆ ಕಾಪಾಡುತ್ತಾಳೆ ಎನ್ನಲಾಗುತ್ತದೆ. ಬೃಹತ್ ರಚನೆಯನ್ನು ಹೊಂದಿರುವ ಈ ದೇವಾಲಯದಲ್ಲಿ ಸಂಕ್ರಾಂತಿಯ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ.
ಬೇರೆ ಬೇರೆ ವಲಯಗಳಿಂದ ಹಲವಾರು ಭಕ್ತರು ಸಂಕ್ರಾಂತಿಯ ಸಂದರ್ಭದಲ್ಲಿ ಸಿಗಂಧೂರು ಪಟ್ಟಣದಲ್ಲಿ ಸೇರುತ್ತಾರೆ. ಈ ದೇವಾಲಯಕ್ಕೆ ಬರುವವರ ಸಂಖ್ಯೆಯು ಅಪಾರವಾದ್ದರಿಂದ ಇಲ್ಲಿಗೆ ಬರಲು ಆಸಕ್ತಿಯಿರುವವರು ಪ್ರವೇಶ ಕೂಪನ್ ಅನ್ನು ಪಡೆಯಬೇಕು. ಇಲ್ಲಿ ಮೊದಲು ಬಂದವರಿಗೆ ಮೂದಲು ಆದ್ಯತೆ ನೀಡಲಾಗುತ್ತದೆ. ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುವಾಗ ಶರಾವತಿ ನದಿ ಹಾಗೂ ಕಾಡನ್ನು ದಾಟಿ ಬರಬೇಕು. ಈ ಪ್ರಯಾಣವು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ.